‘ಬ್ರಿಟಿಷರ ಪಾರ್ಲಿಮೆಂಟ್ ಪರಿಕಲ್ಪನೆ, ವಕೀಲರು, ವೈದ್ಯರು ಮತ್ತು ರೈಲಿನ ಬಗ್ಗೆ ಗಾಂಧೀಜಿ ತಮ್ಮ ಅಸಮಾಧಾನವನ್ನು ಈ ಪುಟ್ಟ ಕೃತಿಯಲ್ಲಿ ವ್ಯಕ್ತಪಡಿಸಿದ್ದರು. ಆಧುನಿಕ ಯಂತ್ರ ನಾಗರಿಕತೆಯ ವಿವರ, ವಿಮರ್ಶೆ ಮತ್ತು ವಿರೋಧವನ್ನು ವಿವರಿಸುತ್ತ ಅವರು, ಅದಕ್ಕೆ ಪರ್ಯಾಯವಾಗಿ ಹಿಂದೂಸ್ತಾನವು ಯಾವ ರೀತಿಯ ಮಾದರಿಯನ್ನು ಕಟ್ಟಿಕೊಳ್ಳಬಹುದು ಎಂಬ ವಿಚಾರಗಳನ್ನೂ ಹೇಳಿದ್ದಾರೆ. ನ್ಯಾಯ ಸಿಗುವುದು ಎಂಬ ನಂಬಿಕೆಯನ್ನು ವಕೀಲರು ಮೂಡಿಸುತ್ತಾರೆ. ಕಾಯಿಲೆ ಗುಣಪಡಿಸಲು ವೈದ್ಯರು ಇರುವುದರಿಂದ ಹೇಗೆ ಬೇಕಾದರೂ ಜೀವನ ಮಾಡಬಹುದು ಎಂಬ ಧೋರಣೆ ಜನರಲ್ಲಿ ಮೂಡುತ್ತದೆ; ರೈಲಿನ ಮೂಲಕ ಪ್ರವಾಸಗಳು ಹೆಚ್ಚಾಗುತ್ತವೆ. ಒಟ್ಟಿನಲ್ಲಿ ಭೋಗ ವಿಲಾಸಗಳಿಗೆ ಹೆಚ್ಚಿನ ಅವಕಾಶ ನೀಡಿ, ಮಾನವ ದೇಹದ ಶ್ರಮ ಸಾಧ್ಯತೆಗಳನ್ನು ಮರೆಯುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂಬ ಆತಂಕ ಗಾಂಧೀಜಿ ಅವರಲ್ಲಿತ್ತು. ಈ ವಿಚಾರಗಳನ್ನೆಲ್ಲ ಅವರುಓದುಗ ಮತ್ತು ಸಂಪಾದಕರ ನಡುವಿನ ಸಂಭಾಷಣೆ ಮಾದರಿಯಲ್ಲಿ ಸೃಜನಶೀಲವಾಗಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ’ ಎಂದು ವಿವರಿಸಿದರು.