ತುಡ್ಕಿ ಗ್ರಾಮದ ಸ್ವಗೃಹದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ಪುತ್ರ ಪಾರ್ಥ ಅಗ್ನಿಸ್ಪರ್ಶ ಮಾಡಿದರು. ಪತಿ ಸತ್ಯನಾರಾಯಣ ಸೇರಿದಂತೆ ಕುಟುಂಬದವರು, ಸಾರ್ವಜನಿಕರು ಇದ್ದರು.
ವಿಜಯದಶಮಿಯ ಹಿಂದಿನ ದಿನ ತುಡ್ಕಿಯಲ್ಲಿ ನಿರ್ಮಿಸಿದ್ದ ನೂತನ ಮನೆಯ ಗೃಹಪ್ರವೇಶ ನಡೆದಿತ್ತು. ಸಮಾರಂಭದಲ್ಲಿ ಪ್ರತಿಮಾ ಸಂಭ್ರಮದಿಂದ ಭಾಗವಹಿಸಿದ್ದರು. ಕೇವಲ 15 ದಿನದಲ್ಲೇ ಪ್ರತಿಮಾ ಕೊಲೆಯಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.