<p><strong>ಬೆಂಗಳೂರು</strong>: ‘ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ವಿವಿಧ ಕಂಪನಿಗಳು ರಾಜ್ಯಕ್ಕೆ ₹13,070 ಕೋಟಿ ಮೊತ್ತದ ಹೂಡಿಕೆಯನ್ನು ದೃಢಪಡಿಸಿವೆ’ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.</p>.<p>‘ದಾವೋಸ್ ಸಮಾವೇಶ ಫಲಪ್ರದವಾಗಿದೆ. ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ 45ಕ್ಕೂ ಹೆಚ್ಚು ಉದ್ಯಮ ಸಂಸ್ಥೆಗಳ ಜತೆಗಿನ ಸಭೆಯಲ್ಲಿ ವಿವರಿಸಲಾಗಿದೆ. ಹಲವು ಕಂಪನಿಗಳು ರಾಜ್ಯದಲ್ಲಿ ಹೂಡಿಕೆಗೆ ಆಸಕ್ತಿ ತೋರಿಸಿವೆ’ ಎಂದು ದಾವೋಸ್ನಿಂದ ವಾಪಸಾದ ನಂತರ ಎಂ.ಬಿ.ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>‘ಆರ್.ಪಿ.ಸಂಜೀವ್ ಗೋಯೆಂಕಾ ಉದ್ಯಮ ಸಮೂಹವು ಮುಂದಿನ ಮೂರು ವರ್ಷಗಳಲ್ಲಿ ವಿಜಯಪುರ ಮತ್ತು ಬಳ್ಳಾರಿಯಲ್ಲಿ ಮರುಬಳಕೆ ಇಂಧನ ತಯಾರಿಕೆ ಘಟಕ ಆರಂಭಕ್ಕೆ ₹10,500 ಕೋಟಿ ಹೂಡಿಕೆ ಮಾಡಲಿದೆ. ಜಾಗತಿಕ ಮದ್ಯ ತಯಾರಿಕಾ ಕಂಪನಿ ಕಾರ್ಲ್ಸ್ಬರ್ಗ್, ನಂಜನಗೂಡಿನಲ್ಲಿ ಬಾಟ್ಲಿಂಗ್ ಘಟಕ ಸ್ಥಾಪನೆಗೆ ₹350 ಕೋಟಿ ಹೂಡಿಕೆ ಮಾಡಲಿದೆ’ ಎಂದು ವಿವರಿಸಿದ್ದಾರೆ.</p>.<p>‘ಐನಾಕ್ವ್ ಜಿಎಲ್ಎಕ್ಸ್ ಕಂಪನಿಯು ಕುಷ್ಟಗಿಯಲ್ಲಿನ ತನ್ನ ಪವನ ವಿದ್ಯುತ್ ಘಟಕಗಳ ಟರ್ಬೈನ್ ಬ್ಲೇಡ್ ತಯಾರಿಕೆ, ದೈತ್ಯ ಗೋಪುರ ಮತ್ತು ಸೌರ ಫಲಕ ತಯಾರಿಕಾ ಘಟಕ ವಿಸ್ತರಣೆಗೆ ₹400 ಕೋಟಿ ವೆಚ್ಚ ಮಾಡಲಿದೆ. ಸ್ನೈಡರ್ ಎಲೆಕ್ಟ್ರಿಕ್ ಕಂಪನಿಯು ಐಟಿ ಕ್ಷೇತ್ರದಲ್ಲಿ ₹1,520 ಕೋಟಿಯ ಹೂಡಿಕೆ ಘೋಷಿಸಿದೆ. ದ್ವಿಚಕ್ರ ವಾಹನಗಳ ಬಿಡಿಭಾಗಗಳ ತಯಾರಿಕಾ ಕಂಪನಿ ಬೆಲ್ರೈಸ್ ಇಂಡಸ್ಟ್ರೀಸ್ ಮೈಸೂರಿನಲ್ಲಿ ತನ್ನ ಘಟಕವನ್ನು ₹300 ಕೋಟಿ ವೆಚ್ಚದಲ್ಲಿ ವಿಸ್ತರಣೆ ಮಾಡಲಿದೆ’ ಎಂದಿದ್ದಾರೆ.</p>.<p>‘ಕೋಕ ಕೋಲಾ ಕಂಪನಿಯು ಭಾರತದಲ್ಲಿ ₹25,000 ಕೋಟಿ ಹೂಡಿಕೆಗೆ ಮುಂದಾಗಿದೆ. ಈ ಬಂಡವಾಳದಲ್ಲಿ ರಾಜ್ಯಕ್ಕೂ ಸ್ವಲ್ಪ ಭಾಗವನ್ನು ಆಕರ್ಷಿಸುವ ಸಲುವಾಗಿ ಮಾತುಕತೆ ನಡೆದಿದೆ. ದಾಬಸ್ಪೇಟೆ–ದೊಡ್ಡಬಳ್ಳಾಪುರ ಮಧ್ಯೆ ಸ್ಥಾಪಿಸಲಾಗುವ ಕ್ವಿನ್ ಸಿಟಿಯಲ್ಲಿ ಹೂಡಿಕೆಗೆ ಹಲವು ಜಾಗತಿಕ ಕಂಪನಿಗಳು ಆಸಕ್ತಿ ತೋರಿಸಿವೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ವಿವಿಧ ಕಂಪನಿಗಳು ರಾಜ್ಯಕ್ಕೆ ₹13,070 ಕೋಟಿ ಮೊತ್ತದ ಹೂಡಿಕೆಯನ್ನು ದೃಢಪಡಿಸಿವೆ’ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.</p>.<p>‘ದಾವೋಸ್ ಸಮಾವೇಶ ಫಲಪ್ರದವಾಗಿದೆ. ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ 45ಕ್ಕೂ ಹೆಚ್ಚು ಉದ್ಯಮ ಸಂಸ್ಥೆಗಳ ಜತೆಗಿನ ಸಭೆಯಲ್ಲಿ ವಿವರಿಸಲಾಗಿದೆ. ಹಲವು ಕಂಪನಿಗಳು ರಾಜ್ಯದಲ್ಲಿ ಹೂಡಿಕೆಗೆ ಆಸಕ್ತಿ ತೋರಿಸಿವೆ’ ಎಂದು ದಾವೋಸ್ನಿಂದ ವಾಪಸಾದ ನಂತರ ಎಂ.ಬಿ.ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>‘ಆರ್.ಪಿ.ಸಂಜೀವ್ ಗೋಯೆಂಕಾ ಉದ್ಯಮ ಸಮೂಹವು ಮುಂದಿನ ಮೂರು ವರ್ಷಗಳಲ್ಲಿ ವಿಜಯಪುರ ಮತ್ತು ಬಳ್ಳಾರಿಯಲ್ಲಿ ಮರುಬಳಕೆ ಇಂಧನ ತಯಾರಿಕೆ ಘಟಕ ಆರಂಭಕ್ಕೆ ₹10,500 ಕೋಟಿ ಹೂಡಿಕೆ ಮಾಡಲಿದೆ. ಜಾಗತಿಕ ಮದ್ಯ ತಯಾರಿಕಾ ಕಂಪನಿ ಕಾರ್ಲ್ಸ್ಬರ್ಗ್, ನಂಜನಗೂಡಿನಲ್ಲಿ ಬಾಟ್ಲಿಂಗ್ ಘಟಕ ಸ್ಥಾಪನೆಗೆ ₹350 ಕೋಟಿ ಹೂಡಿಕೆ ಮಾಡಲಿದೆ’ ಎಂದು ವಿವರಿಸಿದ್ದಾರೆ.</p>.<p>‘ಐನಾಕ್ವ್ ಜಿಎಲ್ಎಕ್ಸ್ ಕಂಪನಿಯು ಕುಷ್ಟಗಿಯಲ್ಲಿನ ತನ್ನ ಪವನ ವಿದ್ಯುತ್ ಘಟಕಗಳ ಟರ್ಬೈನ್ ಬ್ಲೇಡ್ ತಯಾರಿಕೆ, ದೈತ್ಯ ಗೋಪುರ ಮತ್ತು ಸೌರ ಫಲಕ ತಯಾರಿಕಾ ಘಟಕ ವಿಸ್ತರಣೆಗೆ ₹400 ಕೋಟಿ ವೆಚ್ಚ ಮಾಡಲಿದೆ. ಸ್ನೈಡರ್ ಎಲೆಕ್ಟ್ರಿಕ್ ಕಂಪನಿಯು ಐಟಿ ಕ್ಷೇತ್ರದಲ್ಲಿ ₹1,520 ಕೋಟಿಯ ಹೂಡಿಕೆ ಘೋಷಿಸಿದೆ. ದ್ವಿಚಕ್ರ ವಾಹನಗಳ ಬಿಡಿಭಾಗಗಳ ತಯಾರಿಕಾ ಕಂಪನಿ ಬೆಲ್ರೈಸ್ ಇಂಡಸ್ಟ್ರೀಸ್ ಮೈಸೂರಿನಲ್ಲಿ ತನ್ನ ಘಟಕವನ್ನು ₹300 ಕೋಟಿ ವೆಚ್ಚದಲ್ಲಿ ವಿಸ್ತರಣೆ ಮಾಡಲಿದೆ’ ಎಂದಿದ್ದಾರೆ.</p>.<p>‘ಕೋಕ ಕೋಲಾ ಕಂಪನಿಯು ಭಾರತದಲ್ಲಿ ₹25,000 ಕೋಟಿ ಹೂಡಿಕೆಗೆ ಮುಂದಾಗಿದೆ. ಈ ಬಂಡವಾಳದಲ್ಲಿ ರಾಜ್ಯಕ್ಕೂ ಸ್ವಲ್ಪ ಭಾಗವನ್ನು ಆಕರ್ಷಿಸುವ ಸಲುವಾಗಿ ಮಾತುಕತೆ ನಡೆದಿದೆ. ದಾಬಸ್ಪೇಟೆ–ದೊಡ್ಡಬಳ್ಳಾಪುರ ಮಧ್ಯೆ ಸ್ಥಾಪಿಸಲಾಗುವ ಕ್ವಿನ್ ಸಿಟಿಯಲ್ಲಿ ಹೂಡಿಕೆಗೆ ಹಲವು ಜಾಗತಿಕ ಕಂಪನಿಗಳು ಆಸಕ್ತಿ ತೋರಿಸಿವೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>