<p><strong>ಬೆಂಗಳೂರು: </strong>ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಲ್ಲಿ ಇಬ್ಬರು ಶತಾಯುಷಿಗಳು. ಅದೂ ಸಹ ಉಡುಪಿಯ ಹಿರಿಯಡಕದವರು!<br /><br />ಹಿರಿಯಡಕ ಬಳಿಯ ಗುಡ್ಡೆಯಂಗಡಿ ನಿವಾಸಿಯಾಗಿರುವ ಜಾನಪದ ಕಲಾವಿದ ಗುರುವ ಕೊರಗ 100 ವರ್ಷಗಳನ್ನು ಕಂಡವರು. ಏಪ್ರಿಲ್ 14ರಂದು <strong>ಪ್ರಜಾವಾಣಿ</strong>ಗೆ ನೀಡಿದ್ದ ಸಂದರ್ಶನದಲ್ಲಿ ತಮ್ಮ ಶತಮಾನದ ಅನುಭವವನ್ನು ತೆರೆದಿಟ್ಟಿದ್ದಾರೆ.<br /><br />ಕರಾವಳಿಯ ಬುಡಕಟ್ಟು ಜನಾಂಗದ ಕೊರಗರು ಅಸ್ಪೃಶ್ಯತೆಯನ್ನು ಇನ್ನಿಲ್ಲದಂತೆ ಅನುಭವಿಸಿರುವ ಸಮುದಾಯ. ಈ ಸಮುದಾಯದವರಾದ ಗುರುವ ಕೊರಗ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.</p>.<p><strong>ಸಂದರ್ಶನ ನಿರೂಪಣೆಯ ಪೂರ್ಣ ಪಾಠ: <a href="https://www.prajavani.net/news/article/2018/04/13/565831.html" target="_blank">ಗುರುವ ಕೊರಗ ಕರಾವಳಿಯ ನಿಜ ಮಾದರಿ</a></strong><br /><br />‘ನನಗೆ ನೂರು ವರ್ಷ ದಾಟಿತಾ? ನನ್ನೊಡನೆ ಇದ್ದವರು ಹಾಗೆ ಹೇಳುತ್ತಾರೆ. ನನ್ನ ಸಮಕಾಲೀನರ ವಯಸ್ಸಿಗೆ ಹೋಲಿಕೆ ಮಾಡಿ ಈ ಲೆಕ್ಕ ಹೇಳುತ್ತಾರೆ. ಆಗಿರಬಹುದೇನೋ!’ ಹೀಗೆಂದು <strong>ಪ್ರಜಾವಾಣಿ </strong>ಜತೆ ತಮ್ಮ ನೆನಪುಗಳನ್ನು ಈಚೆಗೆ ಹಂಚಿಕೊಂಡಿದ್ದರು ಗುರುವ ಕೊರಗ ಅವರು.</p>.<p><strong>ಇದನ್ನೂ ಓದಿ:<a href="https://www.prajavani.net/stories/stateregional/kannada-rajyotsava-award-list-590673.html" target="_blank">ನ್ಯಾಯಮೂರ್ತಿ ಎಚ್.ಎಲ್. ದತ್ತು ಸೇರಿ 63 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ</a></strong></p>.<p>ಇನ್ನೊಬ್ಬ ಹಿರಿಯರು <strong>‘ಮದ್ದಲೆ ಮಾಂತ್ರಿಕ’ </strong>ಎಂದೇ ಖ್ಯಾತರಾಗಿರುವ ಹಿರಿಯಡಕ ಗೋಪಾಲ ರಾವ್. 1919ರಲ್ಲಿ ಜನಿಸಿದ ಇವರು ನೂರರ ವಸಂತಕ್ಕೆ ಕಾಲಿಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಲ್ಲಿ ಇಬ್ಬರು ಶತಾಯುಷಿಗಳು. ಅದೂ ಸಹ ಉಡುಪಿಯ ಹಿರಿಯಡಕದವರು!<br /><br />ಹಿರಿಯಡಕ ಬಳಿಯ ಗುಡ್ಡೆಯಂಗಡಿ ನಿವಾಸಿಯಾಗಿರುವ ಜಾನಪದ ಕಲಾವಿದ ಗುರುವ ಕೊರಗ 100 ವರ್ಷಗಳನ್ನು ಕಂಡವರು. ಏಪ್ರಿಲ್ 14ರಂದು <strong>ಪ್ರಜಾವಾಣಿ</strong>ಗೆ ನೀಡಿದ್ದ ಸಂದರ್ಶನದಲ್ಲಿ ತಮ್ಮ ಶತಮಾನದ ಅನುಭವವನ್ನು ತೆರೆದಿಟ್ಟಿದ್ದಾರೆ.<br /><br />ಕರಾವಳಿಯ ಬುಡಕಟ್ಟು ಜನಾಂಗದ ಕೊರಗರು ಅಸ್ಪೃಶ್ಯತೆಯನ್ನು ಇನ್ನಿಲ್ಲದಂತೆ ಅನುಭವಿಸಿರುವ ಸಮುದಾಯ. ಈ ಸಮುದಾಯದವರಾದ ಗುರುವ ಕೊರಗ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.</p>.<p><strong>ಸಂದರ್ಶನ ನಿರೂಪಣೆಯ ಪೂರ್ಣ ಪಾಠ: <a href="https://www.prajavani.net/news/article/2018/04/13/565831.html" target="_blank">ಗುರುವ ಕೊರಗ ಕರಾವಳಿಯ ನಿಜ ಮಾದರಿ</a></strong><br /><br />‘ನನಗೆ ನೂರು ವರ್ಷ ದಾಟಿತಾ? ನನ್ನೊಡನೆ ಇದ್ದವರು ಹಾಗೆ ಹೇಳುತ್ತಾರೆ. ನನ್ನ ಸಮಕಾಲೀನರ ವಯಸ್ಸಿಗೆ ಹೋಲಿಕೆ ಮಾಡಿ ಈ ಲೆಕ್ಕ ಹೇಳುತ್ತಾರೆ. ಆಗಿರಬಹುದೇನೋ!’ ಹೀಗೆಂದು <strong>ಪ್ರಜಾವಾಣಿ </strong>ಜತೆ ತಮ್ಮ ನೆನಪುಗಳನ್ನು ಈಚೆಗೆ ಹಂಚಿಕೊಂಡಿದ್ದರು ಗುರುವ ಕೊರಗ ಅವರು.</p>.<p><strong>ಇದನ್ನೂ ಓದಿ:<a href="https://www.prajavani.net/stories/stateregional/kannada-rajyotsava-award-list-590673.html" target="_blank">ನ್ಯಾಯಮೂರ್ತಿ ಎಚ್.ಎಲ್. ದತ್ತು ಸೇರಿ 63 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ</a></strong></p>.<p>ಇನ್ನೊಬ್ಬ ಹಿರಿಯರು <strong>‘ಮದ್ದಲೆ ಮಾಂತ್ರಿಕ’ </strong>ಎಂದೇ ಖ್ಯಾತರಾಗಿರುವ ಹಿರಿಯಡಕ ಗೋಪಾಲ ರಾವ್. 1919ರಲ್ಲಿ ಜನಿಸಿದ ಇವರು ನೂರರ ವಸಂತಕ್ಕೆ ಕಾಲಿಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>