ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಮುಜರಾಯಿ ದೇವಾಲಯಗಳಿಗೆ ಅನ್ಯಾಯ: ಸಿಎಜಿ ವರದಿ

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ, ಅಕ್ರಮ ಪಾವತಿ
Published : 7 ಆಗಸ್ಟ್ 2024, 0:37 IST
Last Updated : 7 ಆಗಸ್ಟ್ 2024, 0:37 IST
ಫಾಲೋ ಮಾಡಿ
Comments
ಕೇಳದಿದ್ದರೂ ಅನುದಾನ:
‘ಶಿಥಿಲಾವಸ್ಥೆಯಲ್ಲಿದ್ದು, ಜೀರ್ಣೋದ್ಧಾರಕ್ಕೆ ಅನುದಾನದ ಅಗತ್ಯವಿದೆ ಎಂದು ಕೋಲಾರದ ಎರಡು ತಾಲ್ಲೂಕಿನಿಂದಲೇ 29 ಮುಜರಾಯಿ ದೇವಾಲಯಗಳಿಂದ ಪ್ರಸ್ತಾವ ಸಲ್ಲಿಕೆಯಾಗಿದೆ. ಅವುಗಳಿಗೆ ಅನುದಾನ ಮಂಜೂರು ಮಾಡಿಲ್ಲ. ಆದರೆ ಈ ಅವಧಿಯಲ್ಲಿ ಪ್ರಸ್ತಾವ ಸಲ್ಲಿಸದೇ ಇದ್ದ 2,836 ದೇವಾಲಯ
ಗಳಿಗೆ ಅನುದಾನ ನೀಡಲಾಗಿದೆ. ಈ ಪೈಕಿ 2,264 ಖಾಸಗಿ ದೇವಾಲಯಗಳೂ ಇವೆ. ಅಗತ್ಯವಿದ್ದ ದೇವಾಲಯಗಳಿಗೆ ಅನುದಾನ ನೀಡದೆ, ತಾರತಮ್ಯ ಮಾಡಲಾಗಿದೆ’ ಎನ್ನುತ್ತದೆ ವರದಿ.
ಉಚ್ಚಿಲ ಮಹಾಲಕ್ಷ್ಮಿಗೆ ₹12.75 ಕೋಟಿ
‘ಮುಜರಾಯಿ ದೇವಾಲಯಗಳಿಗೆ ಗರಿಷ್ಠ ₹10 ಲಕ್ಷ ಮತ್ತು ಖಾಸಗಿ ದೇವಾಲಯಗಳಿಗೆ ಗರಿಷ್ಠ ₹25 ಲಕ್ಷ ಅನುದಾನ ಒದಗಿಸಬಹುದು ಎಂದು 2010ರಲ್ಲಿ ಸರ್ಕಾರ ನಿಯಮ ರೂಪಿಸಿದೆ. ಆದರೆ, ಉಡುಪಿಯ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ 2019–20ರಿಂದ 2021–22ರ ನಡುವೆ ಒಟ್ಟು ₹12.75 ಕೋಟಿಯಷ್ಟು ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ತನ್ನದೇ ನಿಯಮವನ್ನು ಮುಜರಾಯಿ ಇಲಾಖೆ ಉಲ್ಲಂಘಿಸಿದೆ’ ಎಂದು ಸಿಎಜಿ ಹೇಳಿದೆ. ‘ಕೋಲಾರದ ಶ್ರೀನಿವಾಸಪುರ ಶನಿಮಹಾತ್ಮ ದೇವಾಲಯಕ್ಕೂ ಈ ನಿಯಮ ಉಲ್ಲಂಘಿಸಿ ₹1.20 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ರೀತಿ ಒಟ್ಟು 79 ದೇವಾಲಯಗಳಿಗೆ ನಿಗದಿಗಿಂತ ಹಲವು ಪಟ್ಟು ಹೆಚ್ಚು ಅನುದಾನ ನೀಡಲಾಗಿದೆ. ಪರಿಣಾಮವಾಗಿ, ದೇವಾಲಯಗಳ ಆರ್ಥಿಕ ಸಂಕಷ್ಟ ನಿವಾರಿಸುವ ಸರ್ಕಾರದ ಉದ್ದೇಶಕ್ಕೆ ಧಕ್ಕೆಯಾಗಿದೆ’ ಎಂದಿದೆ ವರದಿ.
₹203 ಕೋಟಿ ಬಳಕೆಗೆ ಪ್ರಮಾಣಪತ್ರವಿಲ್ಲ
‘ವಿವಿಧ ಯೋಜನೆಗಳ ಅಡಿಯಲ್ಲಿ 11 ಜಿಲ್ಲೆಗಳಿಗೆ ಮಂಜೂರಾಗಿದ್ದ ಅನುದಾನದಲ್ಲಿ, ₹226.53 ಕೋಟಿ ಬಿಡುಗಡೆಯಾಗಿದೆ. ಈ ಅನುದಾನವನ್ನು ಬಳಕೆ ಮಾಡಿಕೊಂಡದ್ದರ ಬಗ್ಗೆ ಸರ್ಕಾರಕ್ಕೆ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕಿತ್ತು. ಆದರೆ ₹203.33 ಕೋಟಿಯಷ್ಟು ಅನುದಾನಕ್ಕೆ ಸಂಬಂಧಿಸಿದಂತೆ ಬಳಕೆ ಪ್ರಮಾಣಪತ್ರವನ್ನು ಸಲ್ಲಿಸಿಯೇ ಇಲ್ಲ’ ಎನ್ನುತ್ತದೆ ಸಿಎಜಿ. ‘ಅನುದಾನವನ್ನು ಉದ್ದೇಶಿತ ಕಾರ್ಯಕ್ಕೇ ಬಳಸಿಕೊಳ್ಳಲಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಂಡು, ಬಳಕೆ ಪ್ರಮಾಣಪತ್ರವನ್ನು ಪಡೆದುಕೊಂಡು ಅನುದಾನದ ಮುಂದಿನ ಕಂತನ್ನು ಬಿಡುಗಡೆ ಮಾಡಬೇಕು. ಆದರೆ ಈ ಎಲ್ಲ ನಿಯಮಗಳನ್ನು ಕಡೆಗಣಿಸಿ ಅನುದಾನದ ದುರ್ಬಳಕೆಗೆ ಅವಕಾಶ ಮಾಡಿಕೊಟ್ಟಂತಾಗಿದೆ’ ಎಂದು ಸಿಎಜಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT