ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ರಾಜ್ಯಪಾಲರ ಭಾಷಣದ ಕುರಿತು ಮಾತನಾಡುವಾಗಲೂ ಬಿಜೆಪಿಯವರು ಡಬಲ್ ಎಂಜಿನ್ ಸರ್ಕಾರ ಎಂದು ಹೇಳುತ್ತಾರೆ. ಆದರೆ, ಜನರು ಸಂಕಷ್ಟದಲ್ಲಿರುವಾಗ ಡಬಲ್ ಎಂಜಿನ್ ಆಫ್ ಆಗಿರುತ್ತದೆ. ಅದು ತಯಾರಾಗಿರುವುದೇ ಭ್ರಷ್ಟಾಚಾರ ಮತ್ತು ಕಣ್ಣೀರಿನಿಂದ’ ಎಂದರು.