‘ಕೇಂದ್ರ ಜವಳಿ ಸಂಸ್ಥೆಯು ನೀಡಿದ ಸಲಹೆಗಳಂತೆ ಸಮವಸ್ತ್ರ ಸಿದ್ಧಪಡಿಸಿ, ಪೂರೈಸಲು ಮಾರಾಟಗಾರರಿಗೆ ನಿರ್ದೇಶನ ನೀಡಲಾಗಿದೆ. ರಾಜಸ್ಥಾನ, ಗುಜರಾತ್ ಮೂಲದ ಕಂಪನಿಗಳು ಪೂರೈಕೆಯ ಟೆಂಡರ್ ಪಡೆದಿವೆ. ಸಾಕಷ್ಟು ಮುಂಚಿತವಾಗಿ ಆದೇಶ ನೀಡಿದ್ದ ಕಾರಣ ಬೆಲೆಯಲ್ಲೂ ಶೇ 15ರಷ್ಟು ಉಳಿತಾಯವಾಗಿದೆ’ ಎಂದು ಇಲಾಖೆಯ ಆಯುಕ್ತ ಆರ್.ವಿಶಾಲ್ ಅವರು ಪ್ರತಿಕ್ರಿಯಿಸಿದರು.