<p><strong>ರಾಣೆಬೆನ್ನೂರು (ಹಾವೇರಿ ಜಿಲ್ಲೆ):</strong> ತಾಲ್ಲೂಕಿನ ಸುಕ್ಷೇತ್ರ ದೇವರಗುಡ್ಡ ಗ್ರಾಮದಲ್ಲಿ ವಿಜಯದಶಮಿ (ದಸರಾ) ಹಬ್ಬದ ಮಾಲತೇಶ ದೇವರ ಕಾರ್ಣಿಕೋತ್ಸವ ಶುಕ್ರವಾರ ಜನಸಾಗರದ ಮಧ್ಯೆ ನಡೆಯಿತು.</p>.<p>ಕಾರ್ಣಿಕ ಗೊರವಪ್ಪ ನಾಗಪ್ಪಜ್ಜ ಉರ್ಮಿ ಅವರು 21 ಅಡಿ ಎತ್ತರದ ಬಿಲ್ಲನ್ನೇರಿ ‘ಆಕಾಶದತ್ತ ಚಿಗುರಿತು, ಬೇರು ಮುತ್ತಾತಲೇ ಪರಾಖ್’ ಎಂದು ಕಾರ್ಣಿಕ ನುಡಿದರು. ಕಾರ್ಣಿಕ ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರು 9 ದಿನ ಉಪವಾಸವಿದ್ದು, ಆಯುಧ ಪೂಜೆ ದಿವಸ ಈ ವರ್ಷದ ಭವಿಷ್ಯವಾಣಿ ನುಡಿಯುತ್ತಾರೆ.</p>.<p>ಚಾಮರ ಬೀಸುವವರು, ಕುದುರೆಕಾರರು, ವೀರಗಾರರ ಭಕ್ತಿಯ ಪರಾಕಾಷ್ಠೆ, ಡಮರಿನ ಸದ್ದಿನ ಅಲೆಯಲ್ಲಿ ಏಳುಕೋಟಿ, ಏಳುಕೋಟಿ, ಏಳುಕೋಟಿಗೋ ಚಾಂಗ್ಮಲೋ ಎಂದು ಭಕ್ತರಿಂದ ಘೋಷಣೆ ಮೊಳಗಿತು.</p>.<p>ಕಾರ್ಣಿಕ ನುಡಿ ಕುರಿತು ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಗುರೂಜಿ ಅವರು, ‘ಆಕಾಶದತ್ತ ಚಿಗುರಿತಲೇ ಎಂದರೆ ಒಳ್ಳೆಯ ಮಳೆ ಆಗಲಿದೆ ಎಂದು, ಬೇರು ಮುತ್ತಾಯಿತಲೇ ಎಂದರೆ, ರೈತರಿಗೆ ಒಳ್ಳೆಯ ಬೆಳೆ ಬರುತ್ತದೆ ಎಂದು ಅರ್ಥೈಸಬಹುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಣೆಬೆನ್ನೂರು (ಹಾವೇರಿ ಜಿಲ್ಲೆ):</strong> ತಾಲ್ಲೂಕಿನ ಸುಕ್ಷೇತ್ರ ದೇವರಗುಡ್ಡ ಗ್ರಾಮದಲ್ಲಿ ವಿಜಯದಶಮಿ (ದಸರಾ) ಹಬ್ಬದ ಮಾಲತೇಶ ದೇವರ ಕಾರ್ಣಿಕೋತ್ಸವ ಶುಕ್ರವಾರ ಜನಸಾಗರದ ಮಧ್ಯೆ ನಡೆಯಿತು.</p>.<p>ಕಾರ್ಣಿಕ ಗೊರವಪ್ಪ ನಾಗಪ್ಪಜ್ಜ ಉರ್ಮಿ ಅವರು 21 ಅಡಿ ಎತ್ತರದ ಬಿಲ್ಲನ್ನೇರಿ ‘ಆಕಾಶದತ್ತ ಚಿಗುರಿತು, ಬೇರು ಮುತ್ತಾತಲೇ ಪರಾಖ್’ ಎಂದು ಕಾರ್ಣಿಕ ನುಡಿದರು. ಕಾರ್ಣಿಕ ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರು 9 ದಿನ ಉಪವಾಸವಿದ್ದು, ಆಯುಧ ಪೂಜೆ ದಿವಸ ಈ ವರ್ಷದ ಭವಿಷ್ಯವಾಣಿ ನುಡಿಯುತ್ತಾರೆ.</p>.<p>ಚಾಮರ ಬೀಸುವವರು, ಕುದುರೆಕಾರರು, ವೀರಗಾರರ ಭಕ್ತಿಯ ಪರಾಕಾಷ್ಠೆ, ಡಮರಿನ ಸದ್ದಿನ ಅಲೆಯಲ್ಲಿ ಏಳುಕೋಟಿ, ಏಳುಕೋಟಿ, ಏಳುಕೋಟಿಗೋ ಚಾಂಗ್ಮಲೋ ಎಂದು ಭಕ್ತರಿಂದ ಘೋಷಣೆ ಮೊಳಗಿತು.</p>.<p>ಕಾರ್ಣಿಕ ನುಡಿ ಕುರಿತು ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಗುರೂಜಿ ಅವರು, ‘ಆಕಾಶದತ್ತ ಚಿಗುರಿತಲೇ ಎಂದರೆ ಒಳ್ಳೆಯ ಮಳೆ ಆಗಲಿದೆ ಎಂದು, ಬೇರು ಮುತ್ತಾಯಿತಲೇ ಎಂದರೆ, ರೈತರಿಗೆ ಒಳ್ಳೆಯ ಬೆಳೆ ಬರುತ್ತದೆ ಎಂದು ಅರ್ಥೈಸಬಹುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>