ಇದೇ ವಿಭಾಗದಲ್ಲಿ ಶಕ್ತಿಪ್ರಸಾದ್ ಶೆಟ್ಟಿ ಅವರ ಕೋಣಗಳನ್ನು ಓಡಿಸುತ್ತಿರುವ ಶ್ರೀನಿವಾಸ ಗೌಡ, ಈ ಬಾರಿ ನಿರಂತರವಾಗಿ 12 ಚಿನ್ನಗಳನ್ನು ಗೆದ್ದಿದ್ದು, ಮಂಜೇಶ್ವರದಲ್ಲಿ ಈಗಾಗಲೇ ಸ್ಪರ್ಧೆಯ ಅಂತಿಮ ಸುತ್ತು ಪ್ರವೇಶಿಸಿದ್ದಾರೆ. ಭಾನುವಾರ ನಸುಕಿನ ಜಾವ ಫೈನಲ್ ನಡೆಯುವ ನಿರೀಕ್ಷೆ ಇದೆ. ಈ ಋತುವಿನಲ್ಲಿ ಮಂಜೇಶ್ವರದ ಬಳಿಕ ಮತ್ತೆರಡು ಕಂಬಳಗಳು ನಡೆಯಲಿವೆ.