ಸುದ್ದಿಗಾರರ ಜತೆಗೆ ಮಂಗಳವಾರ ಮಾತನಾಡಿದ ಅವರು, ‘ಪೆನ್ ಡ್ರೈವ್ ಸೃಷ್ಟಿಕರ್ತ ಕಾರ್ತಿಕ್ ಗೌಡ ವಿಡಿಯೊಗಳನ್ನು ಮೊದಲು ತಂದುಕೊಟ್ಟಿದ್ದೇ ಶಿವಕುಮಾರ್ ಅವರಿಗೆ. ಆ ವೇಳೆ, ಹಾಸನದ ಕಾಂಗ್ರೆಸ್ ಅಭ್ಯರ್ಥಿಯೂ ಇದ್ದರು. ಈ ಪ್ರಕರಣದಲ್ಲಿ ಶಿವಕುಮಾರ್ ಪಾತ್ರ ಇರುವುದಕ್ಕೆ ಆಡಿಯೊ ಸಂಭಾಷಣೆಯ ಸಾಕ್ಷ್ಯವೂ ಇದೆ. ಅವರು ರಾಜೀನಾಮೆ ಕೊಡದಿದ್ದರೆ, ಅವರನ್ನು ಮುಖ್ಯಮಂತ್ರಿಯವರು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.