<p><strong>ಬೆಂಗಳೂರು:</strong> ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿರುವ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ನಮ್ಮ ಪಕ್ಷದ ಆಂತರಿಕ ವಿಷಯಗಳನ್ನು ನಿಮಗೆಲ್ಲ ಹೇಳಲು ಸಾಧ್ಯವಿಲ್ಲ’ ಎಂದು ಪ್ರತಿಪಕ್ಷ ನಾಯಕರನ್ನು ಉದ್ದೇಶಿಸಿ ಹೇಳಿದರು.</p>.<p>ವಿಧಾನ ಪರಿಷತ್ನಲ್ಲಿ ಗುರುವಾರ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ‘ಸಚಿವ ರಾಜಣ್ಣ ಅವರನ್ನು ಏಕೆ ತೆಗೆದುಹಾಕಿದಿರಿ. ದಲಿತ ನಾಯಕನಿಗೆ ಅನ್ಯಾಯ ಮಾಡುತ್ತಿದ್ದೀರಿ, ಮಾಹಿತಿ ಕೊಡಿ’ ಎಂದು ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.</p>.<p>‘ಸಭಾನಾಯಕರು ಈ ಬಗ್ಗೆ ಉತ್ತರ ಕೊಡಿಸುವ ಭರವಸೆ ನೀಡಿದ್ದರು’ ಎಂದು ನಾರಾಯಣಸ್ವಾಮಿ ಹೇಳಿದಾಗ, ‘ಸರ್ಕಾರ ಉತ್ತರ ನೀಡಿಯಾಗಿದೆ’ ಎಂದು ಸಭಾನಾಯಕ ಬೋಸರಾಜು ಹೇಳಿದರು.</p>.<p>‘ಈ ಪ್ರಶ್ನೆ ಮೊನ್ನೆ ಪ್ರಸ್ತಾಪವಾದಾಗ, ಅವರನ್ನು ತೆಗೆಯೋದು ಇಟ್ಟುಕೊಳ್ಳೋದು ಸರ್ಕಾರದ ನಿರ್ಧಾರ ಎಂದು ಸಭಾನಾಯಕರು ಹೇಳಿದ್ದಾರೆ. ಅಲ್ಲಿಗೆ ಆ ಪ್ರಕರಣವನ್ನು ಮುಕ್ತಾಯ ಮಾಡಿದ್ದೇನೆ. ಮತ್ತೆ ಅದನ್ನು ಮಾತನಾಡುವಂತಿಲ್ಲ’ ಎಂದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಮಂಜುನಾಥ ಭಂಡಾರಿ ಅವರನ್ನು ಪೀಠದಲ್ಲಿ ಕೂರಿಸಿ ಹೊರಟರು.</p>.<p>‘ಉತ್ತರ ನೀಡಲೇಬೇಕು’ ಎಂದು ಬಿಜೆಪಿ ಸದಸ್ಯರು ಒತ್ತಾಯ ಮಾಡುತ್ತಿದ್ದರು. ಸಿದ್ದರಾಮಯ್ಯ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಸದನದಿಂದ ಹೊರಡಲು ಸಿದ್ಧರಾದರು. ‘ದಯವಿಟ್ಟು ಪಲಾಯನ ಮಾಡಬೇಡಿ ಮುಖ್ಯಮಂತ್ರಿಯವರೇ’ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.</p>.<p>ವಾಪಸ್ ಬಂದ ಸಿದ್ದರಾಮಯ್ಯ, ‘ಏನು ಮಾತಾಡುತ್ತಾ ಇದ್ದೀರಿ ನೀವು? ನಾವು ನಿಮ್ಮ ಪ್ರಶ್ನೆಗೆ ಉತ್ತರಿಸುವುದಿಲ್ಲ. ಸಭಾನಾಯಕರು ಈಗಾಗಲೇ ಉತ್ತರಿಸಿದ್ದಾರೆ’ ಎಂದರು.</p>.<p>‘ದಲಿತ ನಾಯಕನಿಗೆ ಅನ್ಯಾಯವಾಗಿದೆ. ಇದು ಕಾಂಗ್ರೆಸ್ನ ಸಂಸ್ಕೃತಿ’ ಎಂದು ನಾರಾಯಣಸ್ವಾಮಿ ದೂರಿದರು.</p>.<p>ಇದರಿಂದ ಸಿಟ್ಟಾದ ಸಿದ್ದರಾಮಯ್ಯ ಅವರು, ‘ಇದು ನಮ್ಮ ಸಂಸ್ಕೃತಿಯಲ್ಲ, ನಿಮ್ಮ ಸಂಸ್ಕೃತಿ. ಧನಕರ್ ರಾಜೀನಾಮೆ ಕೊಟ್ಟರಲ್ವಾ, ಚರ್ಚೆ ಮಾಡಿದ್ದೀರಾ? ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ಯಾಕೆ ರಾಜೀನಾಮೆ ಕೊಟ್ಟರು, ಯಾರಾದರೂ ಕಾರಣ ಕೊಟ್ಟರಾ? ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದಿರಿ; ಯಾಕೆ ಅಂತ ಹೇಳಿದೀರಾ? ಇವೆಲ್ಲ ಪಕ್ಷದ ಆಂತರಿಕ ವಿಷಯಗಳು. ನಿಮಗೆ ಹೇಳಬೇಕಾದ ಅಗತ್ಯ ಇಲ್ಲ’ ಎಂದು ಮೂರು ಬಾರಿ ಎಂದು ಹೇಳಿ ಸದನದಿಂದ ಹೊರಟರು.</p>.<p>‘ದಲಿತ ವಿರೋಧಿ ನೀತಿ, ಪಲಾಯನವಾದ’ ಎಂದು ಬಿಜೆಪಿಯ ಸಿ.ಟಿ. ರವಿ, ರವಿಕುಮಾರ್, ಭಾರತಿ ಶೆಟ್ಟಿ ಘೋಷಣೆ ಕೂಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿರುವ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ನಮ್ಮ ಪಕ್ಷದ ಆಂತರಿಕ ವಿಷಯಗಳನ್ನು ನಿಮಗೆಲ್ಲ ಹೇಳಲು ಸಾಧ್ಯವಿಲ್ಲ’ ಎಂದು ಪ್ರತಿಪಕ್ಷ ನಾಯಕರನ್ನು ಉದ್ದೇಶಿಸಿ ಹೇಳಿದರು.</p>.<p>ವಿಧಾನ ಪರಿಷತ್ನಲ್ಲಿ ಗುರುವಾರ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ‘ಸಚಿವ ರಾಜಣ್ಣ ಅವರನ್ನು ಏಕೆ ತೆಗೆದುಹಾಕಿದಿರಿ. ದಲಿತ ನಾಯಕನಿಗೆ ಅನ್ಯಾಯ ಮಾಡುತ್ತಿದ್ದೀರಿ, ಮಾಹಿತಿ ಕೊಡಿ’ ಎಂದು ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.</p>.<p>‘ಸಭಾನಾಯಕರು ಈ ಬಗ್ಗೆ ಉತ್ತರ ಕೊಡಿಸುವ ಭರವಸೆ ನೀಡಿದ್ದರು’ ಎಂದು ನಾರಾಯಣಸ್ವಾಮಿ ಹೇಳಿದಾಗ, ‘ಸರ್ಕಾರ ಉತ್ತರ ನೀಡಿಯಾಗಿದೆ’ ಎಂದು ಸಭಾನಾಯಕ ಬೋಸರಾಜು ಹೇಳಿದರು.</p>.<p>‘ಈ ಪ್ರಶ್ನೆ ಮೊನ್ನೆ ಪ್ರಸ್ತಾಪವಾದಾಗ, ಅವರನ್ನು ತೆಗೆಯೋದು ಇಟ್ಟುಕೊಳ್ಳೋದು ಸರ್ಕಾರದ ನಿರ್ಧಾರ ಎಂದು ಸಭಾನಾಯಕರು ಹೇಳಿದ್ದಾರೆ. ಅಲ್ಲಿಗೆ ಆ ಪ್ರಕರಣವನ್ನು ಮುಕ್ತಾಯ ಮಾಡಿದ್ದೇನೆ. ಮತ್ತೆ ಅದನ್ನು ಮಾತನಾಡುವಂತಿಲ್ಲ’ ಎಂದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಮಂಜುನಾಥ ಭಂಡಾರಿ ಅವರನ್ನು ಪೀಠದಲ್ಲಿ ಕೂರಿಸಿ ಹೊರಟರು.</p>.<p>‘ಉತ್ತರ ನೀಡಲೇಬೇಕು’ ಎಂದು ಬಿಜೆಪಿ ಸದಸ್ಯರು ಒತ್ತಾಯ ಮಾಡುತ್ತಿದ್ದರು. ಸಿದ್ದರಾಮಯ್ಯ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಸದನದಿಂದ ಹೊರಡಲು ಸಿದ್ಧರಾದರು. ‘ದಯವಿಟ್ಟು ಪಲಾಯನ ಮಾಡಬೇಡಿ ಮುಖ್ಯಮಂತ್ರಿಯವರೇ’ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.</p>.<p>ವಾಪಸ್ ಬಂದ ಸಿದ್ದರಾಮಯ್ಯ, ‘ಏನು ಮಾತಾಡುತ್ತಾ ಇದ್ದೀರಿ ನೀವು? ನಾವು ನಿಮ್ಮ ಪ್ರಶ್ನೆಗೆ ಉತ್ತರಿಸುವುದಿಲ್ಲ. ಸಭಾನಾಯಕರು ಈಗಾಗಲೇ ಉತ್ತರಿಸಿದ್ದಾರೆ’ ಎಂದರು.</p>.<p>‘ದಲಿತ ನಾಯಕನಿಗೆ ಅನ್ಯಾಯವಾಗಿದೆ. ಇದು ಕಾಂಗ್ರೆಸ್ನ ಸಂಸ್ಕೃತಿ’ ಎಂದು ನಾರಾಯಣಸ್ವಾಮಿ ದೂರಿದರು.</p>.<p>ಇದರಿಂದ ಸಿಟ್ಟಾದ ಸಿದ್ದರಾಮಯ್ಯ ಅವರು, ‘ಇದು ನಮ್ಮ ಸಂಸ್ಕೃತಿಯಲ್ಲ, ನಿಮ್ಮ ಸಂಸ್ಕೃತಿ. ಧನಕರ್ ರಾಜೀನಾಮೆ ಕೊಟ್ಟರಲ್ವಾ, ಚರ್ಚೆ ಮಾಡಿದ್ದೀರಾ? ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ಯಾಕೆ ರಾಜೀನಾಮೆ ಕೊಟ್ಟರು, ಯಾರಾದರೂ ಕಾರಣ ಕೊಟ್ಟರಾ? ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದಿರಿ; ಯಾಕೆ ಅಂತ ಹೇಳಿದೀರಾ? ಇವೆಲ್ಲ ಪಕ್ಷದ ಆಂತರಿಕ ವಿಷಯಗಳು. ನಿಮಗೆ ಹೇಳಬೇಕಾದ ಅಗತ್ಯ ಇಲ್ಲ’ ಎಂದು ಮೂರು ಬಾರಿ ಎಂದು ಹೇಳಿ ಸದನದಿಂದ ಹೊರಟರು.</p>.<p>‘ದಲಿತ ವಿರೋಧಿ ನೀತಿ, ಪಲಾಯನವಾದ’ ಎಂದು ಬಿಜೆಪಿಯ ಸಿ.ಟಿ. ರವಿ, ರವಿಕುಮಾರ್, ಭಾರತಿ ಶೆಟ್ಟಿ ಘೋಷಣೆ ಕೂಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>