<p><strong>ಬೆಂಗಳೂರು: </strong>ಕೋವಿಡ್ ಲಾಕ್ಡೌನ್ ಸಂದರ್ಭ ಕಾರ್ಮಿಕರಿಗೆ ಆಹಾರದ ಕಿಟ್, ಊಟ ಮತ್ತು ಪರಿಹಾರ ಧನ ವಿತರಿಸಲು ಮಾಡಿರುವ ಖರ್ಚಿನಲ್ಲಿ ₹62 ಕೋಟಿ ಅನುಮಾನಕ್ಕೆಡೆ ಮಾಡಿದ್ದು, 15 ದಿನಗಳಲ್ಲಿ ನಿಖರ ಲೆಕ್ಕಗಳನ್ನು ಒಪ್ಪಿಸಬೇಕು ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (ಪಿಎಸಿ) ಅಧ್ಯಕ್ಷ ಎಚ್.ಕೆ.ಪಾಟೀಲ ಕಟ್ಟಪ್ಪಣೆ ಮಾಡಿದ್ದಾರೆ.</p>.<p>ಮಂಗಳವಾರ ನಡೆದ ಸಭೆಯಲ್ಲಿ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹೇಶ್ವರರಾವ್ ಅವರು ಒಪ್ಪಿಸಿದ ಲೆಕ್ಕಪತ್ರದ ಬಗ್ಗೆ ಸಭೆಯಲ್ಲಿ ಬಹುತೇಕ ಎಲ್ಲ ಸದಸ್ಯರಿಂದಲೂ ಅಸಮಾಧಾನ ವ್ಯಕ್ತವಾಯಿತು.</p>.<p>ಕಳೆದ ಸಭೆಯಲ್ಲಿ ಕಾರ್ಮಿಕರಿಗಾಗಿ ಮಾಡಿದ ಖರ್ಚುವೆಚ್ಚಗಳ ಬಗ್ಗೆ 10 ಪ್ರಶ್ನೆಗಳನ್ನು ಕಾರ್ಮಿಕ ಇಲಾಖೆಗೆ ಕೇಳಲಾಗಿತ್ತು. ಊಟ, ಆಹಾರ ಕಿಟ್ಗಳ ವಿತರಣೆ, ₹5,000ರ ಪರಿಹಾರ ಎಷ್ಟು ಕಾರ್ಮಿಕರಿಗೆ ಪಾವತಿಸಲಾಗಿದೆ ಎಂಬ ಪ್ರಶ್ನೆಗಳೂ ಇದ್ದವು.</p>.<p>‘ಒಟ್ಟು14 ಲಕ್ಷ ಕಾರ್ಮಿಕರಿದ್ದಾರೆ. ಕಿಟ್ಗಳಿಗೆ ₹69 ಕೋಟಿ, ಊಟ ಮತ್ತಿತರ ವ್ಯವಸ್ಥೆಗೆ ₹39 ಕೋಟಿ ಸೇರಿದಂತೆ ಒಟ್ಟು ₹ 900 ಕೋಟಿ ಖರ್ಚು ಮಾಡಲಾಗಿದೆ’ ಎಂದು ಮಹೇಶ್ವರರಾವ್ ತಿಳಿಸಿದರು.</p>.<p>ಇದರಲ್ಲಿ ₹62 ಕೋಟಿ ಖರ್ಚು ಸಂದೇಹಾಸ್ಪದವಾಗಿದೆ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿರಲ್ಲದೆ, ಲೆಕ್ಕವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರೆಂದು ಮೂಲಗಳು ತಿಳಿಸಿವೆ.</p>.<p>‘ಕಿಟ್ಗಳು ಯಾರಿಗೆ ಕೊಟ್ಟಿದ್ದೀರಿ? ಅವರಲ್ಲಿ ಸಂಘಟಿತರು ಎಷ್ಟು ಮತ್ತು ಅಸಂಘಟಿತ ಕಾರ್ಮಿಕರು ಎಷ್ಟು ಎಂಬ ಮಾಹಿತಿ ನೀಡಿ. ಒಟ್ಟು ಖರ್ಚು ಮಾಡಿದ ಹಣದ ಬಗ್ಗೆ ಜಿಲ್ಲಾವಾರು ಮಾಹಿತಿಯನ್ನು ಪಡೆದುಕೊಂಡು 15 ದಿನಗಳಲ್ಲಿ ನೀಡಬೇಕು’ ಎಂದು ಅಧ್ಯಕ್ಷ<br />ಎಚ್.ಕೆ.ಪಾಟೀಲ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.</p>.<p>ಬಿಜೆಪಿ ಸದಸ್ಯರಾದ ಉಮೇಶ ಕತ್ತಿ, ರವಿಸುಬ್ರಹ್ಮಣ್ಯ, ವೈ.ಎ.ನಾರಾಯಣಸ್ವಾಮಿ, ಜೆಡಿಎಸ್ನ ಎ.ಟಿ.ರಾಮಸ್ವಾಮಿ ಅಧಿಕಾರಿಗಳು ನೀಡಿದ ಲೆಕ್ಕದ ಬಗ್ಗೆ ಬೇಸರ ವ್ಯಕ್ತಪಡಿಸಿದರು.</p>.<p>ಉಮೇಶ ಕತ್ತಿ ಮಾತನಾಡಿ, ‘ನಮ್ಮಕ್ಷೇತ್ರಕ್ಕೆ ಒಂದೇ ಒಂದೂ ಕಿಟ್ ಬಂದಿಲ್ಲ’ ಎಂದು ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ರವಿ<br />ಸುಬ್ರಹ್ಮಣ್ಯ, ‘ನಮ್ಮ ಕ್ಷೇತ್ರಕ್ಕೆ ನಾಲ್ಕು ಸಾವಿರ ಕಿಟ್ ಪಡೆಯಲು ಹರಸಾಹಸಪಡಬೇಕಾಯಿತು’ ಎಂದು ಹೇಳಿದರು.<br />‘ಒಂದು ಲಕ್ಷ ಕಟ್ಟಡ ಕಾರ್ಮಿಕರಿಗೆ ತಲಾ ₹5,000 ಪರಿಹಾರ ಧನವನ್ನು ನೀಡಲಾಗಿದೆ ಎಂದು ಹೇಳಲಾಗಿದೆ. ಆದರೆ ಇದಕ್ಕೆ ದಾಖಲೆಗಳೇ ಇಲ್ಲ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು’ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕೋವಿಡ್ ಲಾಕ್ಡೌನ್ ಸಂದರ್ಭ ಕಾರ್ಮಿಕರಿಗೆ ಆಹಾರದ ಕಿಟ್, ಊಟ ಮತ್ತು ಪರಿಹಾರ ಧನ ವಿತರಿಸಲು ಮಾಡಿರುವ ಖರ್ಚಿನಲ್ಲಿ ₹62 ಕೋಟಿ ಅನುಮಾನಕ್ಕೆಡೆ ಮಾಡಿದ್ದು, 15 ದಿನಗಳಲ್ಲಿ ನಿಖರ ಲೆಕ್ಕಗಳನ್ನು ಒಪ್ಪಿಸಬೇಕು ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (ಪಿಎಸಿ) ಅಧ್ಯಕ್ಷ ಎಚ್.ಕೆ.ಪಾಟೀಲ ಕಟ್ಟಪ್ಪಣೆ ಮಾಡಿದ್ದಾರೆ.</p>.<p>ಮಂಗಳವಾರ ನಡೆದ ಸಭೆಯಲ್ಲಿ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹೇಶ್ವರರಾವ್ ಅವರು ಒಪ್ಪಿಸಿದ ಲೆಕ್ಕಪತ್ರದ ಬಗ್ಗೆ ಸಭೆಯಲ್ಲಿ ಬಹುತೇಕ ಎಲ್ಲ ಸದಸ್ಯರಿಂದಲೂ ಅಸಮಾಧಾನ ವ್ಯಕ್ತವಾಯಿತು.</p>.<p>ಕಳೆದ ಸಭೆಯಲ್ಲಿ ಕಾರ್ಮಿಕರಿಗಾಗಿ ಮಾಡಿದ ಖರ್ಚುವೆಚ್ಚಗಳ ಬಗ್ಗೆ 10 ಪ್ರಶ್ನೆಗಳನ್ನು ಕಾರ್ಮಿಕ ಇಲಾಖೆಗೆ ಕೇಳಲಾಗಿತ್ತು. ಊಟ, ಆಹಾರ ಕಿಟ್ಗಳ ವಿತರಣೆ, ₹5,000ರ ಪರಿಹಾರ ಎಷ್ಟು ಕಾರ್ಮಿಕರಿಗೆ ಪಾವತಿಸಲಾಗಿದೆ ಎಂಬ ಪ್ರಶ್ನೆಗಳೂ ಇದ್ದವು.</p>.<p>‘ಒಟ್ಟು14 ಲಕ್ಷ ಕಾರ್ಮಿಕರಿದ್ದಾರೆ. ಕಿಟ್ಗಳಿಗೆ ₹69 ಕೋಟಿ, ಊಟ ಮತ್ತಿತರ ವ್ಯವಸ್ಥೆಗೆ ₹39 ಕೋಟಿ ಸೇರಿದಂತೆ ಒಟ್ಟು ₹ 900 ಕೋಟಿ ಖರ್ಚು ಮಾಡಲಾಗಿದೆ’ ಎಂದು ಮಹೇಶ್ವರರಾವ್ ತಿಳಿಸಿದರು.</p>.<p>ಇದರಲ್ಲಿ ₹62 ಕೋಟಿ ಖರ್ಚು ಸಂದೇಹಾಸ್ಪದವಾಗಿದೆ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿರಲ್ಲದೆ, ಲೆಕ್ಕವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರೆಂದು ಮೂಲಗಳು ತಿಳಿಸಿವೆ.</p>.<p>‘ಕಿಟ್ಗಳು ಯಾರಿಗೆ ಕೊಟ್ಟಿದ್ದೀರಿ? ಅವರಲ್ಲಿ ಸಂಘಟಿತರು ಎಷ್ಟು ಮತ್ತು ಅಸಂಘಟಿತ ಕಾರ್ಮಿಕರು ಎಷ್ಟು ಎಂಬ ಮಾಹಿತಿ ನೀಡಿ. ಒಟ್ಟು ಖರ್ಚು ಮಾಡಿದ ಹಣದ ಬಗ್ಗೆ ಜಿಲ್ಲಾವಾರು ಮಾಹಿತಿಯನ್ನು ಪಡೆದುಕೊಂಡು 15 ದಿನಗಳಲ್ಲಿ ನೀಡಬೇಕು’ ಎಂದು ಅಧ್ಯಕ್ಷ<br />ಎಚ್.ಕೆ.ಪಾಟೀಲ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.</p>.<p>ಬಿಜೆಪಿ ಸದಸ್ಯರಾದ ಉಮೇಶ ಕತ್ತಿ, ರವಿಸುಬ್ರಹ್ಮಣ್ಯ, ವೈ.ಎ.ನಾರಾಯಣಸ್ವಾಮಿ, ಜೆಡಿಎಸ್ನ ಎ.ಟಿ.ರಾಮಸ್ವಾಮಿ ಅಧಿಕಾರಿಗಳು ನೀಡಿದ ಲೆಕ್ಕದ ಬಗ್ಗೆ ಬೇಸರ ವ್ಯಕ್ತಪಡಿಸಿದರು.</p>.<p>ಉಮೇಶ ಕತ್ತಿ ಮಾತನಾಡಿ, ‘ನಮ್ಮಕ್ಷೇತ್ರಕ್ಕೆ ಒಂದೇ ಒಂದೂ ಕಿಟ್ ಬಂದಿಲ್ಲ’ ಎಂದು ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ರವಿ<br />ಸುಬ್ರಹ್ಮಣ್ಯ, ‘ನಮ್ಮ ಕ್ಷೇತ್ರಕ್ಕೆ ನಾಲ್ಕು ಸಾವಿರ ಕಿಟ್ ಪಡೆಯಲು ಹರಸಾಹಸಪಡಬೇಕಾಯಿತು’ ಎಂದು ಹೇಳಿದರು.<br />‘ಒಂದು ಲಕ್ಷ ಕಟ್ಟಡ ಕಾರ್ಮಿಕರಿಗೆ ತಲಾ ₹5,000 ಪರಿಹಾರ ಧನವನ್ನು ನೀಡಲಾಗಿದೆ ಎಂದು ಹೇಳಲಾಗಿದೆ. ಆದರೆ ಇದಕ್ಕೆ ದಾಖಲೆಗಳೇ ಇಲ್ಲ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು’ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>