<p><strong>ಬೆಂಗಳೂರು:</strong>ಸರ್ಕಾರದ ಬೆದರಿಕೆ–ಮನವೊಲಿಕೆಗೆ ಮಣಿಯದೇ ಆರು ದಿನಗಳಿಂದ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರು ಸೋಮವಾರ ತಮ್ಮ ಹೋರಾಟ ತೀವ್ರಗೊಳಿಸಿದರು. ರಾಜ್ಯದ ಆಯಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ನೌಕರರು ತಟ್ಟೆ, ಲೋಟ ಬಡಿದು ಪ್ರತಿಭಟಿಸಿದರು.</p>.<p>ಐದು ದಿನಗಳಿಂದ ಕೆಲಸಕ್ಕೆ ಹಾಜರಾಗದೆ ಪ್ರತಿರೋಧ ತೋರಿದ್ದ ನೌಕರರು, ಎಲ್ಲ ಜಿಲ್ಲೆ ಮತ್ತು ತಾಲ್ಲೂಕು ಆಡಳಿತದ ಕಚೇರಿ ಎದುರು ಕುಟುಂಬ ಸಮೇತರಾಗಿ ಬಂದು ಪ್ರತಿಭಟಿಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 6ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವಂತೆ ಒತ್ತಾಯಿಸಿದರು.</p>.<p>ರಾಜಧಾನಿಯಲ್ಲಿ ಪ್ರತಿಭಟಿಸಲು ಮುಂದಾಗಿದ್ದ 50ಕ್ಕೂ ಹೆಚ್ಚು ನೌಕರರನ್ನು ವಶಕ್ಕೆ ಪಡೆದ ಪೊಲೀಸರು ಸಂಜೆಯ ವೇಳೆಗೆ ಬಿಡುಗಡೆಗೊಳಿಸಿದರು.</p>.<p>ನಾಲ್ಕೂ ನಿಗಮಗಳಿಂದ ನೂರಾರು ನೌಕರರು ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿದರು. ಆದರೆ, ಪ್ರತಿಭಟನೆಗೆ ಅನುಮತಿ ಪಡೆದಿರಲಿಲ್ಲ ಎಂಬ ಕಾರಣ ನೀಡಿ ಪೊಲೀಸರು ಹಲವು ನೌಕರರ ವಿರುದ್ಧ ಪ್ರಕರಣ ದಾಖಲಿಸಿದರು.</p>.<p class="Subhead"><strong>ವಿಷ ಸೇವಿಸಿದ ನೌಕರ:</strong>ಹಾಸನದಲ್ಲಿ ಸಾರಿಗೆ ನೌಕರರೊಬ್ಬರು ಬಸ್ ನಿಲ್ದಾಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.ಹಾಸನ–ಚಿಕ್ಕಮಗಳೂರು ಸಾರಿಗೆ ನೌಕರರ ಸಹಕಾರಿ ಪತ್ತಿನ ಸಂಘದ ಉಪಾಧ್ಯಕ್ಷ ಪಾಲಾಕ್ಷ (40) ವಿಷ ಸೇವಿಸಿದವರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ.</p>.<p>‘ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು. ನಮ್ಮನ್ನು ವರ್ಗಾವಣೆ ಮಾಡಿ ಎಫ್ಐಆರ್ ಹಾಕಿದ್ದಾರೆ. ಅನಂತಸುಬ್ಬರಾವ್ ಅವರಿಂದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಈ ಸರ್ಕಾರಕ್ಕೆ ಕಣ್ಣಿಲ್ಲ’ಎಂದು ಪಾಲಾಕ್ಷ ಆರೋಪಿಸಿದರು.</p>.<p class="Subhead"><strong>ಕೆಲಸಕ್ಕೆ ಬಂದವರಿಗೆ ವೇತನ:</strong>ಇತ್ತ, ಸರ್ಕಾರ ಕೂಡ ಮುಷ್ಕರದ ತೀವ್ರತೆ ತಗ್ಗಿಸಲು, ನೌಕರರು ಕೆಲಸಕ್ಕೆ ಮರಳುವಂತೆ ಮಾಡಲು ನಾನಾ ಕಸರತ್ತುಗಳನ್ನು ಮುಂದುವರಿಸಿದೆ.</p>.<p>ನಾಲ್ಕು ನಿಗಮಗಳಲ್ಲಿ ತರಬೇತಿ ನೌಕರರ ವಜಾ ಮತ್ತು ಕೆಲವರು ವರ್ಗಾವಣೆ ಕ್ರಮ ಕೈಗೊಂಡಿದ್ದರೆ, ಕೆಲಸಕ್ಕೆ ಹಾಜರಾದ 10,430 ಚಾಲಕ–ನಿರ್ವಾಹಕರಿಗೆ ಮಾತ್ರ ಮಾರ್ಚ್ ತಿಂಗಳ ವೇತನ ಪಾವತಿಸುವ ಮೂಲಕ ಉಳಿದವರ ಮನವೊಲಿಸುವ ಕಾರ್ಯವನ್ನೂ ಮಾಡುತ್ತಿದೆ.</p>.<p>55 ವರ್ಷ ಮೇಲ್ಪಟ್ಟವರು ವೈದ್ಯಕೀಯ ಮತ್ತು ದೈಹಿಕ ಕ್ಷಮತೆಯ ಪ್ರಮಾಣಪತ್ರ ನೀಡಲು ಸೋಮವಾರ ಕೊನೆಯ ದಿನ ಎಂದು ಬಿಎಂಟಿಸಿ ಹೇಳಿತ್ತು. ಹೀಗೆ ಪ್ರಮಾಣಪತ್ರ ನೀಡಲು ಬಂದ ಅನೇಕ ಹಿರಿಯ ನೌಕರರ ಮನವೊಲಿಸಿ ಕರ್ತವ್ಯಕ್ಕೆ ನಿಯೋಜಿಸಲಾಯಿತು.</p>.<p>ಉಳಿದ ನಿಗಮಗಳ ಉನ್ನತ ಅಧಿಕಾರಿಗಳೂ ಹಲವು ನೌಕರರ ಮನವೊಲಿಸಿ, ಕರ್ತವ್ಯಕ್ಕೆ ಹಾಜರು ಪಡಿಸಲು ಯಶಸ್ವಿಯಾದರು. ಇದರಿಂದ ರಾಜ್ಯದಲ್ಲಿ 3,200ಕ್ಕೂ ಹೆಚ್ಚು ಸರ್ಕಾರಿ ಬಸ್ಗಳು ಕಾರ್ಯಾಚರಣೆ ನಡೆಸಲು ಸಾಧ್ಯವಾಯಿತು.</p>.<p><strong>‘ತಟ್ಟೆ ಹಿಡಿದು ಭಿಕ್ಷಾಟನೆ’</strong></p>.<p>‘ಮುಷ್ಕರ ಪ್ರಾರಂಭವಾಗಿ ಆರು ದಿನ ಕಳೆದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಸಾರಿಗೆ ನೌಕರರು ಮತ್ತು ಕುಟುಂಬದವರು ಮಂಗಳವಾರ (ಏ.13) ತಟ್ಟೆ ಹಿಡಿದು ಭಿಕ್ಷಾಟನೆ ನಡೆಸುವ ಮೂಲಕ ಪ್ರತಿಭಟಿಸಲಿದ್ದಾರೆ’ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.</p>.<p>‘ಮುಷ್ಕರ ನಿರತ ನೌಕರರ ದುಡಿಮೆಯ ಫಲವಾದ ವೇತನವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಇದನ್ನು ಖಂಡಿಸಿ, ಯುಗಾದಿ ದಿನವೇ ಭಿಕ್ಷಾಟನೆ ಮಾಡಲಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p>.<p>‘ನಮಗೆ ಪರಿಹಾರ ದೊರೆಯುವರೆಗೂ ಮುಷ್ಕರ ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದೂ ಅವರು ತಿಳಿಸಿದರು.</p>.<p><strong>‘ಸರ್ಕಾರದ ವಿರುದ್ಧ ಮೊಕದ್ದಮೆ’</strong></p>.<p>‘ಮುಷ್ಕರ ನಿರತ ನೌಕರರ ವೇತನ ತಡೆಹಿಡಿದಿರುವ ರಾಜ್ಯ ಸರ್ಕಾರದ ಕೃತ್ಯ ಸಂವಿಧಾನ ವಿರೋಧಿಯಾಗಿದ್ದು, ಈ ಸಂಬಂಧ ಮಂಗಳವಾರ(ಏ.13) ಸರ್ಕಾರದ ವಿರುದ್ಧವೇ ಸೆಕ್ಷನ್ 406 ಅಡಿ ದೂರು ಸಲ್ಲಿಸಿ, ಪ್ರಮುಖರ ವಿರುದ್ಧ ಮೊಕದ್ದಮೆ ಹೂಡಲಾಗುವುದು’ ಎಂದು ಹಿರಿಯ ವಕೀಲ ಎಸ್. ಬಾಲನ್ ಹೇಳಿದರು.</p>.<p>‘ಕಾರ್ಮಿಕರ ಸಂಖ್ಯೆ ಒಂದು ಸಾವಿರ ಇದ್ದಲ್ಲಿ ಪ್ರತಿ ತಿಂಗಳ 10ನೆ ತಾರೀಖು ಒಳಗಾಗಿ ವೇತನ ಪಾವತಿ ಮಾಡಬೇಕು ಎನ್ನುವ ಕಾನೂನೇ ಇದೆ. ಆದರೆ, ಸಾರಿಗೆ ನೌಕರರ ವಿಷಯದಲ್ಲಿ ಈ ಕಾನೂನು ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಗಿದೆ’ ಎಂದರು.</p>.<p>‘ಯಾವುದೇ ಪ್ರತಿಭಟನೆ, ಧರಣಿ ನಡೆಸಿದರೂ ಪೊಲೀಸರು ಮಧ್ಯ ಪ್ರವೇಶಿಸಿ ಬಂಧಿಸುವಂತಿಲ್ಲ. ಮೂರು ವರ್ಷಕ್ಕಿಂತ ಅಧಿಕ ಜೈಲು ಶಿಕ್ಷೆಯ ಅಪರಾಧ ಇದ್ದಲ್ಲಿ ಮಾತ್ರವೇ ಸೆಕ್ಷನ್ 188 ಅಡಿ ಮೊಕದ್ದಮೆಯೂ ದಾಖಲಿಸಬೇಕು’ ಎಂದೂ ಹೇಳಿದರು.</p>.<p><strong>ಮಾರ್ಚ್ ತಿಂಗಳ ವೇತನ ಪಡೆದವರು</strong></p>.<p>ನಿಗಮ; ನೌಕರರ ಸಂಖ್ಯೆ</p>.<p>ಕೆಎಸ್ಆರ್ಟಿಸಿ;4,256</p>.<p>ಬಿಎಂಟಿಸಿ;960</p>.<p>ಎನ್ಡಬ್ಲ್ಯುಆರ್ಟಿಸಿ; 1,837</p>.<p>ಎನ್ಇಕೆಆರ್ಟಿಸಿ;3,377</p>.<p><strong>ಸೋಮವಾರ ಕಾರ್ಯಾಚರಣೆ ನಡೆಸಿದ ಬಸ್ಗಳ ವಿವರ</strong></p>.<p>ಕೆಎಸ್ಆರ್ಟಿಸಿ;1,588</p>.<p>ಬಿಎಂಟಿಸಿ;452</p>.<p>ಎನ್ಇಕೆಆರ್ಟಿಸಿ;700</p>.<p>ಎನ್ಡಬ್ಲ್ಯುಕೆಆರ್ಟಿಸಿ; 495</p>.<p>ಒಟ್ಟು;3,235</p>.<p><strong>ತೆರಿಗೆ ಪಾವತಿಗೆ ಅವಧಿ ವಿಸ್ತರಣೆ</strong></p>.<p>ಪ್ರಯಾಣಿಕ ವಾಹನಗಳ ತೆರಿಗೆ ಪಾವತಿ ಅವಧಿಯನ್ನು ರಾಜ್ಯ ಸರ್ಕಾರ ವಿಸ್ತರಿಸಿದೆ.</p>.<p>ಮೋಟಾರು ವಾಹನ ತೆರಿಗೆಯನ್ನು ದಂಡರಹಿತವಾಗಿ ಪಾವತಿಸಲು ಏ.30 ಕೊನೆಯ ದಿನ. ಈ ಮೊದಲು ಏ.15ರೊಳಗೇ ಪಾವತಿಸಬೇಕಿತ್ತು.</p>.<p>ರಾಜ್ಯದ ಎಲ್ಲ ನೋಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಇದು ಅನ್ವಯಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ಸರ್ಕಾರದ ಬೆದರಿಕೆ–ಮನವೊಲಿಕೆಗೆ ಮಣಿಯದೇ ಆರು ದಿನಗಳಿಂದ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರು ಸೋಮವಾರ ತಮ್ಮ ಹೋರಾಟ ತೀವ್ರಗೊಳಿಸಿದರು. ರಾಜ್ಯದ ಆಯಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ನೌಕರರು ತಟ್ಟೆ, ಲೋಟ ಬಡಿದು ಪ್ರತಿಭಟಿಸಿದರು.</p>.<p>ಐದು ದಿನಗಳಿಂದ ಕೆಲಸಕ್ಕೆ ಹಾಜರಾಗದೆ ಪ್ರತಿರೋಧ ತೋರಿದ್ದ ನೌಕರರು, ಎಲ್ಲ ಜಿಲ್ಲೆ ಮತ್ತು ತಾಲ್ಲೂಕು ಆಡಳಿತದ ಕಚೇರಿ ಎದುರು ಕುಟುಂಬ ಸಮೇತರಾಗಿ ಬಂದು ಪ್ರತಿಭಟಿಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 6ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವಂತೆ ಒತ್ತಾಯಿಸಿದರು.</p>.<p>ರಾಜಧಾನಿಯಲ್ಲಿ ಪ್ರತಿಭಟಿಸಲು ಮುಂದಾಗಿದ್ದ 50ಕ್ಕೂ ಹೆಚ್ಚು ನೌಕರರನ್ನು ವಶಕ್ಕೆ ಪಡೆದ ಪೊಲೀಸರು ಸಂಜೆಯ ವೇಳೆಗೆ ಬಿಡುಗಡೆಗೊಳಿಸಿದರು.</p>.<p>ನಾಲ್ಕೂ ನಿಗಮಗಳಿಂದ ನೂರಾರು ನೌಕರರು ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿದರು. ಆದರೆ, ಪ್ರತಿಭಟನೆಗೆ ಅನುಮತಿ ಪಡೆದಿರಲಿಲ್ಲ ಎಂಬ ಕಾರಣ ನೀಡಿ ಪೊಲೀಸರು ಹಲವು ನೌಕರರ ವಿರುದ್ಧ ಪ್ರಕರಣ ದಾಖಲಿಸಿದರು.</p>.<p class="Subhead"><strong>ವಿಷ ಸೇವಿಸಿದ ನೌಕರ:</strong>ಹಾಸನದಲ್ಲಿ ಸಾರಿಗೆ ನೌಕರರೊಬ್ಬರು ಬಸ್ ನಿಲ್ದಾಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.ಹಾಸನ–ಚಿಕ್ಕಮಗಳೂರು ಸಾರಿಗೆ ನೌಕರರ ಸಹಕಾರಿ ಪತ್ತಿನ ಸಂಘದ ಉಪಾಧ್ಯಕ್ಷ ಪಾಲಾಕ್ಷ (40) ವಿಷ ಸೇವಿಸಿದವರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ.</p>.<p>‘ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು. ನಮ್ಮನ್ನು ವರ್ಗಾವಣೆ ಮಾಡಿ ಎಫ್ಐಆರ್ ಹಾಕಿದ್ದಾರೆ. ಅನಂತಸುಬ್ಬರಾವ್ ಅವರಿಂದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಈ ಸರ್ಕಾರಕ್ಕೆ ಕಣ್ಣಿಲ್ಲ’ಎಂದು ಪಾಲಾಕ್ಷ ಆರೋಪಿಸಿದರು.</p>.<p class="Subhead"><strong>ಕೆಲಸಕ್ಕೆ ಬಂದವರಿಗೆ ವೇತನ:</strong>ಇತ್ತ, ಸರ್ಕಾರ ಕೂಡ ಮುಷ್ಕರದ ತೀವ್ರತೆ ತಗ್ಗಿಸಲು, ನೌಕರರು ಕೆಲಸಕ್ಕೆ ಮರಳುವಂತೆ ಮಾಡಲು ನಾನಾ ಕಸರತ್ತುಗಳನ್ನು ಮುಂದುವರಿಸಿದೆ.</p>.<p>ನಾಲ್ಕು ನಿಗಮಗಳಲ್ಲಿ ತರಬೇತಿ ನೌಕರರ ವಜಾ ಮತ್ತು ಕೆಲವರು ವರ್ಗಾವಣೆ ಕ್ರಮ ಕೈಗೊಂಡಿದ್ದರೆ, ಕೆಲಸಕ್ಕೆ ಹಾಜರಾದ 10,430 ಚಾಲಕ–ನಿರ್ವಾಹಕರಿಗೆ ಮಾತ್ರ ಮಾರ್ಚ್ ತಿಂಗಳ ವೇತನ ಪಾವತಿಸುವ ಮೂಲಕ ಉಳಿದವರ ಮನವೊಲಿಸುವ ಕಾರ್ಯವನ್ನೂ ಮಾಡುತ್ತಿದೆ.</p>.<p>55 ವರ್ಷ ಮೇಲ್ಪಟ್ಟವರು ವೈದ್ಯಕೀಯ ಮತ್ತು ದೈಹಿಕ ಕ್ಷಮತೆಯ ಪ್ರಮಾಣಪತ್ರ ನೀಡಲು ಸೋಮವಾರ ಕೊನೆಯ ದಿನ ಎಂದು ಬಿಎಂಟಿಸಿ ಹೇಳಿತ್ತು. ಹೀಗೆ ಪ್ರಮಾಣಪತ್ರ ನೀಡಲು ಬಂದ ಅನೇಕ ಹಿರಿಯ ನೌಕರರ ಮನವೊಲಿಸಿ ಕರ್ತವ್ಯಕ್ಕೆ ನಿಯೋಜಿಸಲಾಯಿತು.</p>.<p>ಉಳಿದ ನಿಗಮಗಳ ಉನ್ನತ ಅಧಿಕಾರಿಗಳೂ ಹಲವು ನೌಕರರ ಮನವೊಲಿಸಿ, ಕರ್ತವ್ಯಕ್ಕೆ ಹಾಜರು ಪಡಿಸಲು ಯಶಸ್ವಿಯಾದರು. ಇದರಿಂದ ರಾಜ್ಯದಲ್ಲಿ 3,200ಕ್ಕೂ ಹೆಚ್ಚು ಸರ್ಕಾರಿ ಬಸ್ಗಳು ಕಾರ್ಯಾಚರಣೆ ನಡೆಸಲು ಸಾಧ್ಯವಾಯಿತು.</p>.<p><strong>‘ತಟ್ಟೆ ಹಿಡಿದು ಭಿಕ್ಷಾಟನೆ’</strong></p>.<p>‘ಮುಷ್ಕರ ಪ್ರಾರಂಭವಾಗಿ ಆರು ದಿನ ಕಳೆದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಸಾರಿಗೆ ನೌಕರರು ಮತ್ತು ಕುಟುಂಬದವರು ಮಂಗಳವಾರ (ಏ.13) ತಟ್ಟೆ ಹಿಡಿದು ಭಿಕ್ಷಾಟನೆ ನಡೆಸುವ ಮೂಲಕ ಪ್ರತಿಭಟಿಸಲಿದ್ದಾರೆ’ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.</p>.<p>‘ಮುಷ್ಕರ ನಿರತ ನೌಕರರ ದುಡಿಮೆಯ ಫಲವಾದ ವೇತನವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಇದನ್ನು ಖಂಡಿಸಿ, ಯುಗಾದಿ ದಿನವೇ ಭಿಕ್ಷಾಟನೆ ಮಾಡಲಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p>.<p>‘ನಮಗೆ ಪರಿಹಾರ ದೊರೆಯುವರೆಗೂ ಮುಷ್ಕರ ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದೂ ಅವರು ತಿಳಿಸಿದರು.</p>.<p><strong>‘ಸರ್ಕಾರದ ವಿರುದ್ಧ ಮೊಕದ್ದಮೆ’</strong></p>.<p>‘ಮುಷ್ಕರ ನಿರತ ನೌಕರರ ವೇತನ ತಡೆಹಿಡಿದಿರುವ ರಾಜ್ಯ ಸರ್ಕಾರದ ಕೃತ್ಯ ಸಂವಿಧಾನ ವಿರೋಧಿಯಾಗಿದ್ದು, ಈ ಸಂಬಂಧ ಮಂಗಳವಾರ(ಏ.13) ಸರ್ಕಾರದ ವಿರುದ್ಧವೇ ಸೆಕ್ಷನ್ 406 ಅಡಿ ದೂರು ಸಲ್ಲಿಸಿ, ಪ್ರಮುಖರ ವಿರುದ್ಧ ಮೊಕದ್ದಮೆ ಹೂಡಲಾಗುವುದು’ ಎಂದು ಹಿರಿಯ ವಕೀಲ ಎಸ್. ಬಾಲನ್ ಹೇಳಿದರು.</p>.<p>‘ಕಾರ್ಮಿಕರ ಸಂಖ್ಯೆ ಒಂದು ಸಾವಿರ ಇದ್ದಲ್ಲಿ ಪ್ರತಿ ತಿಂಗಳ 10ನೆ ತಾರೀಖು ಒಳಗಾಗಿ ವೇತನ ಪಾವತಿ ಮಾಡಬೇಕು ಎನ್ನುವ ಕಾನೂನೇ ಇದೆ. ಆದರೆ, ಸಾರಿಗೆ ನೌಕರರ ವಿಷಯದಲ್ಲಿ ಈ ಕಾನೂನು ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಗಿದೆ’ ಎಂದರು.</p>.<p>‘ಯಾವುದೇ ಪ್ರತಿಭಟನೆ, ಧರಣಿ ನಡೆಸಿದರೂ ಪೊಲೀಸರು ಮಧ್ಯ ಪ್ರವೇಶಿಸಿ ಬಂಧಿಸುವಂತಿಲ್ಲ. ಮೂರು ವರ್ಷಕ್ಕಿಂತ ಅಧಿಕ ಜೈಲು ಶಿಕ್ಷೆಯ ಅಪರಾಧ ಇದ್ದಲ್ಲಿ ಮಾತ್ರವೇ ಸೆಕ್ಷನ್ 188 ಅಡಿ ಮೊಕದ್ದಮೆಯೂ ದಾಖಲಿಸಬೇಕು’ ಎಂದೂ ಹೇಳಿದರು.</p>.<p><strong>ಮಾರ್ಚ್ ತಿಂಗಳ ವೇತನ ಪಡೆದವರು</strong></p>.<p>ನಿಗಮ; ನೌಕರರ ಸಂಖ್ಯೆ</p>.<p>ಕೆಎಸ್ಆರ್ಟಿಸಿ;4,256</p>.<p>ಬಿಎಂಟಿಸಿ;960</p>.<p>ಎನ್ಡಬ್ಲ್ಯುಆರ್ಟಿಸಿ; 1,837</p>.<p>ಎನ್ಇಕೆಆರ್ಟಿಸಿ;3,377</p>.<p><strong>ಸೋಮವಾರ ಕಾರ್ಯಾಚರಣೆ ನಡೆಸಿದ ಬಸ್ಗಳ ವಿವರ</strong></p>.<p>ಕೆಎಸ್ಆರ್ಟಿಸಿ;1,588</p>.<p>ಬಿಎಂಟಿಸಿ;452</p>.<p>ಎನ್ಇಕೆಆರ್ಟಿಸಿ;700</p>.<p>ಎನ್ಡಬ್ಲ್ಯುಕೆಆರ್ಟಿಸಿ; 495</p>.<p>ಒಟ್ಟು;3,235</p>.<p><strong>ತೆರಿಗೆ ಪಾವತಿಗೆ ಅವಧಿ ವಿಸ್ತರಣೆ</strong></p>.<p>ಪ್ರಯಾಣಿಕ ವಾಹನಗಳ ತೆರಿಗೆ ಪಾವತಿ ಅವಧಿಯನ್ನು ರಾಜ್ಯ ಸರ್ಕಾರ ವಿಸ್ತರಿಸಿದೆ.</p>.<p>ಮೋಟಾರು ವಾಹನ ತೆರಿಗೆಯನ್ನು ದಂಡರಹಿತವಾಗಿ ಪಾವತಿಸಲು ಏ.30 ಕೊನೆಯ ದಿನ. ಈ ಮೊದಲು ಏ.15ರೊಳಗೇ ಪಾವತಿಸಬೇಕಿತ್ತು.</p>.<p>ರಾಜ್ಯದ ಎಲ್ಲ ನೋಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಇದು ಅನ್ವಯಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>