ಸೋಮವಾರ, 2 ಫೆಬ್ರುವರಿ 2026
×
ADVERTISEMENT
ADVERTISEMENT

ನೇರ ನಗದು ವರ್ಗಾವಣೆಗಳಿಂದ ಆರ್ಥಿಕ ಸ್ಥಿರತೆ ಹಾಳು: 16ನೇ ಹಣಕಾಸು ಆಯೋಗ ಎಚ್ಚರಿಕೆ

Published : 2 ಫೆಬ್ರುವರಿ 2026, 20:27 IST
Last Updated : 2 ಫೆಬ್ರುವರಿ 2026, 20:27 IST
ಫಾಲೋ ಮಾಡಿ
Comments
ನಗದು ವರ್ಗಾವಣೆಗೆ ರಾಜ್ಯಗಳ ನಾಗಾಲೋಟ
2018–19ರಲ್ಲಿ ತೆಲಂಗಾಣವು ತನ್ನ ಬದ್ಧ ವೆಚ್ಚದ ಶೇಕಡಾ 10ಕ್ಕಿಂತ ಹೆಚ್ಚು ಭಾಗವನ್ನು ಬೇಷರತ್‌ ನಗದು ವರ್ಗಾವಣೆಗೆ ಹಂಚಿಕೆ ಮಾಡಿದ ಏಕೈಕ ರಾಜ್ಯವಾಗಿತ್ತು. 2023-24ರ ಹೊತ್ತಿಗೆ, ಅಂತಹ ರಾಜ್ಯಗಳ ಸಂಖ್ಯೆ ಆರಕ್ಕೆ ಮತ್ತು 2025-26ರ ವೇಳೆಗೆ ಒಂಬತ್ತಕ್ಕೆ ಏರಿತು. ತಮ್ಮ ಆದಾಯದ ಶೇಕಡಾ 5ಕ್ಕಿಂತ ಹೆಚ್ಚು ವೆಚ್ಚವನ್ನು ನಗದು ವರ್ಗಾವಣೆಗೆ ಖರ್ಚು ಮಾಡಿದ ರಾಜ್ಯಗಳ ಸಂಖ್ಯೆಯಲ್ಲೂ ಇದೇ ರೀತಿಯ ಪ್ರವೃತ್ತಿ ಕಂಡುಬಂದಿದೆ. 2018-19ರಲ್ಲಿ ಈ ರಾಜ್ಯಗಳ ಸಂಖ್ಯೆ ನಾಲ್ಕು ಆಗಿತ್ತು. 2025-26ರ ವೇಳೆಗೆ ರಾಜ್ಯಗಳ ಸಂಖ್ಯೆ ಹದಿಮೂರಕ್ಕೆ ಜಿಗಿದಿದೆ.
ವಿತ್ತೀಯ ಕೊರತೆ ಹೆಚ್ಚಳ
ನೇರ ನಗದು ವರ್ಗಾವಣೆ ಮಾಡುತ್ತಿರುವ ರಾಜ್ಯಗಳಲ್ಲಿ ವಿತ್ತೀಯ ಕೊರತೆ ಹೆಚ್ಚಳ ಆಗುತ್ತಿದೆ. 2023–24ರಲ್ಲಿ ತಮ್ಮ ಆದಾಯದ ಶೇ 5ಕ್ಕಿಂತ ಹೆಚ್ಚು ಮೊತ್ತವನ್ನು ನಗದು ವರ್ಗಾವಣೆಗೆ ಬಳಸುತ್ತಿರುವ ಒಂಬತ್ತು ರಾಜ್ಯಗಳ ಪೈಕಿ ಆರು ರಾಜ್ಯಗಳು ವಿತ್ತೀಯ ಕೊರತೆ ಹೊಂದಿದ್ದವು. ಸಾಲ ಪಡೆಯುವ ಮೂಲಕ ಅಥವಾ ಬಂಡವಾಳ ವೆಚ್ಚ ಕಡಿಮೆ ಮಾಡುವ ಮೂಲಕ ಹೆಚ್ಚಿನ ರಾಜ್ಯಗಳು ನಗದು ವರ್ಗಾವಣೆಗೆ ಹಣಕಾಸು ಒದಗಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT