<p><strong>ಬೆಂಗಳೂರು:</strong> ಎಚ್.ಡಿ.ಕುಮಾರಸ್ವಾಮಿ ಅವರ ಮಾತಿನಲ್ಲಿ ಮಹಿಳೆಯರನ್ನು ಅವಮಾನಿಸುವ ಭಾವನೆ ಇರಲಿಲ್ಲ. ಕಾಂಗ್ರೆಸ್ನವರು ತಿರುಚಿ ಚುನಾವಣಾ ವಿಷಯವಾಗಿಸಿಕೊಂಡಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.</p>.<p>'ಜೆಡಿಎಸ್ ಪಕ್ಷದ ಚಿಹ್ನೆ ತೆನೆ ಹೊತ್ತ ಮಹಿಳೆಯಾಗಿದೆ' ಎಂದು ಹೇಳಿದ ಅವರು, 'ಚುನಾವಣೆಯಲ್ಲಿ ಇದು ಅನಗತ್ಯವಾಗಿ ಚರ್ಚೆಯ ವಿಷಯವಾಗಬಾರದು ಎಂಬ ಕಾರಣಕ್ಕೆ ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ' ಎಂದು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.</p>.<p>'ಕುಮಾರಸ್ವಾಮಿ ಅವರ ಕುರಿತು ಯಾರೋ ಸಣ್ಣಪುಟ್ಟವರು, ದಾರಿಯಲ್ಲಿ ಹೋಗುವವರು ಗೋಬ್ಯಾಕ್ ಎಂದರೆ ಏನೂ ಪರಿಣಾಮ ಬೀರುವುದಿಲ್ಲ. ಮಂಡ್ಯಕ್ಕೆ ಕುಮಾರಣ್ಣ, ದೇಶಕ್ಕೆ ಮೋದಿ ಎಂಬುದೇ ಮಂಡ್ಯದಲ್ಲಿ ನಮ್ಮ ಘೋಷಣೆ’ ಎಂದರು.</p>.<h2>ಶೋಭಾ ಟೀಕೆ:</h2>.<p>‘ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಹಿಳೆಯರ ಬಗ್ಗೆ ಗೌರವವಿದೆ. ಆದರೆ, ಅವರ ಹೇಳಿಕೆಯನ್ನು ತಿರುಚಿ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ನೂರಕ್ಕೆ ನೂರು ಸುಳ್ಳು ಹೇಳಿ ಸತ್ಯ ಮಾಡುವ ಚಾಳಿ ಕಾಂಗ್ರೆಸ್ನದು’ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.</p>.<p>‘ಕಾಂಗ್ರೆಸ್ಗೆ ಚುನಾವಣೆಗೆ ಒಂದು ವಿಷಯ ಬೇಕಿತ್ತು. ಏನೂ ಸಿಗದಿದ್ದಾಗ ಇಂತಹ ವಿಚಾರಗಳನ್ನು ತಿರುಗಿಸಿ– ಮುರುಗಿಸಿ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಎಚ್.ಡಿ.ಕುಮಾರಸ್ವಾಮಿ ಅವರ ಮಾತಿನಲ್ಲಿ ಮಹಿಳೆಯರನ್ನು ಅವಮಾನಿಸುವ ಭಾವನೆ ಇರಲಿಲ್ಲ. ಕಾಂಗ್ರೆಸ್ನವರು ತಿರುಚಿ ಚುನಾವಣಾ ವಿಷಯವಾಗಿಸಿಕೊಂಡಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.</p>.<p>'ಜೆಡಿಎಸ್ ಪಕ್ಷದ ಚಿಹ್ನೆ ತೆನೆ ಹೊತ್ತ ಮಹಿಳೆಯಾಗಿದೆ' ಎಂದು ಹೇಳಿದ ಅವರು, 'ಚುನಾವಣೆಯಲ್ಲಿ ಇದು ಅನಗತ್ಯವಾಗಿ ಚರ್ಚೆಯ ವಿಷಯವಾಗಬಾರದು ಎಂಬ ಕಾರಣಕ್ಕೆ ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ' ಎಂದು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.</p>.<p>'ಕುಮಾರಸ್ವಾಮಿ ಅವರ ಕುರಿತು ಯಾರೋ ಸಣ್ಣಪುಟ್ಟವರು, ದಾರಿಯಲ್ಲಿ ಹೋಗುವವರು ಗೋಬ್ಯಾಕ್ ಎಂದರೆ ಏನೂ ಪರಿಣಾಮ ಬೀರುವುದಿಲ್ಲ. ಮಂಡ್ಯಕ್ಕೆ ಕುಮಾರಣ್ಣ, ದೇಶಕ್ಕೆ ಮೋದಿ ಎಂಬುದೇ ಮಂಡ್ಯದಲ್ಲಿ ನಮ್ಮ ಘೋಷಣೆ’ ಎಂದರು.</p>.<h2>ಶೋಭಾ ಟೀಕೆ:</h2>.<p>‘ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಹಿಳೆಯರ ಬಗ್ಗೆ ಗೌರವವಿದೆ. ಆದರೆ, ಅವರ ಹೇಳಿಕೆಯನ್ನು ತಿರುಚಿ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ನೂರಕ್ಕೆ ನೂರು ಸುಳ್ಳು ಹೇಳಿ ಸತ್ಯ ಮಾಡುವ ಚಾಳಿ ಕಾಂಗ್ರೆಸ್ನದು’ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.</p>.<p>‘ಕಾಂಗ್ರೆಸ್ಗೆ ಚುನಾವಣೆಗೆ ಒಂದು ವಿಷಯ ಬೇಕಿತ್ತು. ಏನೂ ಸಿಗದಿದ್ದಾಗ ಇಂತಹ ವಿಚಾರಗಳನ್ನು ತಿರುಗಿಸಿ– ಮುರುಗಿಸಿ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>