ವಿಚಾರಣೆ 20ಕ್ಕೆ ಮುಂದೂಡಿಕೆ
2ನೇ ಪೋಕ್ಸೊ ಪ್ರಕರಣದ ಬಾಡಿ ವಾರೆಂಟ್ಗೆ ಸಂಬಂಧಿಸಿದ ವಿಚಾರಣೆಯನ್ನು ನ.20ಕ್ಕೆ ಮುಂದೂಡಿ ನ್ಯಾಯಾಧೀಶರು ಶನಿವಾರ ಆದೇಶಿಸಿದರು. ಪ್ರಕರಣದ ವಿಚಾರಣೆಗೆ ಶಿವಮೂರ್ತಿ ಶರಣರು ಹಾಜರಾಗದಿರುವುದರಿಂದ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸುವಂತೆ ವಿಶೇಷ ಸರ್ಕಾರಿ ವಕೀಲರು ಕೋರಿಕೆ ಸಲ್ಲಿಸಿದರು. ಶರಣರ ಪರವಾಗಿ ಹಾಜರಾದ ವಕೀಲ ಎಂ.ಉಮೇಶ್, ‘ಶಿವಮೂರ್ತಿ ಶರಣರು ನ್ಯಾಯಾಲಯಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಲಿದ್ದಾರೆ’ ಎಂದು ಮಾಹಿತಿ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಸರ್ಕಾರಿ ವಕೀಲ, ‘ಹೈಕೋರ್ಟ್ ಆದೇಶದಲ್ಲಿ ಇಂತಹ ಅವಕಾಶ ಇಲ್ಲ’ ಎಂದರು.