ಕೊರೊನಾ ವೈರಸ್ ಪ್ರಭಾವವು ದೇಶದೆಲ್ಲೆಡೆ ತುಂಬಾ ಉಗ್ರವಾಗಿ ಇರುವುದರಿಂದ, ಇದೆಲ್ಲವೂ ಶಾಂತವಾಗುವ ತನಕ ಹಾಗೂ ಆರೋಗ್ಯ ಇಲಾಖೆಯವರು ಸೂಚನೆ ಕೊಡುವವರೆಗೂ ಯಾವುದೇ ತರಹದ ಭಕ್ತರು ಸುತಾರಾಂ ಮಂತ್ರಾಲಯಕ್ಕೆ ಬರುವುದು ಬೇಡ. ಅಲ್ಲಲ್ಲಿಯೇ ರಾಯರ ಸೇವೆ ಮಾಡಿ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು ಎಂದು ಸಲಹೆ ನೀಡಿದ್ದಾರೆ.