‘ಮಂಜುನಾಥ್ ಅವರ ಕಾರ್ಯದಕ್ಷತೆ, ದೂರದೃಷ್ಟಿಯಿಂದ ಸಂಸ್ಥೆಯು ಜಗತ್ತಿನಾದ್ಯಂತ ಮನ್ನಣೆ ಪಡೆದಿದೆ. ಸಂಸ್ಥೆಯ ಶಾಖೆಗಳೂ ವಿಸ್ತರಣೆಗೊಂಡಿವೆ. ಅವರ ಸೇವೆಗೆ ‘ಪದ್ಮಶ್ರೀ’ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ. ಅವರ ಪರಿಶ್ರಮದಿಂದ ಭಾರತದ ಪ್ರತಿಷ್ಠಿತ 10 ಹೃದ್ರೋಗ ಆಸ್ಪತ್ರೆಗಳ ಪಟ್ಟಿಯಲ್ಲಿ ಸಂಸ್ಥೆಯು ಮೊದಲ ಸ್ಥಾನದಲ್ಲಿದೆ’ ಎಂದು ಹೇಳಲಾಗಿದೆ.