<p><strong>ಕಲಬುರ್ಗಿ:</strong> ‘ರಾಜ್ಯದ ವಿವಿಧ ಕಲಾ ಪ್ರಕಾರಗಳ ಕೆಲ ಜಾನಪದ ಕಲಾವಿದರು ಅಜ್ಞಾತ ಸ್ಥಿತಿಯಲ್ಲೇ ಇದ್ದು, ಅಂಥವರ ಪತ್ತೆಗೆ ರಾಜ್ಯವ್ಯಾಪಿ ಜಾನಪದ ಕಲಾವಿದರ ಗಣತಿ ಆಗಬೇಕಿದೆ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಕಣ್ಣೂರು ತಿಳಿಸಿರು.</p>.<p>‘ಕಲಾವಿದರ ಗಣತಿಗೆ ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ಇದಕ್ಕೆ ತಗಲುವ ವೆಚ್ಚವನ್ನು ಸರ್ಕಾರ ಭರಿಸಿದರೆ ಅಕಾಡೆಮಿಯಿಂದಲೇ ಗಣತಿ ಮಾಡಲು ನಾವು ಸಿದ್ಧ’ ಎಂದು ಅವರು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>‘ನಗರ ಪ್ರದೇಶದ ಸುತ್ತಮುತ್ತ ಇರುವವರಿಗೆ ಮತ್ತು ಕೊಂಚ ಪ್ರಸಿದ್ಧಿ ಪಡೆದವರಿಗೆ ಮಾತ್ರ ಸರ್ಕಾರಿ ಸೌಲಭ್ಯ ಮತ್ತು ಪ್ರಶಸ್ತಿಗಳು ಸಿಗುತ್ತಿವೆ. ಆದರೆ, ಯಾವುದೇ ಪ್ರಚಾರವಿಲ್ಲದೇ ಕುಗ್ರಾಮಗಳಲ್ಲಿ ವಾಸವಿರುವ ಜಾನಪದ ಕಲಾವಿದರನ್ನು ಗುರುತಿಸುವ ಪ್ರಯತ್ನ ನಡೆದಿಲ್ಲ’ ಎಂದರು.</p>.<p>‘ರಾಜ್ಯದಲ್ಲಿ ಒಟ್ಟು 5,160 ಜಾನಪದ ಕಲಾವಿದರಿಗೆ ಮಾಸಾಶನ ದೊರೆಯುತ್ತಿದೆ. ಇನ್ನೂ 3,615 ಕಲಾವಿದರನ್ನು ಪರಿಗಣಿಸಬೇಕು ಮತ್ತುಮಾಸಾಶನದ ಮೊತ್ತವನ್ನು ₹1,500 ರಿಂದ ₹ 4 ಸಾವಿರಕ್ಕೆ ಏರಿಕೆ ಮಾಡಬೇಕು ಎಂದು ಸರ್ಕಾರವನ್ನು ಕೋರಿದ್ದೇನೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ:</strong> ‘ರಾಜ್ಯದ ವಿವಿಧ ಕಲಾ ಪ್ರಕಾರಗಳ ಕೆಲ ಜಾನಪದ ಕಲಾವಿದರು ಅಜ್ಞಾತ ಸ್ಥಿತಿಯಲ್ಲೇ ಇದ್ದು, ಅಂಥವರ ಪತ್ತೆಗೆ ರಾಜ್ಯವ್ಯಾಪಿ ಜಾನಪದ ಕಲಾವಿದರ ಗಣತಿ ಆಗಬೇಕಿದೆ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಕಣ್ಣೂರು ತಿಳಿಸಿರು.</p>.<p>‘ಕಲಾವಿದರ ಗಣತಿಗೆ ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ಇದಕ್ಕೆ ತಗಲುವ ವೆಚ್ಚವನ್ನು ಸರ್ಕಾರ ಭರಿಸಿದರೆ ಅಕಾಡೆಮಿಯಿಂದಲೇ ಗಣತಿ ಮಾಡಲು ನಾವು ಸಿದ್ಧ’ ಎಂದು ಅವರು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>‘ನಗರ ಪ್ರದೇಶದ ಸುತ್ತಮುತ್ತ ಇರುವವರಿಗೆ ಮತ್ತು ಕೊಂಚ ಪ್ರಸಿದ್ಧಿ ಪಡೆದವರಿಗೆ ಮಾತ್ರ ಸರ್ಕಾರಿ ಸೌಲಭ್ಯ ಮತ್ತು ಪ್ರಶಸ್ತಿಗಳು ಸಿಗುತ್ತಿವೆ. ಆದರೆ, ಯಾವುದೇ ಪ್ರಚಾರವಿಲ್ಲದೇ ಕುಗ್ರಾಮಗಳಲ್ಲಿ ವಾಸವಿರುವ ಜಾನಪದ ಕಲಾವಿದರನ್ನು ಗುರುತಿಸುವ ಪ್ರಯತ್ನ ನಡೆದಿಲ್ಲ’ ಎಂದರು.</p>.<p>‘ರಾಜ್ಯದಲ್ಲಿ ಒಟ್ಟು 5,160 ಜಾನಪದ ಕಲಾವಿದರಿಗೆ ಮಾಸಾಶನ ದೊರೆಯುತ್ತಿದೆ. ಇನ್ನೂ 3,615 ಕಲಾವಿದರನ್ನು ಪರಿಗಣಿಸಬೇಕು ಮತ್ತುಮಾಸಾಶನದ ಮೊತ್ತವನ್ನು ₹1,500 ರಿಂದ ₹ 4 ಸಾವಿರಕ್ಕೆ ಏರಿಕೆ ಮಾಡಬೇಕು ಎಂದು ಸರ್ಕಾರವನ್ನು ಕೋರಿದ್ದೇನೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>