<p><strong>ಬೆಂಗಳೂರು:</strong> ಅಕ್ರಮ ಎಸಗಿದವರ ಮನೆಯ ಮೇಲಷ್ಟೇ ಐಟಿ, ಇ.ಡಿಗಳು ದಾಳಿ ಮಾಡುತ್ತವೆ. ಅದರಲ್ಲಿ ವಿಶೇಷ ಏನಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.</p>.<p>ಬಿಜೆಪಿ ಕಚೇರಿಯ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಐಟಿ, ಇ.ಡಿ ಇಲಾಖೆಗಳು ಎಲ್ಲರ ಮನೆಯ ಮೇಲೆ ದಾಳಿ ಮಾಡುವುದಿಲ್ಲ. ಖಚಿತ ಮಾಹಿತಿಯ ಮೇಲೆಯೇ ತಪ್ಪು ಮಾಡಿದವರ ವಿರುದ್ಧ ಕ್ರಮ ಜರುಗಿಸುತ್ತಾರೆ ಎಂದು ಹೇಳಿದರು.</p>.<p>ತಮ್ಮವರ ತಪ್ಪುಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ನವರು ಯಾವಾಗಲೂ ರಾಜಕೀಯ ಪ್ರೇರಿತ ಎನ್ನುವುದು ಅವರಿಗೆ ಸ್ಲೋಗನ್ ಆಗಿದೆ. ಅವರ ಮನೆ ಮೇಲೆ ಮಾಡಿಲ್ಲ ಇವರ ಮನೆ ಮೇಲೆ ಏಕೆ ದಾಳಿ ಮಾಡಿಲ್ಲ ಎಂದು ಕೇಳಲು ಕಾಂಗ್ರೆಸ್ನವರು ಯಾರು ಎಂದು ಬೊಮ್ಮಾಯಿ ಪ್ರಶ್ನಿಸಿದರು.</p>.<p>ಇ.ಡಿ ಅಥವಾ ಐ.ಟಿಯವರು ಏನು ಮಾಡಿದರೂ ಉತ್ತರ ಕೊಡಲು ನಾನು ಇ.ಡಿ, ಐ.ಟಿ ಅಧಿಕಾರಿಯಲ್ಲ. ಇವೆಲ್ಲದಕ್ಕೂ ಉತ್ತರ ಕೊಡಲು ಕಾಂಗ್ರೆಸ್ನವರು ಪರಿಣಿತರಾಗಿದ್ದಾರೆ. ಅವರಿಗೆ ಅದರಲ್ಲಿ ಬಹಳ ಅನುಭವ ಇದೆ ಎಂದು ವ್ಯಂಗ್ಯವಾಡಿದರು.</p>.<p>ಇವತ್ತು ದಾಳಿ ಆಗಿದ್ದರೆ, ನಾಳೆ ನ್ಯಾಯಾಲಯದಲ್ಲಿ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಮುಂದಿನ ವಿಚಾರ ನ್ಯಾಯಾಲಯ ನೋಡಿಕೊಳ್ಳುತ್ತದೆ. ಸುಖಾ ಸುಮ್ಮನೆ ದಾಳಿ ಮಾಡಲ್ಲ. ಖಚಿತ ಮಾಹಿತಿ ಇದ್ದಾಗ ಮಾತ್ರ ದಾಳಿ ಮಾಡುತ್ತಾರೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಅಕ್ರಮ ಎಸಗಿದವರ ಮನೆಯ ಮೇಲಷ್ಟೇ ಐಟಿ, ಇ.ಡಿಗಳು ದಾಳಿ ಮಾಡುತ್ತವೆ. ಅದರಲ್ಲಿ ವಿಶೇಷ ಏನಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.</p>.<p>ಬಿಜೆಪಿ ಕಚೇರಿಯ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಐಟಿ, ಇ.ಡಿ ಇಲಾಖೆಗಳು ಎಲ್ಲರ ಮನೆಯ ಮೇಲೆ ದಾಳಿ ಮಾಡುವುದಿಲ್ಲ. ಖಚಿತ ಮಾಹಿತಿಯ ಮೇಲೆಯೇ ತಪ್ಪು ಮಾಡಿದವರ ವಿರುದ್ಧ ಕ್ರಮ ಜರುಗಿಸುತ್ತಾರೆ ಎಂದು ಹೇಳಿದರು.</p>.<p>ತಮ್ಮವರ ತಪ್ಪುಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ನವರು ಯಾವಾಗಲೂ ರಾಜಕೀಯ ಪ್ರೇರಿತ ಎನ್ನುವುದು ಅವರಿಗೆ ಸ್ಲೋಗನ್ ಆಗಿದೆ. ಅವರ ಮನೆ ಮೇಲೆ ಮಾಡಿಲ್ಲ ಇವರ ಮನೆ ಮೇಲೆ ಏಕೆ ದಾಳಿ ಮಾಡಿಲ್ಲ ಎಂದು ಕೇಳಲು ಕಾಂಗ್ರೆಸ್ನವರು ಯಾರು ಎಂದು ಬೊಮ್ಮಾಯಿ ಪ್ರಶ್ನಿಸಿದರು.</p>.<p>ಇ.ಡಿ ಅಥವಾ ಐ.ಟಿಯವರು ಏನು ಮಾಡಿದರೂ ಉತ್ತರ ಕೊಡಲು ನಾನು ಇ.ಡಿ, ಐ.ಟಿ ಅಧಿಕಾರಿಯಲ್ಲ. ಇವೆಲ್ಲದಕ್ಕೂ ಉತ್ತರ ಕೊಡಲು ಕಾಂಗ್ರೆಸ್ನವರು ಪರಿಣಿತರಾಗಿದ್ದಾರೆ. ಅವರಿಗೆ ಅದರಲ್ಲಿ ಬಹಳ ಅನುಭವ ಇದೆ ಎಂದು ವ್ಯಂಗ್ಯವಾಡಿದರು.</p>.<p>ಇವತ್ತು ದಾಳಿ ಆಗಿದ್ದರೆ, ನಾಳೆ ನ್ಯಾಯಾಲಯದಲ್ಲಿ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಮುಂದಿನ ವಿಚಾರ ನ್ಯಾಯಾಲಯ ನೋಡಿಕೊಳ್ಳುತ್ತದೆ. ಸುಖಾ ಸುಮ್ಮನೆ ದಾಳಿ ಮಾಡಲ್ಲ. ಖಚಿತ ಮಾಹಿತಿ ಇದ್ದಾಗ ಮಾತ್ರ ದಾಳಿ ಮಾಡುತ್ತಾರೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>