ಕ್ಯಾಂಟೀನ್ ಉದ್ಘಾಟನೆಗೂ ಸ್ವಲ್ಪಹೊತ್ತು ಮುಂಚೆ ಪ್ರವೇಶ ದ್ವಾರದಲ್ಲಿ ಸುಜಾತಾ, ಜಯಣ್ಣ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ರೇಖಾ ಅನಿಲ್, ದ್ರಾಕ್ಷಾಯಣಿ ಪೂರ್ಣೇಶ್, ಭವ್ಯಾ ನಟೇಶ್ ಪ್ರತಿಭಟನೆ ಮಾಡಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಮುಂದಾದಾಗ ತಳ್ಳಾಟ ನೂಕಾಟ ನಡೆಯಿತು. ಪ್ರತಿಭಟನಾನಿರತರನ್ನು ಪೊಲೀಸರು ವಾಹನದಲ್ಲಿ ಬಸವನಹಳ್ಳಿ ಠಾಣೆಗೆ ಕರೆದೊಯ್ದರು.