ಭೂ ಕಬಳಿಕೆಗೆ ₹50 ಸಾವಿರ ದಂಡ
(ಕರ್ನಾಟಕ ಭೂಕಬಳಿಕೆ ನಿಷೇಧ (ತಿದ್ದುಪಡಿ) ಮಸೂದೆ) ಭೂ ಕಬಳಿಕೆ ಕೃತ್ಯಗಳ ವಿಚಾರಣೆ ತ್ವರಿತವಾಗಿ ನಡೆಸಿ ಇತ್ಯರ್ಥಗೊಳಿಸಲು ವಿಶೇಷ ನ್ಯಾಯಾಲಯ ಸ್ಥಾಪಿಸುವುದು, ಸರ್ಕಾರಿ ಭೂಮಿ ರಕ್ಷಿಸುವುದು ಮತ್ತು ಕಂದಾಯ ಅಧಿಕಾರಿಗಳು ಭೂಕಬಳಿಕೆ ತಡೆಯುವ ಪ್ರಾಥಮಿಕ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳದಂತೆ ಹೊಣೆಗಾರಿಕೆಯನ್ನು ನಿಗದಿ. ಒತ್ತುವರಿ ಪ್ರಕರಣಗಳ ಅಂತರವನ್ನು ವೈಮಾನಿಕವಾಗಿಯೇ ಲೆಕ್ಕ ಹಾಕಬೇಕು. ಭೂಕಬಳಿಕೆ ದಂಡ ಪ್ರಮಾಣವನ್ನು ₹25 ಸಾವಿರದಿಂದ ₹50 ಸಾವಿರಕ್ಕೆ ಹೆಚ್ಚಳ. ಕರ್ನಾಟಕ ಗ್ರಾಮ ಹುದ್ದೆಗಳ ರದ್ದತಿ (ತಿದ್ದುಪಡಿ) ಮಸೂದೆಗೂ ಒಪ್ಪಿಗೆ ಸಿಕ್ಕಿದೆ.