ನಮಗೆ ತಂಗಳು ಇರ್ತಿತ್ತು...
‘ಹಳ್ಳಿಗಳಲ್ಲಿ ಈಗ ಜೀವನ ಪದ್ಧತಿ ಬದಲಾಗಿದ್ದು, ರೈತರು ಬೆಳಿಗ್ಗೆ ಉಪಾಹಾರ ಸೇವನೆ ರೂಢಿಸಿಕೊಂಡಿದ್ದಾರೆ. ನಮಗೆ ಮನೆಯಲ್ಲಿ ತಂಗಳು ಇರ್ತಿತ್ತೇ ಹೊರತು, ಇಡ್ಲಿ, ದೋಸೆ, ಉಪ್ಪಿಟ್ಟು ಏನೂ ಇರುತ್ತಿರಲಿಲ್ಲ. ರಾತ್ರಿ ಉಳಿದ ಮುದ್ದೆಗೆ ಮಜ್ಜಿಗೆ ಬೆರೆಸಿ ತಂಗಳು ತಿನ್ನುತ್ತಿದ್ದೆವು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಲ್ಯದ ದಿನಗಳನ್ನು ನೆನೆದರು.
ರಾಯಚ್ಯನವರ ಸ್ಮಾರಕ ಉದ್ಘಾಟನಾ ಭಾಷಣ ಶುರು ಮಾಡುವ ವೇಳೆಗೆ ಸಂಜೆ 4 ಗಂಟೆ ಆಗಿತ್ತು. ಊಟದ ಸಮಯ ತಡವಾದದ್ದನ್ನು ಪ್ರಸ್ತಾಪಿಸಿ ಕ್ಷಮೆ ಕೋರಿ ಮೇಲಿನ ಪ್ರಸಂಗವನ್ನು ತಿಳಿಸಿದರು.
‘ರಾಚಯ್ಯ ಅವರ ಮನೆಯಲ್ಲೂ ಇಡ್ಲಿ, ದೋಸೆ ಇರುತ್ತಿರಲಿಲ್ಲ ಎಂದು ಕಾಣಿಸು
ತ್ತದೆ. ಅವರೂ ನನ್ನಂತೆ ತಂಗಳು ತಿಂದು ಗಟ್ಟಿಯಾದರು’ ಎಂದರು.