ಹಲವು ವರ್ಷಗಳ ಹೋರಾಟದ ನಂತರ, ಪಾಲಿಕೆ ಕಚೇರಿ ಎದುರು ಸೋಮವಾರ ದಿಢೀರನೆ ಕಂಬ ನೆಟ್ಟು, ಕನ್ನಡ ಬಾವುಟ ಹಾರಿಸಲಾಗಿತ್ತು. ಈ ಹಿಂದೆ ಕನ್ನಡ ಬಾವುಟ ಹಾರಿಸಿದ್ದಾಗ ಹಿಂದೆಯೇ ಪೊಲೀಸರು ತೆರವುಗೊಳಿಸಿದ್ದರು. ಈಗಲೂ ತೆರವುಗೊಳಿಸಬಹುದೆಂದು ಕನ್ನಡ ಪರ ಹೋರಾಟಗಾರರು ಕಂಬ ಹಾಗೂ ಬಾವುಟಕ್ಕೆ ಕಾವಲು ನೀಡಿದರು. ಕೊರೆವ ಚಳಿಯಲ್ಲೂ ಅಹೋರಾತ್ರಿ ಮಲಗಿದ್ದರು. ‘ಧ್ವಜಸ್ತಂಭ ತೆರವುಗೊಳಿಸಬಾರದು’ ಎಂದು ಒತ್ತಾಯಿಸಿದ್ದರು.