ಕೆಲವರ ಈ ನಡೆ ದಿವಾಳಿ ಮನಸ್ಥಿತಿ, ಸೈದ್ಧಾಂತಿಕ ಪಕ್ಷಪಾತದ ಪ್ರತಿಬಿಂಬ. ಇಂತಹ ನಡೆಯನ್ನು ಸಂಸ್ಥೆ ಖಂಡಿಸಬೇಕು ಎಂದು ಕೆ.ಶ್ರೀಧರ್ ರಾವ್, ಎಸ್.ಎಲ್.ಗಂಗಾಧರಪ್ಪ, ಎಂ.ಮದನ್ ಗೋಪಾಲ್, ಪಿ.ಬಿ.ರಾಮಮೂರ್ತಿ, ಎಂ.ಲಕ್ಷ್ಮೀನಾರಾಯಣ, ರಮೇಶ್ ಝಳಕಿ, ಎನ್.ಪ್ರಭಾಕರ್, ಎಂ.ಎನ್.ಕೃಷ್ಣಮೂರ್ತಿ, ಗೋಪಾಲ್ ಹೊಸೂರ್, ಭಾಸ್ಕರ ರಾವ್, ಬ್ರಿಜ್ ಕಿಶೋರ್ ಸಿಂಗ್ ಸೇರಿದಂತೆ 23 ನಿವೃತ್ತ ಅಧಿಕಾರಿಗಳು ಐಐಎಂಬಿ ಆಡಳಿತ ಮಂಡಳಿ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಅವರಿಗೆ ಪತ್ರ ಬರೆದಿದ್ದಾರೆ.