ತಮ್ಮ ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ಕಾರಣ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ‘ಇಲ್ಲಿ ಕನ್ನಡವನ್ನು ಬಳಸುವುದು ಮತ್ತು ಬೆಳೆಸುವುದು ನಮ್ಮ ಆದ್ಯಕರ್ತವ್ಯ. ನಮ್ಮ ಭಾಷೆಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಹಿಂದಿಯನ್ನು ಭಾಷೆಯಾಗಿ ಕಲಿಯುವುದರಲ್ಲಿ ಅಭ್ಯಂತರವಿಲ್ಲ. ಪರಕೀಯರ ಭಾಷೆಯಾದ ಇಂಗ್ಲಿಷಿಗೆ ನೀಡುವ ಪ್ರಾಧಾನ್ಯತೆಯ ಹತ್ತನೆ ಒಂದರಷ್ಟು ಭಾಗವನ್ನು ಭಾರತೀಯ ಭಾಷೆಗೆ ನೀಡಿದರೆ ಇಲ್ಲಿನ ಎಷ್ಟೋ ಭಾಷೆಗಳು ಬೆಳೆದಿರುತ್ತಿದ್ದವು’ ಎಂದು ಅಭಿಪ್ರಾಯ ಪಟ್ಟರು.