ಮಾರುಕಟ್ಟೆಯಲ್ಲಿ ಡೀಸೆಲ್ ದರ ಏರಿಕೆ, ಹೊಸ ಬಸ್ ಖರೀದಿ, ದುರಸ್ತಿ ವೆಚ್ಚವನ್ನು ಆಧರಿಸಿ ಪ್ರತಿ ವರ್ಷವೂ ಸಾರಿಗೆ ನಿಗಮಗಳ ವರಮಾನದ ಬೇಡಿಕೆಯನ್ನು ಆಯೋಗದ ಮುಂದೆ ಮಂಡಿಸಿ, ಅನುಮೋದನೆ ಪಡೆಯಬೇಕು. ಕೊರತೆ ಉದ್ಭವಿಸುವ ಸಂದರ್ಭದಲ್ಲಿ ಆಯೋಗದ ಮೂಲಕವೇ ಪ್ರಯಾಣ ದರ ಪರಿಷ್ಕರಣೆ ಆದೇಶ ಪಡೆಯಬೇಕು. ದರ ಪರಿಷ್ಕರಣೆ ತೀರ್ಮಾನವನ್ನು ಹಿಂಪಡೆಯುವುದಕ್ಕೆ ಸರ್ಕಾರಕ್ಕೆ ಅವಕಾಶ ಇರದಂತೆ ರಕ್ಷಣೆ ಒದಗಿಸಬೇಕು ಎಂಬುದು ಚರ್ಚೆಯಲ್ಲಿದೆ.