<p><strong>ಕುರುಗೋಡು (ಬಳ್ಳಾರಿ): </strong>ಫೇಸ್ಬುಕ್ನಲ್ಲಿ ಸ್ನೇಹಿತನಾದ ವಿದೇಶಿ ಮೂಲದ ವ್ಯಕ್ತಿ ಉಡುಗೊರೆ ಕಳುಹಿಸುವುದಾಗಿ ಹೇಳಿ ₹21.79 ಲಕ್ಷ ಹಣ ಪಡೆದು ವಂಚಿಸಿದ್ದಾರೆ.</p>.<p>ರಾಮ್ಬಾಬು ಕ್ಯಾಂಪಿನ ಆಶಾ ಕಾರ್ಯಕರ್ತೆ ಮಹಾಲಕ್ಷ್ಮಿ ಎಂಬುವವರಿಂದ ಇಂಗ್ಲೆಂಡ್ ಮೂಲದ ಅಲೆಕ್ಸ್ಸ್ಮಿತ್ ಎಂದು ಹೆಸರು ಹೇಳಿಕೊಂಡವರು ಸೆಪ್ಟೆಂಬರ್ ತಿಂಗಳಿನಿಂದಲೇ ಹಣ ವಸೂಲಿ ಮಾಡುತ್ತಿದ್ದರು.</p>.<p>ಸ್ಮಿತ್ ಫೇಸ್ಬುಕ್ನಲ್ಲಿ ಕಳುಹಿಸಿದ್ದ ಸ್ನೇಹದ ವಿನಂತಿಯನ್ನು ಮಹಾಲಕ್ಷ್ಮಿ ಸ್ವೀಕರಿಸಿದ್ದರು. ಕೆಲ ದಿನಗಳ ಬಳಿಕ ‘ನಿಮಗೂ ಮತ್ತು ನಿಮ್ಮ ಮಗಳಿಗೂ ₹50 ಸಾವಿರ ಪೌಂಡ್ ಉಡುಗೊರೆ ಕಳುಹಿಸುವುದಾಗಿ ಹೇಳಿದ್ದಾರೆ. ನಂತರ ದೆಹಲಿಯಿಂದ ಸುನಿತ ಶರ್ಮ ಎನ್ನುವ ವ್ಯಕ್ತಿ ಕರೆಮಾಡಿ, ಉಡುಗೊರೆ ಬಂದಿದ್ದು ಅದನ್ನು ಪಡೆಯಲು ₹30 ಸಾವಿರ ಠೇವಣಿ ಇಡುವಂತೆ ತಿಳಿಸಿದ್ದಾರೆ. ಎರಡು ದಿನಗಳ ನಂತರ, ಪಾರ್ಸಲ್ನಲ್ಲಿ ₹50 ಸಾವಿರ ಪೌಂಡ್ಗಳಿದ್ದು, ಭಾರತೀಯ ಕರೆನ್ಸಿಗೆ ಪರಿವರ್ತಿಸಲು ₹1 ಲಕ್ಷ ನೀಡುವಂತೆ ಕೋರಿದ್ದಾರೆ. ನಂತರ ತೆರಿಗೆ ಹೆಸರಿನಲ್ಲಿ ₹1 ಲಕ್ಷ ಹಣ ಪಡೆದಿದ್ದಾರೆ. ಹೀಗೆ ವಿವಿಧ ಕಾರಣಗಳನ್ನು ಹೇಳಿ ಒಟ್ಟು ₹21.79 ಲಕ್ಷ ಹಣ ವಂಚಿಸಿದ್ದಾರೆ.</p>.<p>ಈ ಕುರಿತು ಬಳ್ಳಾರಿಯ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುರುಗೋಡು (ಬಳ್ಳಾರಿ): </strong>ಫೇಸ್ಬುಕ್ನಲ್ಲಿ ಸ್ನೇಹಿತನಾದ ವಿದೇಶಿ ಮೂಲದ ವ್ಯಕ್ತಿ ಉಡುಗೊರೆ ಕಳುಹಿಸುವುದಾಗಿ ಹೇಳಿ ₹21.79 ಲಕ್ಷ ಹಣ ಪಡೆದು ವಂಚಿಸಿದ್ದಾರೆ.</p>.<p>ರಾಮ್ಬಾಬು ಕ್ಯಾಂಪಿನ ಆಶಾ ಕಾರ್ಯಕರ್ತೆ ಮಹಾಲಕ್ಷ್ಮಿ ಎಂಬುವವರಿಂದ ಇಂಗ್ಲೆಂಡ್ ಮೂಲದ ಅಲೆಕ್ಸ್ಸ್ಮಿತ್ ಎಂದು ಹೆಸರು ಹೇಳಿಕೊಂಡವರು ಸೆಪ್ಟೆಂಬರ್ ತಿಂಗಳಿನಿಂದಲೇ ಹಣ ವಸೂಲಿ ಮಾಡುತ್ತಿದ್ದರು.</p>.<p>ಸ್ಮಿತ್ ಫೇಸ್ಬುಕ್ನಲ್ಲಿ ಕಳುಹಿಸಿದ್ದ ಸ್ನೇಹದ ವಿನಂತಿಯನ್ನು ಮಹಾಲಕ್ಷ್ಮಿ ಸ್ವೀಕರಿಸಿದ್ದರು. ಕೆಲ ದಿನಗಳ ಬಳಿಕ ‘ನಿಮಗೂ ಮತ್ತು ನಿಮ್ಮ ಮಗಳಿಗೂ ₹50 ಸಾವಿರ ಪೌಂಡ್ ಉಡುಗೊರೆ ಕಳುಹಿಸುವುದಾಗಿ ಹೇಳಿದ್ದಾರೆ. ನಂತರ ದೆಹಲಿಯಿಂದ ಸುನಿತ ಶರ್ಮ ಎನ್ನುವ ವ್ಯಕ್ತಿ ಕರೆಮಾಡಿ, ಉಡುಗೊರೆ ಬಂದಿದ್ದು ಅದನ್ನು ಪಡೆಯಲು ₹30 ಸಾವಿರ ಠೇವಣಿ ಇಡುವಂತೆ ತಿಳಿಸಿದ್ದಾರೆ. ಎರಡು ದಿನಗಳ ನಂತರ, ಪಾರ್ಸಲ್ನಲ್ಲಿ ₹50 ಸಾವಿರ ಪೌಂಡ್ಗಳಿದ್ದು, ಭಾರತೀಯ ಕರೆನ್ಸಿಗೆ ಪರಿವರ್ತಿಸಲು ₹1 ಲಕ್ಷ ನೀಡುವಂತೆ ಕೋರಿದ್ದಾರೆ. ನಂತರ ತೆರಿಗೆ ಹೆಸರಿನಲ್ಲಿ ₹1 ಲಕ್ಷ ಹಣ ಪಡೆದಿದ್ದಾರೆ. ಹೀಗೆ ವಿವಿಧ ಕಾರಣಗಳನ್ನು ಹೇಳಿ ಒಟ್ಟು ₹21.79 ಲಕ್ಷ ಹಣ ವಂಚಿಸಿದ್ದಾರೆ.</p>.<p>ಈ ಕುರಿತು ಬಳ್ಳಾರಿಯ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>