‘ಕಳೆದ ವರ್ಷ ಮಳೆಗೆ ರಸ್ತೆ, ಸೇತುವೆ ಹಾಳಾಗಿದ್ದರೂ ಈವರೆಗೂ ಯಾಕೆ ಕ್ರಮ ವಹಿಸಿಲ್ಲ. ಕಾಮಗಾರಿಗೆ ₹4 ಕೋಟಿ ಬಿಡುಗಡೆಯಾಗಿದೆ ಎನ್ನಲಾಗುತ್ತಿದೆ. ಆದರೆ,ಕಾಮಗಾರಿ ಏಕೆ ಮಾಡಿಲ್ಲ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮೂಡಿಗೆರೆಯ ಬಂಕೇನಹಳ್ಳಿಯ ಕೆಲ ಯುವಕರು ಮತ್ತು ಗ್ರಾಮಸ್ಥರೊಬ್ಬರು ಖಾರವಾಗಿ ಪ್ರಶ್ನಿಸಿದರು. ‘ಇಂಥ ಪ್ರದೇಶದಲ್ಲಿ ಸ್ಥಳೀಯರಿಂದ ಕಾಮಗಾರಿ ಮಾಡಿಸಿದರೆ ಅವರು ಬಿಲ್ ಮಾಡಿಕೊಂಡು ಹೋಗುತ್ತಾರಷ್ಟೇ. ಇಲ್ಲಿ ಮಿಲಿಟರಿಯವರಿಂದ ಕಾಮಗಾರಿ ಮಾಡಿಸಲು ಕ್ರಮ ವಹಿಸುತ್ತೇವೆ’ ಎಂದು ಶೋಭಾ ಪ್ರತಿಕ್ರಿಯಿಸಿದರು.