<p><strong>ಬೆಂಗಳೂರು:</strong> ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಅವರಿಗೆ ₹40 ಲಕ್ಷ ನೀಡಿದ್ದ ಆರೋಪದಡಿ, ಪೊಲೀಸರು ಶುಕ್ರವಾರ ಬಿಬಿಎಂಪಿ ಮಾಜಿ ಉಪ ಮೇಯರ್ ಮೋಹನ್ರಾಜ್ ಅವರ ವಿಚಾರಣೆ ನಡೆಸಿದರು.</p>.<p>‘ಹಣ ನೀಡಿದ್ದ ವಿಷಯ ಗೊತ್ತಾದ ಮೇಲೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿತ್ತು. ಮೋಹನ್ ರಾಜ್ ಗೈರಾಗಿದ್ದರು. ಮತ್ತೊಮ್ಮೆ ನೋಟಿಸ್ ನೀಡಿದ್ದರಿಂದ ಶುಕ್ರವಾರ ವಿಚಾರಣೆಗೆ ಬಂದಿದ್ದರು. ಎಸಿಪಿ ಚಂದನ್ ನೇತೃತ್ವದಲ್ಲಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಲಾಯಿತು’ ಎಂದು ಮೂಲಗಳು ಹೇಳಿವೆ.</p>.<p>‘ಮೋಹನ್ ಅವರಿಂದ ಕೆಲವು ದಾಖಲೆಗಳನ್ನು ಪಡೆದುಕೊಳ್ಳಲಾಗಿದೆ. ಮೊಬೈಲ್ ಪರಿಶೀಲಿಸಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಕೊಲೆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ ಎಂದು ತಿಳಿಸಿದ್ದೇನೆ. ದರ್ಶನ್ ಅವರಿಂದ ಪಡೆದಿದ್ದ ₹40 ಲಕ್ಷವನ್ನು ಅವರಿಗೇ ವಾಪಸ್ ನೀಡಿದ್ದೆ’ ಎಂದು ಮೋಹನ್ ರಾಜ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.</p>.<p>ಪ್ರಕರಣದಿಂದ ಬಚಾವಾಗಲು ಸಂಚು ರೂಪಿಸಿದ್ದ ದರ್ಶನ್ ಅವರು ಮೋಹನ್ರಾಜ್ ಅವರಿಂದ ಹಣ ಪಡೆದಿದ್ದು, ನಾಲ್ವರು ಯುವಕರಿಗೆ ಸಂದಾಯ ಮಾಡಿ, ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳಲು ತಿಳಿಸಿದ್ದರು. ಬಳಿಕ ನಾಲ್ವರು ಪೊಲೀಸರಿಗೆ ಶರಣಾಗಿದ್ದರು ಎಂಬ ವಿಚಾರ ತನಿಖೆಯಲ್ಲಿ ಗೊತ್ತಾಗಿತ್ತು. </p>.<p>2019–2020ರ ಅವಧಿಯಲ್ಲಿ ಮೋಹನ್ರಾಜ್ ಅವರು ಉಪ ಮೇಯರ್ ಆಗಿದ್ದರು. ಆಗ ಹಲವು ಕಾರ್ಯಕ್ರಮಗಳಿಗೆ ದರ್ಶನ್ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು. ಇಬ್ಬರೂ ಸ್ನೇಹಿತರು. ಮೋಹನ್ರಾಜ್ ಅವರು ಬಿಜೆಪಿ ಶಾಸಕರೊಬ್ಬರ ಹತ್ತಿರದ ಸಂಬಂಧಿ ಎಂದು ಮೂಲಗಳು ಹೇಳಿವೆ.</p>.<h2>ಮಿಲನ ಪ್ರಕಾಶ್ ವಿಚಾರಣೆ:</h2>.<p>ಡೆವಿಲ್ ಚಿತ್ರದ ನಿರ್ದೇಶಕ ಮಿಲನ ಪ್ರಕಾಶ್ ಅವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದರು. </p>.<p>‘ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಮಾಹಿತಿ ನೀಡಿದ್ದರೆ? ‘ಡೆವಿಲ್’ ಚಿತ್ರೀಕರಣ ಯಾವಾಗ ಆರಂಭವಾಗಿತ್ತು ಎಂದು ಪ್ರಶ್ನಿಸಿ ಹೇಳಿಕೆ ದಾಖಲಿಸಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<h2>ಕಮಿಷನರ್ಗೆ ಪತ್ರ:</h2>.<p>‘ಪವಿತ್ರಾಗೌಡ ಅವರು ದರ್ಶನ್ ಸ್ನೇಹಿತೆ. ಕಾನೂನು ಪ್ರಕಾರ ದರ್ಶನ್ ನನ್ನ ಪತಿ. ಪೊಲೀಸರ ಕಡತಗಳಲ್ಲಿ ಆಕೆಯನ್ನು ಹೆಂಡತಿ ಎಂಬುದಾಗಿ ನಮೂದಿಸಬಾರದು’ ಎಂದು ವಿಜಯಲಕ್ಷ್ಮಿ ಅವರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರಿಗೆ ಪತ್ರ ಬರೆದಿದ್ದಾರೆ.</p>.<p>‘ಯಾವ ಪತ್ರವೂ ನನ್ನ ಕೈಸೇರಿಲ್ಲ. ನನ್ನ ಕಚೇರಿಯ ಬೇರೆ ವಿಭಾಗಕ್ಕೆ ಪತ್ರ ಬಂದಿರಬಹುದು’ ಎಂದು ಕಮಿಷನರ್ ತಿಳಿಸಿದ್ದಾರೆ. </p>.<h2>ಬಿಜೆಪಿ ಶಾಸಕರ ಆಪ್ತ ಕಾರ್ತಿಕ್ಗೆ ನೋಟಿಸ್</h2>.<p> ‘ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯೊಬ್ಬರಿಗೆ ಹಣಕಾಸಿನ ಸಹಾಯ ಮಾಡಿರುವ ಆರೋಪದ ಅಡಿ ಪವಿತ್ರಾ ಗೌಡ ಅವರ ಸ್ನೇಹಿತೆ ಸಮತಾ ಹಾಗೂ ಆರೋಪಿ ಪ್ರದೋಷ್ ಆಪ್ತನೂ ಆಗಿರುವ ಕಾರ್ತಿಕ್ ಪುರೋಹಿತ್ ಎಂಬಾತನಿಗೆ ನೋಟಿಸ್ ನೀಡಲಾಗಿದೆ. </p><p>ಬೆಂಗಳೂರಿನ ಬಿಜೆಪಿ ಶಾಸಕರೊಬ್ಬರ ಕಚೇರಿಯಲ್ಲಿ ಕಾರ್ತಿಕ್ ಕೆಲಸ ಮಾಡುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ‘ಕೃತ್ಯ ಎಸಗಿದ ಬಳಿಕ ಪಟ್ಟಣಗೆರೆಯ ಶೆಡ್ಗೆ ಕಾರ್ತಿಕ್ ಪುರೋಹಿತ್ ಅವರನ್ನು ಪ್ರದೋಷ್ ಕರೆಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದ ದೃಶ್ಯಾವಳಿಗಳು ಸಿಕ್ಕಿವೆ’ ಎಂದು ಪೊಲೀಸರು ಹೇಳಿದರು. ಕಾರ್ತಿಕ್ ತಲೆಮರೆಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಅವರಿಗೆ ₹40 ಲಕ್ಷ ನೀಡಿದ್ದ ಆರೋಪದಡಿ, ಪೊಲೀಸರು ಶುಕ್ರವಾರ ಬಿಬಿಎಂಪಿ ಮಾಜಿ ಉಪ ಮೇಯರ್ ಮೋಹನ್ರಾಜ್ ಅವರ ವಿಚಾರಣೆ ನಡೆಸಿದರು.</p>.<p>‘ಹಣ ನೀಡಿದ್ದ ವಿಷಯ ಗೊತ್ತಾದ ಮೇಲೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿತ್ತು. ಮೋಹನ್ ರಾಜ್ ಗೈರಾಗಿದ್ದರು. ಮತ್ತೊಮ್ಮೆ ನೋಟಿಸ್ ನೀಡಿದ್ದರಿಂದ ಶುಕ್ರವಾರ ವಿಚಾರಣೆಗೆ ಬಂದಿದ್ದರು. ಎಸಿಪಿ ಚಂದನ್ ನೇತೃತ್ವದಲ್ಲಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಲಾಯಿತು’ ಎಂದು ಮೂಲಗಳು ಹೇಳಿವೆ.</p>.<p>‘ಮೋಹನ್ ಅವರಿಂದ ಕೆಲವು ದಾಖಲೆಗಳನ್ನು ಪಡೆದುಕೊಳ್ಳಲಾಗಿದೆ. ಮೊಬೈಲ್ ಪರಿಶೀಲಿಸಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಕೊಲೆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ ಎಂದು ತಿಳಿಸಿದ್ದೇನೆ. ದರ್ಶನ್ ಅವರಿಂದ ಪಡೆದಿದ್ದ ₹40 ಲಕ್ಷವನ್ನು ಅವರಿಗೇ ವಾಪಸ್ ನೀಡಿದ್ದೆ’ ಎಂದು ಮೋಹನ್ ರಾಜ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.</p>.<p>ಪ್ರಕರಣದಿಂದ ಬಚಾವಾಗಲು ಸಂಚು ರೂಪಿಸಿದ್ದ ದರ್ಶನ್ ಅವರು ಮೋಹನ್ರಾಜ್ ಅವರಿಂದ ಹಣ ಪಡೆದಿದ್ದು, ನಾಲ್ವರು ಯುವಕರಿಗೆ ಸಂದಾಯ ಮಾಡಿ, ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳಲು ತಿಳಿಸಿದ್ದರು. ಬಳಿಕ ನಾಲ್ವರು ಪೊಲೀಸರಿಗೆ ಶರಣಾಗಿದ್ದರು ಎಂಬ ವಿಚಾರ ತನಿಖೆಯಲ್ಲಿ ಗೊತ್ತಾಗಿತ್ತು. </p>.<p>2019–2020ರ ಅವಧಿಯಲ್ಲಿ ಮೋಹನ್ರಾಜ್ ಅವರು ಉಪ ಮೇಯರ್ ಆಗಿದ್ದರು. ಆಗ ಹಲವು ಕಾರ್ಯಕ್ರಮಗಳಿಗೆ ದರ್ಶನ್ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು. ಇಬ್ಬರೂ ಸ್ನೇಹಿತರು. ಮೋಹನ್ರಾಜ್ ಅವರು ಬಿಜೆಪಿ ಶಾಸಕರೊಬ್ಬರ ಹತ್ತಿರದ ಸಂಬಂಧಿ ಎಂದು ಮೂಲಗಳು ಹೇಳಿವೆ.</p>.<h2>ಮಿಲನ ಪ್ರಕಾಶ್ ವಿಚಾರಣೆ:</h2>.<p>ಡೆವಿಲ್ ಚಿತ್ರದ ನಿರ್ದೇಶಕ ಮಿಲನ ಪ್ರಕಾಶ್ ಅವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದರು. </p>.<p>‘ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಮಾಹಿತಿ ನೀಡಿದ್ದರೆ? ‘ಡೆವಿಲ್’ ಚಿತ್ರೀಕರಣ ಯಾವಾಗ ಆರಂಭವಾಗಿತ್ತು ಎಂದು ಪ್ರಶ್ನಿಸಿ ಹೇಳಿಕೆ ದಾಖಲಿಸಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<h2>ಕಮಿಷನರ್ಗೆ ಪತ್ರ:</h2>.<p>‘ಪವಿತ್ರಾಗೌಡ ಅವರು ದರ್ಶನ್ ಸ್ನೇಹಿತೆ. ಕಾನೂನು ಪ್ರಕಾರ ದರ್ಶನ್ ನನ್ನ ಪತಿ. ಪೊಲೀಸರ ಕಡತಗಳಲ್ಲಿ ಆಕೆಯನ್ನು ಹೆಂಡತಿ ಎಂಬುದಾಗಿ ನಮೂದಿಸಬಾರದು’ ಎಂದು ವಿಜಯಲಕ್ಷ್ಮಿ ಅವರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರಿಗೆ ಪತ್ರ ಬರೆದಿದ್ದಾರೆ.</p>.<p>‘ಯಾವ ಪತ್ರವೂ ನನ್ನ ಕೈಸೇರಿಲ್ಲ. ನನ್ನ ಕಚೇರಿಯ ಬೇರೆ ವಿಭಾಗಕ್ಕೆ ಪತ್ರ ಬಂದಿರಬಹುದು’ ಎಂದು ಕಮಿಷನರ್ ತಿಳಿಸಿದ್ದಾರೆ. </p>.<h2>ಬಿಜೆಪಿ ಶಾಸಕರ ಆಪ್ತ ಕಾರ್ತಿಕ್ಗೆ ನೋಟಿಸ್</h2>.<p> ‘ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯೊಬ್ಬರಿಗೆ ಹಣಕಾಸಿನ ಸಹಾಯ ಮಾಡಿರುವ ಆರೋಪದ ಅಡಿ ಪವಿತ್ರಾ ಗೌಡ ಅವರ ಸ್ನೇಹಿತೆ ಸಮತಾ ಹಾಗೂ ಆರೋಪಿ ಪ್ರದೋಷ್ ಆಪ್ತನೂ ಆಗಿರುವ ಕಾರ್ತಿಕ್ ಪುರೋಹಿತ್ ಎಂಬಾತನಿಗೆ ನೋಟಿಸ್ ನೀಡಲಾಗಿದೆ. </p><p>ಬೆಂಗಳೂರಿನ ಬಿಜೆಪಿ ಶಾಸಕರೊಬ್ಬರ ಕಚೇರಿಯಲ್ಲಿ ಕಾರ್ತಿಕ್ ಕೆಲಸ ಮಾಡುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ‘ಕೃತ್ಯ ಎಸಗಿದ ಬಳಿಕ ಪಟ್ಟಣಗೆರೆಯ ಶೆಡ್ಗೆ ಕಾರ್ತಿಕ್ ಪುರೋಹಿತ್ ಅವರನ್ನು ಪ್ರದೋಷ್ ಕರೆಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದ ದೃಶ್ಯಾವಳಿಗಳು ಸಿಕ್ಕಿವೆ’ ಎಂದು ಪೊಲೀಸರು ಹೇಳಿದರು. ಕಾರ್ತಿಕ್ ತಲೆಮರೆಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>