ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ ಹಣವನ್ನು ವಾಪಸ್ ಕೊಟ್ಟು ದಲಿತರ ಶಿಕ್ಷಣ, ಉದ್ಯೋಗ, ಭೂಒಡೆತನ ಯೋಜನೆ ಮತ್ತು ಗಂಗಾಕಲ್ಯಾಣ ಯೋಜನೆಗೆ ನೀಡಲು ಒತ್ತಾಯಿಸಿದ್ದೇವೆ. ಎಷ್ಟೇ ಒತ್ತಾಯ ಮಾಡಿದರೂ ಸಿದ್ದರಾಮಯ್ಯನವರು ಹಣ ವಾಪಸ್ ಕೊಡುತ್ತಿಲ್ಲ. ಆದ್ದರಿಂದ ಹೋರಾಟ ನಡೆಸುವುದು ಅನಿವಾರ್ಯ ಎಂದು ಹೇಳಿದರು.