‘ಮಂತ್ರಿಮಂಡಲದ ಗಲಾಟೆಯಲ್ಲೇ ಕಾಂಗ್ರೆಸ್ ವಿಭಜನೆ ಆಗುತ್ತದೆ. ಕಾಂಗ್ರೆಸ್ ಒಳಜಗಳ ಹೊರ ಬರದಂತೆ ಮಾಡಿರುವ ಷಡ್ಯಂತ್ರದ ಭಾಗವಾಗಿ ಆರ್ಎಸ್ಎಸ್ ಹೆಸರನ್ನು ಮುನ್ನೆಲೆಗೆ ತರಲಾಗಿದೆ ಎಂದು ಟೀಕಿಸಿದರು.
ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಐದು ಉಚಿತ ಗ್ಯಾರಂಟಿಗಳನ್ನು ನೀಡಿದೆ. ಅಧಿಕಾರಕ್ಕೆ ಬಂದು 24 ಗಂಟೆಗಳಲ್ಲಿ ಇವನ್ನು ಕೊಡುವುದಾಗಿ ಕಾಂಗ್ರೆಸ್ ಹೇಳಿತ್ತು. ಈಗ 20 ದಿನ ಕಳೆದರೂ ಯಾವುದೇ ಯೋಜನೆ ಬಗ್ಗೆ ಮಾತಿಲ್ಲ. ಸುಳ್ಳು ಆಶ್ವಾಸನೆ ನೀಡಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಡಳಿತ ಹಿಡಿದಿದೆ. ಕಾಂಗ್ರೆಸ್ ಆಶ್ವಾಸನೆ ನಂಬಿ ಮತ ಹಾಕಿರುವ ಮತದಾರರು ಆಕ್ರೋಶದಲ್ಲಿದ್ದಾರೆ ಎಂದು ಹೇಳಿದರು.
‘ಜನರು ವಿದ್ಯುತ್ ಬಿಲ್ ಪಾವತಿಸಬಾರದು ಅಂತ ನಾನೇ ಹೇಳ್ತೇನೆ. ಜನರ ಆಕ್ರೋಶ ಸಹಜ. ಒಂದೊಮ್ಮೆ ಜನರಿಗೆ ತೊಂದರೆಯಾದರೆ ನಾವು ಜನರ ಪರವಾಗಿ ನಿಲ್ಲುತ್ತೇವೆ. ವಿದ್ಯುತ್ ಬಿಲ್ ನೀಡಲು ಬರುವ ನೌಕರರ ಮೇಲೆ ಹಲ್ಲೆಯಾದರೆ ಅದಕ್ಕೆ ಸರ್ಕಾರ ಹೊಣೆಯಾಗುತ್ತದೆ’ ಎಂದು ಎಚ್ಚರಿಸಿದರು.
‘ಯಾವುದೋ ಸಂದರ್ಭದಲ್ಲಿ ಹೇಳಿದ ಹೇಳಿಕೆ ಬಗ್ಗೆ ಈಗ ಎಫ್ಐಆರ್ ಹಾಕಲಾಗುತ್ತಿದೆ. ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ. ಹಿಂದಿನ ಸರ್ಕಾರದ ಅವಧಿಯ ₹20ಸಾವಿರ ಕೋಟಿ ಮೊತ್ತದ ಟೆಂಡರ್ ವಾಪಸ್ ಅನ್ನು ಈ ಸರ್ಕಾರ ವಾಪಸ್ ಪಡೆದಿದೆ. 80 ಪರ್ಸೆಂಟ್ ಕಮಿಷನ್ಗೆ ಬೇಡಿಕೆ ಇಡಲು ಈ ರೀತಿ ಮಾಡಲಾಗಿದೆ. ಹಿಂದಿನ ಸರ್ಕಾರದ ಮೇಲೆ ಬಂದಿರುವ 40 ಪರ್ಸೆಂಟ್ ಕಮಿಷನ್ ಬಗ್ಗೆ ತನಿಖೆ ನಡೆಯಲಿ. ಜತೆಗೆ ಲೋಕಾಯುಕ್ತದಲ್ಲಿರುವ ಸಿದ್ದರಾಮಯ್ಯ ಮೇಲಿನ ಪ್ರಕರಣದ ತನಿಖೆಯೂ ನಡೆಯಲಿ’ ಎಂದು ನಳಿನ್ ಆಗ್ರಹಿಸಿದರು.