ನಾನು 2024ರಲ್ಲಿ ಅಧ್ಯಕ್ಷನಾದೆ. ಹಿಂದಿನ ಅಧ್ಯಕ್ಷರಿಂದಲೂ ಏನೂ ಕಾರ್ಯಕ್ರಮ ಆಗಿರಲಿಲ್ಲ. ಕಾರ್ಯಕ್ರಮಗಳೆಲ್ಲವೂ ಆಗಿದ್ದು ರಾಜೇಂದ್ರ ಸಿಂಗ್ ಬಾಬು ಅವರ ಅವಧಿಯಲ್ಲಿ. ಸಿನಿಮಾದವರಿಗೆ ಕಾರ್ಯಕ್ರಮಗಳೇನಾಗಬೇಕೋ ಅವುಗಳನ್ನು ಚರ್ಚಿಸಿದ್ದೇವೆ.
–ಸಾಧು ಕೋಕಿಲ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ
ಬೇರೆಲ್ಲಾ ಅಕಾಡೆಮಿಗಳು ಕೆಲಸ ಮಾಡುತ್ತಿದ್ದು ನಾವು ನಿಷ್ಕ್ರಿಯರಾಗಿದ್ದೇವೆ. ಕ್ರಿಯಾ ಯೋಜನೆ ಕೊಟ್ಟಿದ್ದರೂ ಕಾರ್ಯಗತವಾಗುತ್ತಿಲ್ಲ. ಚಿತ್ರೋತ್ಸವಕ್ಕೆ ಬಂದ ಸಿನಿಮಾಗಳು ಅಕಾಡೆಮಿಯ ಬಳಿಯೇ ಇದ್ದು ಇವುಗಳಲ್ಲಿ ಅತ್ಯುತ್ತಮವಾದುದನ್ನು ವಾರ್ತಾ ಇಲಾಖೆ ಕಚೇರಿಯಲ್ಲಿ ಪ್ರದರ್ಶಿಸೋಣ ಎಂದಿದ್ದೆ. ಅಕಾಡೆಮಿ ಚಿತ್ರೋತ್ಸವಕ್ಕಷ್ಟೇ ಸೀಮಿತವಾಗಿದೆ
–ಐವಾನ್ ಡಿಸಿಲ್ವ ಸದಸ್ಯರು
ಅನುದಾನದ ಕೊರತೆ ಎನ್ನುವುದು ಸರಿಯಾದ ಉತ್ತರವಲ್ಲ. ಚಿತ್ರೋತ್ಸವದ ಸಮಿತಿಗಳಲ್ಲಿ ನಮಗೆ ಅವಕಾಶವೇ ಇಲ್ಲ. ನಮ್ಮನ್ನು ಬಳಸಿಕೊಳ್ಳದೇ ಹೋದರೆ ಸಭೆಗಷ್ಟೇ ಸೀಮಿತವಾಗುತ್ತೇವೆ.
–ಎಚ್.ವಿಷ್ಣುಕುಮಾರ್ ಸದಸ್ಯರು
ನಮಗೆ ಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಆಸೆಯಿದೆ. ಚರ್ಚೆಯೂ ನಡೆದಿದೆ. ಎಲ್ಲದಕ್ಕೂ ಅನುದಾನದ ಕೊರತೆ ಇದೆ. ಚಿತ್ರೋತ್ಸವದ ಬಳಿಕ ಕಾರ್ಯಕ್ರಮಗಳು ನಡೆಸುವ ಭರವಸೆ ನೀಡಿದ್ದಾರೆ. ಸಿನಿಮಾ ಭಂಡಾರ ನಿರ್ಮಾಣದ ಕುರಿತು ಪುಣೆ ಆರ್ಕೈವ್ಸ್ಗೆ ಸದಸ್ಯರು ಭೇಟಿ ನೀಡಿದ್ದೆವು. ಒಟಿಟಿ ವೇದಿಕೆ ನಿರ್ಮಾಣ ಕುರಿತು ಸಭೆ ನಡೆದಿದೆ.