<p><strong>ಬೆಂಗಳೂರು</strong>: ದೇವಸ್ಥಾನ, ಮಸೀದಿ ಮತ್ತು ಚರ್ಚ್ಗಳಲ್ಲಿ ಪಾಲಿಸಬೇಕಾದ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಅವುಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಸೂಚಿಸಿದೆ.</p>.<p><strong>ದೇವಸ್ಥಾನಗಳಿಗೆ ನಿಯಮ</strong><br />* ಜನದಟ್ಟಣೆ ಇರಬಾರದು. 6 ಅಡಿ ಅಂತರ ಪಾಲಿಸಬೇಕು, ಮಾಸ್ಕ್ ಧರಿಸುವುದು ಕಡ್ಡಾಯ.<br />* ದೇವಸ್ಥಾನದ ಬಾಗಿಲಲ್ಲಿ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿ ಮಾಡಲೇಬೇಕು. ದೇವಸ್ಥಾನಕ್ಕೆ ಬರುವವರು ಆಪ್ತಮಿತ್ರ ಆ್ಯಪ್ ಕಡ್ಡಾಯವಾಗಿ ತೋರಿಸಬೇಕು. ದೇವಸ್ಥಾನಕ್ಕೆ ಭೇಟಿ ಕೊಡುವ ಮೊದಲು ಸ್ಯಾನಿಟೈಸ್ ಮಾಡುವುದು ಕಡ್ಡಾಯ.<br />* ಪ್ರವೇಶಕ್ಕೆ ಮತ್ತು ಹೊರ ಹೋಗುವುದಕ್ಕೆ ಪ್ರತ್ಯೇಕ ದ್ವಾರಗಳ ವ್ಯವಸ್ಥೆಮಾಡುವುದು ಕಡ್ಡಾಯ. ದೇವಸ್ಥಾನದಲ್ಲಿರುವ ಪ್ರತಿಮೆ, ಪುಸ್ತಕ, ಕಂಬ ಇತ್ಯಾದಿಗಳನ್ನು ಮುಟ್ಟಬಾರದು. ಗುಂಪು ಹಾಡುಗಾರಿಕೆ, ಸಂಗೀತ ಕಚೇರಿಗಳಿಗೆ ಅನುಮತಿ ಇಲ್ಲ.<br />* ತೀರ್ಥ– ಪ್ರಸಾದ ವಿತರಣೆ, ತೀರ್ಥ ಪ್ರೋಕ್ಷಣೆ ಮಾಡುವಂತಿಲ್ಲ. ಅಂತರ ಪಾಲಿಸುವುದು ಕಡ್ಡಾಯ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು.</p>.<p><strong>ಚರ್ಚ್ಗಳಿಗೆ ನಿಯಮ</strong><br />*ಸ್ವಚ್ಚತೆಯ ಜತೆಗೆ, ವೈಯಕ್ತಿಕ ಅಂತರ ಕಾಪಾಡಬೇಕು. ಗುಂಪಿನಲ್ಲಿ ಚರ್ಚ್ ಪ್ರವೇಶಿಸುವಂತಿಲ್ಲ. ಧಾರ್ಮಿಕ ಕ್ರಿಯೆ ಆರಂಭಕ್ಕೂ ಅರ್ಧ ಗಂಟೆ ಮೊದಲೇ ಬರಬೇಕು.<br />* ಥರ್ಮಲ್ ಸ್ಕ್ರೀನಿಂಗ್ ಬಳಿಕವೇ ಪ್ರತಿಯೊಬ್ಬರನ್ನೂ ಒಳಗೆ ಬಿಡಬೇಕು. ಒಂದು ಬೆಂಚ್ನಲ್ಲಿಇಬ್ಬರಿಗೆ ಮಾತ್ರ ಕೂರಲು ಅವಕಾಶ ನೀಡಬೇಕು. ಪ್ರಸಾದವನ್ನು ಬಾಯಿಗೆ ಹಾಕದೇ ಕೈಗೆ ನೀಡಬೇಕು.<br />* ಪವಿತ್ರ ಜಲ ಪ್ರೋಕ್ಷಣೆ ನಿಷಿದ್ಧ, ದೇವರ ಮೂರ್ತಿ ಮತ್ತು ಇತರ ಧಾರ್ಮಿಕ ಚಿಹ್ನೆಗಳನ್ನು ಮುಟ್ಟುವಂತಿಲ್ಲ ಮತ್ತು ಮುತ್ತಿಡುವಂತಿಲ್ಲ. ಪೂಜೆ ಮುಗಿದ ತಕ್ಷಣ ಅನಗತ್ಯವಾಗಿ ಗುಂಪು ಸೇರಿ ಮಾತನಾಡುವಂತಿಲ್ಲ.<br />* ಪೂಜೆಗೆ ಮೊದಲು ಮತ್ತು ನಂತರ ಕಡ್ಡಾಯವಾಗಿ ಸ್ಯಾನಿಟೈಸೇಶನ್ಮಾಡಬೇಕು. ಚರ್ಚ್ನಿಂದ ಹೊರಗೆಯೂ ಅಭಿನಂದಿಸಲು ಮತ್ತು ಇತರ ಕಾರಣಗಳಿಗೆ ಹಸ್ತ ಲಾಘವ ಮಾಡುವುದು ಅಥವಾ ತಬ್ಬಿಕೊಳ್ಳುವುದನ್ನು ನಿಷೇಧಿಸಲಾಗಿದೆ.<br />* ಬೌದ್ಧ, ಜೈನ, ಪಾರ್ಸಿ, ಸಿಖ್ ಮಂದಿರಗಳಿಗೂ ಇದೇ ರೀತಿಯಲ್ಲಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.</p>.<p><strong>ಮಸೀದಿಗಳಿಗೆ ನಿಯಮ</strong><br />* ಸಾಮೂಹಿಕ ಪ್ರಾರ್ಥನೆ ನಿಷಿದ್ಧ, ನಮಾಜ್ಗೆ ಮಸೀದಿ ಚಾಪೆ ಬಳಸುವಂತಿಲ್ಲ ಮನೆಯಿಂದಲೇ ಒಯ್ಯಬೇಕು ಮತ್ತು ಹಿಂದಕ್ಕೆ ತೆಗೆದುಕೊಂಡು ಹೋಗಬೇಕು. ಜಾಗೃತಿ ಫಲಕ ಅಳವಡಿಸುವುದು ಕಡ್ಡಾಯ.<br />* ನಮಾಜ್ಗೆ ಮುನ್ನ ಮತ್ತು ನಂತರ ಪ್ರಾರ್ಥನಾ ಸ್ಥಳವನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು. ವೈಯಕ್ತಿಕ ಅಂತರ ಇರಲೇಬೇಕು.<br />* ಪ್ರಾರ್ಥನೆಗೆ ಸಮಯ ನಿಗದಿ ಮಾಡಲಾಗಿದೆ; ಮಧ್ಯಾಹ್ನ 12.45 ರಿಂದ 1.15, ಮಧ್ಯಾಹ್ನ 1.30 ರಿಂದ 2.00, ಮಧ್ಯಾಹ್ನ 2.15 ರಿಂದ 3.00 ಗಂಟೆಯವರೆಗೆ.<br />* ಮಕ್ತಾದ್ ಮತ್ತು ಮದರಸಾ ಧಾರ್ಮಿಕ ಶಿಕ್ಷಣ ಕೇಂದ್ರಗಳಲ್ಲಿ ಅಧ್ಯಯನಕ್ಕೆ ಅವಕಾಶ ಇಲ್ಲ. ಧಾರ್ಮಿಕ ಪಠಣ, ಚಿಂತನ ಮಂಥನ ಅವಕಾಶ ಇಲ್ಲ.<br />* ಮಸೀದಿಯಲ್ಲಿ ಮದುವೆಗೆ ಅವಕಾಶ ಇಲ್ಲ.<br />* ಪರಸ್ಪರ ಆಲಿಂಗನ, ಹಸ್ತಲಾಘವ ಮತ್ತು ಶುಭಕೋರಲು ಅವಕಾಶ ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ದೇವಸ್ಥಾನ, ಮಸೀದಿ ಮತ್ತು ಚರ್ಚ್ಗಳಲ್ಲಿ ಪಾಲಿಸಬೇಕಾದ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಅವುಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಸೂಚಿಸಿದೆ.</p>.<p><strong>ದೇವಸ್ಥಾನಗಳಿಗೆ ನಿಯಮ</strong><br />* ಜನದಟ್ಟಣೆ ಇರಬಾರದು. 6 ಅಡಿ ಅಂತರ ಪಾಲಿಸಬೇಕು, ಮಾಸ್ಕ್ ಧರಿಸುವುದು ಕಡ್ಡಾಯ.<br />* ದೇವಸ್ಥಾನದ ಬಾಗಿಲಲ್ಲಿ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿ ಮಾಡಲೇಬೇಕು. ದೇವಸ್ಥಾನಕ್ಕೆ ಬರುವವರು ಆಪ್ತಮಿತ್ರ ಆ್ಯಪ್ ಕಡ್ಡಾಯವಾಗಿ ತೋರಿಸಬೇಕು. ದೇವಸ್ಥಾನಕ್ಕೆ ಭೇಟಿ ಕೊಡುವ ಮೊದಲು ಸ್ಯಾನಿಟೈಸ್ ಮಾಡುವುದು ಕಡ್ಡಾಯ.<br />* ಪ್ರವೇಶಕ್ಕೆ ಮತ್ತು ಹೊರ ಹೋಗುವುದಕ್ಕೆ ಪ್ರತ್ಯೇಕ ದ್ವಾರಗಳ ವ್ಯವಸ್ಥೆಮಾಡುವುದು ಕಡ್ಡಾಯ. ದೇವಸ್ಥಾನದಲ್ಲಿರುವ ಪ್ರತಿಮೆ, ಪುಸ್ತಕ, ಕಂಬ ಇತ್ಯಾದಿಗಳನ್ನು ಮುಟ್ಟಬಾರದು. ಗುಂಪು ಹಾಡುಗಾರಿಕೆ, ಸಂಗೀತ ಕಚೇರಿಗಳಿಗೆ ಅನುಮತಿ ಇಲ್ಲ.<br />* ತೀರ್ಥ– ಪ್ರಸಾದ ವಿತರಣೆ, ತೀರ್ಥ ಪ್ರೋಕ್ಷಣೆ ಮಾಡುವಂತಿಲ್ಲ. ಅಂತರ ಪಾಲಿಸುವುದು ಕಡ್ಡಾಯ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು.</p>.<p><strong>ಚರ್ಚ್ಗಳಿಗೆ ನಿಯಮ</strong><br />*ಸ್ವಚ್ಚತೆಯ ಜತೆಗೆ, ವೈಯಕ್ತಿಕ ಅಂತರ ಕಾಪಾಡಬೇಕು. ಗುಂಪಿನಲ್ಲಿ ಚರ್ಚ್ ಪ್ರವೇಶಿಸುವಂತಿಲ್ಲ. ಧಾರ್ಮಿಕ ಕ್ರಿಯೆ ಆರಂಭಕ್ಕೂ ಅರ್ಧ ಗಂಟೆ ಮೊದಲೇ ಬರಬೇಕು.<br />* ಥರ್ಮಲ್ ಸ್ಕ್ರೀನಿಂಗ್ ಬಳಿಕವೇ ಪ್ರತಿಯೊಬ್ಬರನ್ನೂ ಒಳಗೆ ಬಿಡಬೇಕು. ಒಂದು ಬೆಂಚ್ನಲ್ಲಿಇಬ್ಬರಿಗೆ ಮಾತ್ರ ಕೂರಲು ಅವಕಾಶ ನೀಡಬೇಕು. ಪ್ರಸಾದವನ್ನು ಬಾಯಿಗೆ ಹಾಕದೇ ಕೈಗೆ ನೀಡಬೇಕು.<br />* ಪವಿತ್ರ ಜಲ ಪ್ರೋಕ್ಷಣೆ ನಿಷಿದ್ಧ, ದೇವರ ಮೂರ್ತಿ ಮತ್ತು ಇತರ ಧಾರ್ಮಿಕ ಚಿಹ್ನೆಗಳನ್ನು ಮುಟ್ಟುವಂತಿಲ್ಲ ಮತ್ತು ಮುತ್ತಿಡುವಂತಿಲ್ಲ. ಪೂಜೆ ಮುಗಿದ ತಕ್ಷಣ ಅನಗತ್ಯವಾಗಿ ಗುಂಪು ಸೇರಿ ಮಾತನಾಡುವಂತಿಲ್ಲ.<br />* ಪೂಜೆಗೆ ಮೊದಲು ಮತ್ತು ನಂತರ ಕಡ್ಡಾಯವಾಗಿ ಸ್ಯಾನಿಟೈಸೇಶನ್ಮಾಡಬೇಕು. ಚರ್ಚ್ನಿಂದ ಹೊರಗೆಯೂ ಅಭಿನಂದಿಸಲು ಮತ್ತು ಇತರ ಕಾರಣಗಳಿಗೆ ಹಸ್ತ ಲಾಘವ ಮಾಡುವುದು ಅಥವಾ ತಬ್ಬಿಕೊಳ್ಳುವುದನ್ನು ನಿಷೇಧಿಸಲಾಗಿದೆ.<br />* ಬೌದ್ಧ, ಜೈನ, ಪಾರ್ಸಿ, ಸಿಖ್ ಮಂದಿರಗಳಿಗೂ ಇದೇ ರೀತಿಯಲ್ಲಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.</p>.<p><strong>ಮಸೀದಿಗಳಿಗೆ ನಿಯಮ</strong><br />* ಸಾಮೂಹಿಕ ಪ್ರಾರ್ಥನೆ ನಿಷಿದ್ಧ, ನಮಾಜ್ಗೆ ಮಸೀದಿ ಚಾಪೆ ಬಳಸುವಂತಿಲ್ಲ ಮನೆಯಿಂದಲೇ ಒಯ್ಯಬೇಕು ಮತ್ತು ಹಿಂದಕ್ಕೆ ತೆಗೆದುಕೊಂಡು ಹೋಗಬೇಕು. ಜಾಗೃತಿ ಫಲಕ ಅಳವಡಿಸುವುದು ಕಡ್ಡಾಯ.<br />* ನಮಾಜ್ಗೆ ಮುನ್ನ ಮತ್ತು ನಂತರ ಪ್ರಾರ್ಥನಾ ಸ್ಥಳವನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು. ವೈಯಕ್ತಿಕ ಅಂತರ ಇರಲೇಬೇಕು.<br />* ಪ್ರಾರ್ಥನೆಗೆ ಸಮಯ ನಿಗದಿ ಮಾಡಲಾಗಿದೆ; ಮಧ್ಯಾಹ್ನ 12.45 ರಿಂದ 1.15, ಮಧ್ಯಾಹ್ನ 1.30 ರಿಂದ 2.00, ಮಧ್ಯಾಹ್ನ 2.15 ರಿಂದ 3.00 ಗಂಟೆಯವರೆಗೆ.<br />* ಮಕ್ತಾದ್ ಮತ್ತು ಮದರಸಾ ಧಾರ್ಮಿಕ ಶಿಕ್ಷಣ ಕೇಂದ್ರಗಳಲ್ಲಿ ಅಧ್ಯಯನಕ್ಕೆ ಅವಕಾಶ ಇಲ್ಲ. ಧಾರ್ಮಿಕ ಪಠಣ, ಚಿಂತನ ಮಂಥನ ಅವಕಾಶ ಇಲ್ಲ.<br />* ಮಸೀದಿಯಲ್ಲಿ ಮದುವೆಗೆ ಅವಕಾಶ ಇಲ್ಲ.<br />* ಪರಸ್ಪರ ಆಲಿಂಗನ, ಹಸ್ತಲಾಘವ ಮತ್ತು ಶುಭಕೋರಲು ಅವಕಾಶ ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>