‘ದೋಣಿಗೆ ಹೋಗುವ ಗಂಡಸರು ಕೆಲವರು ಊರಿನಲ್ಲೇ ಉಳಿದಿದ್ದಾರೆ.ಕೆಲವು ಮನೆಗಳ ಮೇಲೆ ಮರ ಬಿದ್ದಿದೆಯಂತೆ. ಮನೆಯೊಳಗೆ ಈಗ ಒಂದಡಿ ಕೆಸರು ತುಂಬಿದೆ. ಹಾವು, ಚೇಳು, ಹುಳ– ಹುಪ್ಪಡಿಗಳು ಮನೆಯ ಮೂಲೆ ಸೇರಿವೆ. ಮೀನುಗಾರಿಕೆ, ಕೂಲಿ ಕೆಲಸವನ್ನೇ ನಂಬಿರುವ ನಮಗೆ ಮಳೆ ಈ ಶಿಕ್ಷೆ ನೀಡಿದೆ’ ಎಂದು ಮುಗುಳ್ನಗುತ್ತಲೇ ಹೇಳಿದ ಯಮುನಾ ಅಂಬಿಗ ಮುಖದಲ್ಲಿ ವಿಷಾದವೂ ಇತ್ತು.