ಹುಬ್ಬಳ್ಳಿ: ಧಾರವಾಡದ ಬಹುಮಹಡಿ ಕಟ್ಟಡದ ಅವಶೇಷಗಳಡಿ 60 ಗಂಟೆಗಳ ಕಾಲ ಸಿಲುಕಿದ್ದ ದಿಲೀಪ್ ಮತ್ತು ಸಂಗೀತಾ ದಂಪತಿಯನ್ನು ರಕ್ಷಣಾ ಸಿಬ್ಬಂದಿ ಜೀವಂತವಾಗಿ ಹೊರಕ್ಕೆ ತಂದಿದ್ದಾರೆ.
ದುರಂತದಲ್ಲಿ ಸಂಗೀತಾ ಅವರ ಕಾಲು ಮುರಿದಿದೆ ಎಂದು ಹೇಳಲಾಗುತ್ತಿದೆ. ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರಗೆ ರವಾನಿಸಲಾಗಿದೆ.
ಉಳಿದವರನ್ನು ಜೀವಂತವಾಗಿ ಹೊರ ತೆಗೆಯಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್ಡಿಆರ್ಎಫ್), ಎಸ್ಡಿಆರ್ಎಫ್ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.