ವಸತಿ ಸಚಿವ ವಿ. ಸೋಮಣ್ಣ ಈಚೆಗೆ ಚಿಕ್ಕೋಡಿ ತಾಲ್ಲೂಕು ಯಡೂರಕ್ಕೆ ಭೇಟಿ ನೀಡಿದ್ದಾಗ ಸಂತ್ರಸ್ತ ರೈತರು ಈ ಬಗ್ಗೆ ಗಮನಸೆಳೆದಿದ್ದರು. ‘ಬೆಳೆ ಪರಿಹಾರ, ಮನೆ ಹಾನಿಯಾಗಿದ್ದಕ್ಕೆ ಮೊದಲನೇ ಕಂತಾಗಿ ಕನಿಷ್ಠ ₹ 25ಸಾವಿರದಿಂದ ಗರಿಷ್ಠ ₹ 98ಸಾವಿರದವರೆಗೆ ಪರಿಹಾರ ನೀಡಲಾಗುತ್ತಿದೆ ಹಾಗೂ ಜಾನುವಾರುಗಳು ಮೃತಪಟ್ಟಿದ್ದಕ್ಕೆ ಬ್ಯಾಂಕ್ ಖಾತೆ ಮೂಲಕ ಕೊಡುತ್ತಿರುವ ಪರಿಹಾರವನ್ನು ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಬದುಕೇ ಕೊಚ್ಚಿ ಹೋಗಿರುವ ನಮಗೆ ಸಾಲ ಪಾವತಿ ವಿಷಯದಲ್ಲಿ ಕಿರುಕುಳ ಕೊಡುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡಿದ್ದರು.