<p><strong>ಬೆಂಗಳೂರು:</strong> ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (ಎಐಸಿಟಿಇ) ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಕಡಿತ ಮಾಡಿದ್ದ 450 ಸೀಟುಗಳನ್ನು ಮರಳಿ ನೀಡಿದ್ದು, ವೃತ್ತಿಪರ ಕೋರ್ಸ್ಗಳ ಆಕಾಂಕ್ಷಿಗಳು ನಿಟ್ಟುಸಿರುಬಿಡುವಂತಾಗಿದೆ.</p>.<p>ಈ ಕಾಲೇಜುಗಳಲ್ಲಿ ಪರಿಶೀಲನೆ ನಡೆಸಿದ್ದ ಎಐಸಿಟಿಇ ತಜ್ಞರ ತಂಡ, ಮೂಲಸೌಕರ್ಯ ಇಲ್ಲದ ಕಾರಣಕ್ಕೆ ಸೀಟು ಕಡಿತಕ್ಕೆ ಶಿಫಾರಸು ಮಾಡಿತ್ತು. ಆದರೆ ಕೊರತೆಗಳನ್ನು ನಿವಾರಿಸುವ ಭರವಸೆಯನ್ನು ಸರ್ಕಾರ ನೀಡಿರುವ ಮೇರೆಗೆ 2019–20ನೇ ಶೈಕ್ಷಣಿಕ ಸಾಲಿಗೆ ಹಿಂದೆಗೆದುಕೊಂಡಿದ್ದ ಸೀಟುಗಳನ್ನು ವಾಪಸ್ ನೀಡಲಾಗಿದೆ.</p>.<p>‘ಒಂದು ವರ್ಷದ ಮಟ್ಟಿಗೆ ಈ ರಿಯಾಯಿತಿ ನೀಡಲಾಗಿದೆ. ಅಷ್ಟರೊಳಗೆ ಕೊರತೆಗಳನ್ನು ಸರಿಪಡಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ’ ಎಂದು ಎಐಸಿಟಿಇ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ರಾಜ್ಯದೆಲ್ಲೆಡೆ ಇರುವ 11 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಪೈಕಿ 4 ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸೇರ್ಪಡೆ ಪ್ರಮಾಣವನ್ನು ತಗ್ಗಿಸಲು ಹಾಗೂ ಒಂದು ಕಾಲೇಜಿಗೆ ಯಾವುದೇ ವಿದ್ಯಾರ್ಥಿಯನ್ನೂ ದಾಖಲಿಸಿಕೊಳ್ಳದಂತೆ ಸೂಚನೆ ನೀಡಲಾಗಿತ್ತು. ಇದರಿಂದ ಒಟ್ಟು ಇರುವ 2,400 ಸೀಟುಗಳ ಪೈಕಿ 450 ಸೀಟುಗಳು ಕಡಿತವಾಗುವುದಿತ್ತು.</p>.<p>ಆದರೆ ಎಐಸಿಟಿಇ ತೆಗೆದುಕೊಂಡಿರುವ ಈ ಕ್ರಮದಿಂದ ಕೆಲವು ಖಾಸಗಿ ಎಂಜಿನಿಯರಿಂಗ್ ಕಾಲೇಜ್ಗಳು ಸಿಟ್ಟಿಗೆದ್ದಿವೆ. ಇದು ಮಲತಾಯಿ ಧೋರಣೆಯಾಗುತ್ತದೆ ಎಂದು ಅವುಗಳು ಹೇಳಿವೆ.</p>.<p><strong>ಪಾರಾದ ಕಾಲೇಜುಗಳು</strong></p>.<p>ಹಾಸನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ನ ಶೇ 50ರಷ್ಟು ಸೀಟುಗಳಿಗೆ ಸಂಚಕಾರ ಬಂದಿತ್ತು. ಹಾವೇರಿ ಕಾಲೇಜಿನ ಶೇ 25, ಕೆ.ಆರ್.ಪೇಟೆ ಕಾಲೇಜಿಗೆ ಶೇ 10ರಷ್ಟು ಸೀಟುಗಳು ಭರ್ತಿ ಮಾಡುವಂತಿರಲಿಲ್ಲ.ಚಾಮರಾಜನಗರ ಕಾಲೇಜಿಗೆ ನೇಮಕಾತಿಯನ್ನೇ ನಿಷೇಧಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (ಎಐಸಿಟಿಇ) ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಕಡಿತ ಮಾಡಿದ್ದ 450 ಸೀಟುಗಳನ್ನು ಮರಳಿ ನೀಡಿದ್ದು, ವೃತ್ತಿಪರ ಕೋರ್ಸ್ಗಳ ಆಕಾಂಕ್ಷಿಗಳು ನಿಟ್ಟುಸಿರುಬಿಡುವಂತಾಗಿದೆ.</p>.<p>ಈ ಕಾಲೇಜುಗಳಲ್ಲಿ ಪರಿಶೀಲನೆ ನಡೆಸಿದ್ದ ಎಐಸಿಟಿಇ ತಜ್ಞರ ತಂಡ, ಮೂಲಸೌಕರ್ಯ ಇಲ್ಲದ ಕಾರಣಕ್ಕೆ ಸೀಟು ಕಡಿತಕ್ಕೆ ಶಿಫಾರಸು ಮಾಡಿತ್ತು. ಆದರೆ ಕೊರತೆಗಳನ್ನು ನಿವಾರಿಸುವ ಭರವಸೆಯನ್ನು ಸರ್ಕಾರ ನೀಡಿರುವ ಮೇರೆಗೆ 2019–20ನೇ ಶೈಕ್ಷಣಿಕ ಸಾಲಿಗೆ ಹಿಂದೆಗೆದುಕೊಂಡಿದ್ದ ಸೀಟುಗಳನ್ನು ವಾಪಸ್ ನೀಡಲಾಗಿದೆ.</p>.<p>‘ಒಂದು ವರ್ಷದ ಮಟ್ಟಿಗೆ ಈ ರಿಯಾಯಿತಿ ನೀಡಲಾಗಿದೆ. ಅಷ್ಟರೊಳಗೆ ಕೊರತೆಗಳನ್ನು ಸರಿಪಡಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ’ ಎಂದು ಎಐಸಿಟಿಇ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ರಾಜ್ಯದೆಲ್ಲೆಡೆ ಇರುವ 11 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಪೈಕಿ 4 ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸೇರ್ಪಡೆ ಪ್ರಮಾಣವನ್ನು ತಗ್ಗಿಸಲು ಹಾಗೂ ಒಂದು ಕಾಲೇಜಿಗೆ ಯಾವುದೇ ವಿದ್ಯಾರ್ಥಿಯನ್ನೂ ದಾಖಲಿಸಿಕೊಳ್ಳದಂತೆ ಸೂಚನೆ ನೀಡಲಾಗಿತ್ತು. ಇದರಿಂದ ಒಟ್ಟು ಇರುವ 2,400 ಸೀಟುಗಳ ಪೈಕಿ 450 ಸೀಟುಗಳು ಕಡಿತವಾಗುವುದಿತ್ತು.</p>.<p>ಆದರೆ ಎಐಸಿಟಿಇ ತೆಗೆದುಕೊಂಡಿರುವ ಈ ಕ್ರಮದಿಂದ ಕೆಲವು ಖಾಸಗಿ ಎಂಜಿನಿಯರಿಂಗ್ ಕಾಲೇಜ್ಗಳು ಸಿಟ್ಟಿಗೆದ್ದಿವೆ. ಇದು ಮಲತಾಯಿ ಧೋರಣೆಯಾಗುತ್ತದೆ ಎಂದು ಅವುಗಳು ಹೇಳಿವೆ.</p>.<p><strong>ಪಾರಾದ ಕಾಲೇಜುಗಳು</strong></p>.<p>ಹಾಸನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ನ ಶೇ 50ರಷ್ಟು ಸೀಟುಗಳಿಗೆ ಸಂಚಕಾರ ಬಂದಿತ್ತು. ಹಾವೇರಿ ಕಾಲೇಜಿನ ಶೇ 25, ಕೆ.ಆರ್.ಪೇಟೆ ಕಾಲೇಜಿಗೆ ಶೇ 10ರಷ್ಟು ಸೀಟುಗಳು ಭರ್ತಿ ಮಾಡುವಂತಿರಲಿಲ್ಲ.ಚಾಮರಾಜನಗರ ಕಾಲೇಜಿಗೆ ನೇಮಕಾತಿಯನ್ನೇ ನಿಷೇಧಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>