‘ತಮಿಳುನಾಡುಒಂಬತ್ತನೇ ಪರಿಚ್ಛೇದ ಅಡಿ ಶೇ 69 ರಷ್ಟು ಮೀಸಲಾತಿ ನೀಡಿದೆ. ಇದರ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ದಾಖಲಾಗಿದೆ. ಆದರೆ, ಸುಪ್ರೀಂಕೋರ್ಟ್ ಮೀಸಲಾತಿಗೆ ತಡೆ ನೀಡಿಲ್ಲ. ಇದೇ ರೀತಿ ಹಲವು ರಾಜ್ಯಗಳು ಶೇ 50 ಕ್ಕೂ ಹೆಚ್ಚು ಮೀಸಲಾತಿ ನೀಡಿದ್ದು, ಇವುಗಳ ಪ್ರಕರಣಗಳೂ ಇತ್ಯರ್ಥವಾಗಿಲ್ಲ’ ಎಂದು ಮಾಧುಸ್ವಾಮಿ ತಿಳಿಸಿದರು.