ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಹೋರಾಟಗಾರ ಯಡೇಹಳ್ಳಿ ಮಂಜುನಾಥ, ‘ಈಗ ಜಿಲ್ಲೆಯಲ್ಲಿ ಬೀಡು ಬಿಟ್ಟಿರುವ ಬಹುತೇಕ ಕಾಡಾನೆಗಳು ಕೇರಳದಿಂದಲೇ ಬಂದಿವೆ. ಮಾರ್ಟಿನ್, ಲೂಯಿಸ್, ತಣ್ಣೀರು ಸೇರಿದಂತೆ ಇತರೆ ಆನೆಗಳಿಗೆ ಹೆಸರಿಟ್ಟವರೂ ಅವರೇ. ಇದುವರೆಗೆ ಇಲ್ಲಿ 79 ಮಂದಿ ಮೃತಪಟ್ಟಿದ್ದು, ಆಗ ಕೇರಳ ರಾಜ್ಯ ಸರ್ಕಾರ ಪರಿಹಾರ ನೀಡಿತ್ತೇ’ ಎಂದು ಪ್ರಶ್ನಿಸಿದರು.