ಸ್ಮಿತ್ ಫೇಸ್ಬುಕ್ನಲ್ಲಿ ಕಳುಹಿಸಿದ್ದ ಸ್ನೇಹದ ವಿನಂತಿಯನ್ನು ಮಹಾಲಕ್ಷ್ಮಿ ಸ್ವೀಕರಿಸಿದ್ದರು. ಕೆಲ ದಿನಗಳ ಬಳಿಕ ‘ನಿಮಗೂ ಮತ್ತು ನಿಮ್ಮ ಮಗಳಿಗೂ ₹50 ಸಾವಿರ ಪೌಂಡ್ ಉಡುಗೊರೆ ಕಳುಹಿಸುವುದಾಗಿ ಹೇಳಿದ್ದಾರೆ. ನಂತರ ದೆಹಲಿಯಿಂದ ಸುನಿತ ಶರ್ಮ ಎನ್ನುವ ವ್ಯಕ್ತಿ ಕರೆಮಾಡಿ, ಉಡುಗೊರೆ ಬಂದಿದ್ದು ಅದನ್ನು ಪಡೆಯಲು ₹30 ಸಾವಿರ ಠೇವಣಿ ಇಡುವಂತೆ ತಿಳಿಸಿದ್ದಾರೆ. ಎರಡು ದಿನಗಳ ನಂತರ, ಪಾರ್ಸಲ್ನಲ್ಲಿ ₹50 ಸಾವಿರ ಪೌಂಡ್ಗಳಿದ್ದು, ಭಾರತೀಯ ಕರೆನ್ಸಿಗೆ ಪರಿವರ್ತಿಸಲು ₹1 ಲಕ್ಷ ನೀಡುವಂತೆ ಕೋರಿದ್ದಾರೆ. ನಂತರ ತೆರಿಗೆ ಹೆಸರಿನಲ್ಲಿ ₹1 ಲಕ್ಷ ಹಣ ಪಡೆದಿದ್ದಾರೆ. ಹೀಗೆ ವಿವಿಧ ಕಾರಣಗಳನ್ನು ಹೇಳಿ ಒಟ್ಟು ₹21.79 ಲಕ್ಷ ಹಣ ವಂಚಿಸಿದ್ದಾರೆ.