ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Breaking News | ಐದೂ ಗ್ಯಾರಂಟಿಗಳ ಜಾರಿಗೆ ಸರ್ಕಾರ ನಿರ್ಧಾರ: ಸಿಎಂ
LIVE

Published 2 ಜೂನ್ 2023, 9:15 IST
Last Updated 2 ಜೂನ್ 2023, 10:04 IST
ಅಕ್ಷರ ಗಾತ್ರ
10:0402 Jun 2023

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಜಾರಿಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಬೆಳಿಗ್ಗೆಯಿಂದ ನಡೆದ ಸುದೀರ್ಘ ಸಚಿವ ಸಂಪುಟ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡಿದ್ದಾರೆ.

09:5502 Jun 2023

2022-23ರಲ್ಲಿ ಪದವಿ ಪಡೆದವರಿಗೆ ತಿಂಗಳಿಗೆ ₹3000, 24 ತಿಂಗಳವರೆಗೆ ಕೆಲಸ ಸಿಗದಿದ್ದರೆ ಈ ಸೌಲಭ್ಯ ಅನ್ವಯ.

09:4702 Jun 2023

ಜೂನ್ 11ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಸಿದ್ದರಾಮಯ್ಯ                  ಜೂನ್ 11ರಿಂದ ಶಕ್ತಿ ಯೋಜನೆ ಜಾರಿ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ. ಎಸಿ, ಸ್ಲೀಪರ್, ನಾನ್ ಎಸಿ ಸ್ಲೀಪರ್ ಬಸ್‌ಗಳಿಗೆ ಅನ್ವಯವಾಗುವುದಿಲ್ಲ.                                            

09:3902 Jun 2023

ಮೂರನೇ ಗ್ಯಾರಂಟಿಯಾಗಿ ‘ಅನ್ನ ಭಾಗ್ಯ‘ಯೋಜನೆ ಘೋಷಣೆ: BPL ಕುಟುಂಬಗಳಿಗೆ ಮಾಸಿಕ 10 ಕೆ.ಜಿ ಅಕ್ಕಿ

09:3002 Jun 2023

ಎರಡನೇ ಯೋಜನೆಯಾಗಿ ‘ಗೃಹಲಕ್ಷ್ಮೀ‘ ಯೋಜನೆ ಘೋಷಣೆ

ಆಗಸ್ಟ್‌ 15 ರಿಂದ ಗೃಹಲಕ್ಷ್ಮಿ ಯೋಜನೆ ಜಾರಿ: ಸಿದ್ದರಾಮಯ್ಯ

ಯೋಜನೆಗೆ ನೋಂದಾಯಿಸಲು 1 ತಿಂಗಳ ಕಾಲಾವಕಾಶ. ಆಧಾರ್‌, ಬ್ಯಾಂಕ್‌ ಪಾಸ್‌ಬುಕ್‌ ದಾಖಲೆಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಬಹುದು.

ಎಪಿಎಲ್‌, ಬಿಪಿಎಲ್‌ ವ್ಯತ್ಯಾಸ ಇಲ್ಲದೆ, ಮನೆಯ ಯಜಮಾನಿಗೆ ಮಾಸಿಕ ₹2000

ಯೋಜನೆಯ ಲಾಭ ಪಡೆಯಲು ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಕಡ್ಡಾಯ

ಎಲ್ಲಾ ರೀತಿಯ ಮಾಸಾಶನ (ಅಂಕವಿಕಲರು, ವಿಧವೆಯರು, ಹಿರಿಯ ನಾಗರಿಕರು) ಪಡೆಯುವ ಮನೆಯೊಡತಿಗೂ ಯೋಜನೆ ಅನ್ವಯ: ಸಿದ್ದರಾಮಯ್ಯ

09:2202 Jun 2023

ಮೊದಲ ಗ್ಯಾರಂಟಿಯಾಗಿ ‘ಗೃಹ ಜ್ಯೋತಿ‘ ಯೋಜನೆ ಜಾರಿ

ಮೊದಲ ಗ್ಯಾರಂಟಿಯಾಗಿ ಗೃಹ ಜ್ಯೋತಿ ಯೋಜನೆ ಜಾರಿ: ಸಿದ್ದರಾಮಯ್ಯ ಹೇಳಿಕೆ

12 ತಿಂಗಳ ಸರಾಸರಿ ಪಡೆದುಕೊಂಡು ಅದರ ಮೇಲೆ ಶೇ 10 ರಷ್ಟು ವಿದ್ಯುತ್‌ ಉಚಿತ

200 ಯೂನಿಟ್‌ ವರೆಗೆ ವಿದ್ಯುತ್‌ ಉಚಿತ

ಈ ಹಿಂದಿನ ಹಳೇ ವಿದ್ಯುತ್‌ ಬಾಕಿಯನ್ನು ಗ್ರಾಹಕರೇ ಪಾವತಿ ಮಾಡಬೇಕು: ಸಿದ್ದರಾಮಯ್ಯ

09:2002 Jun 2023

ಯಾವುದೇ ಜಾತಿ, ಧರ್ಮಗಳ ತಾರತಮ್ಯ ಇಲ್ಲದೇ ಗ್ಯಾರಂಟಿ ಯೋಜನೆ ಜಾರಿ ಎಂದ ಸಿದ್ದರಾಮಯ್ಯ

ಈ ಆರ್ಥಿಕ ವರ್ಷದಲ್ಲಿ ಘೋಷಣೆ ಮಾಡಿರುವ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ: ಸಿಎಂ ಸಿದ್ದರಾಮಯ್ಯ

09:1702 Jun 2023

ನಾವು ನುಡಿದಂತೆ ನಡೆಯುತ್ತೇವೆ. ದೇಶಕ್ಕೆ ಗ್ಯಾರಂಟಿ ಯೋಜನೆಗಳ ಬಗ್ಗೆ ಘೋಷಣೆ ಮಾಡುತ್ತೇವೆ: ಡಿ.ಕೆ ಶಿವಕುಮಾರ್

09:1502 Jun 2023

ಗ್ಯಾರಂಟಿ ಯೋಜನೆ ಘೋಷಣೆ ಬಗ್ಗೆ ಸಿಎಂ, ಡಿಸಿಎಂ ಸುದ್ದಿಗೋಷ್ಠಿ

ಸುದೀರ್ಘ ಸಚಿವ ಸಂಪುಟ ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಹಾಗೂ ಸಚಿವ ಸುದ್ದಿಗೋಷ್ಠಿ