<p><strong>ಮಂಗಳೂರು: </strong>ಕಂಬಳದಲ್ಲಿ ‘ವೇಗದ ಓಟ’ದಿಂದ ಹೆಸರು ಮಾಡಿರುವ ಅಶ್ವತ್ಥಪುರ ಶ್ರೀನಿವಾಸ ಗೌಡ ಹೊಸ ದಾಖಲೆ ಮಾಡಿದ್ದು, ಮತ್ತೊಂದು ದಾಖಲೆ ಸಮಬಲಗೊಳಿಸುವ ಹೊಸ್ತಿಲಲ್ಲಿದ್ದಾರೆ.</p>.<p>ಈ ಋತುವಿನ 13ನೇಯ, ಮಂಜೇಶ್ವರದ ಪೈವಳಿಕೆಯ ‘ಅಣ್ಣ–ತಮ್ಮ’ ಜೋಡುಕರೆ ಕಂಬಳ ಶನಿವಾರ ಆರಂಭಗೊಂಡಿದ್ದು, ಇಲ್ಲಿ ಕಂಬಳದ ಕರೆ(ಕಂಬಳ ಓಟದ ಟ್ರ್ಯಾಕ್)ಗಿಳಿಯುವ ಮೊದಲೇ ಶ್ರೀನಿವಾಸ ಗೌಡ ಅವರು ಒಂದೇ ಋತುವಿನ 12 ಕಂಬಳದಲ್ಲಿ 35 ಪದಕ ಪಡೆದ ದಾಖಲೆ ಮಾಡಿದ್ದಾರೆ. ವೇಣೂರಿನಲ್ಲಿ ಈಚೆಗೆ ನಡೆದ ಈ ಋತುವಿನ 12ನೇ ಕಂಬಳದಲ್ಲಿ ಈ ದಾಖಲೆ ಸೃಷ್ಟಿಯಾಗಿತ್ತು.</p>.<p>‘ಕಂಬಳ ಓಟಗಾರ ಹಕ್ಕೇರಿ ಸುರೇಶ್ ಶೆಟ್ಟಿ ಅವರು ಈ ಹಿಂದೆ ಒಂದೇ ಋತುವಿನ 17 ಕಂಬಳಗಳಿಂದ 32 ಪದಕ ಗೆದ್ದಿದ್ದರು’ ಎಂದು ಕಂಬಳ ಅಕಾಡೆಮಿ ಮತ್ತು ಸಮಿತಿಗಳ ಸದಸ್ಯರಾಗಿರುವ ಗುಣಪಾಲ ಕಡಂಬ ತಿಳಿಸಿದರು.</p>.<p><strong>ಸಮಬಲ:</strong></p>.<p>ಕಂಬಳದ ಹಗ್ಗ ಕಿರಿಯ ವಿಭಾಗದಲ್ಲಿ ಬೆಳವಾಯಿ ಸದಾನಂದ ಶೆಟ್ಟಿ ಅವರ ಕೋಣವನ್ನು ಓಡಿಸಿದ್ದ ನಕ್ರೆ ಜಯಕರ ಮಡಿವಾಳ ನಿರಂತರವಾಗಿ 13 ಚಿನ್ನ ಗೆದ್ದಿರುವುದು ಇನ್ನೊಂದು ದಾಖಲೆಯಾಗಿದೆ.</p>.<p>ಇದೇ ವಿಭಾಗದಲ್ಲಿ ಶಕ್ತಿಪ್ರಸಾದ್ ಶೆಟ್ಟಿ ಅವರ ಕೋಣಗಳನ್ನು ಓಡಿಸುತ್ತಿರುವ ಶ್ರೀನಿವಾಸ ಗೌಡ, ಈ ಬಾರಿ ನಿರಂತರವಾಗಿ 12 ಚಿನ್ನಗಳನ್ನು ಗೆದ್ದಿದ್ದು, ಮಂಜೇಶ್ವರದಲ್ಲಿ ಈಗಾಗಲೇ ಸ್ಪರ್ಧೆಯ ಅಂತಿಮ ಸುತ್ತು ಪ್ರವೇಶಿಸಿದ್ದಾರೆ. ಭಾನುವಾರ ನಸುಕಿನ ಜಾವ ಫೈನಲ್ ನಡೆಯುವ ನಿರೀಕ್ಷೆ ಇದೆ. ಈ ಋತುವಿನಲ್ಲಿ ಮಂಜೇಶ್ವರದ ಬಳಿಕ ಮತ್ತೆರಡು ಕಂಬಳಗಳು ನಡೆಯಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು: </strong>ಕಂಬಳದಲ್ಲಿ ‘ವೇಗದ ಓಟ’ದಿಂದ ಹೆಸರು ಮಾಡಿರುವ ಅಶ್ವತ್ಥಪುರ ಶ್ರೀನಿವಾಸ ಗೌಡ ಹೊಸ ದಾಖಲೆ ಮಾಡಿದ್ದು, ಮತ್ತೊಂದು ದಾಖಲೆ ಸಮಬಲಗೊಳಿಸುವ ಹೊಸ್ತಿಲಲ್ಲಿದ್ದಾರೆ.</p>.<p>ಈ ಋತುವಿನ 13ನೇಯ, ಮಂಜೇಶ್ವರದ ಪೈವಳಿಕೆಯ ‘ಅಣ್ಣ–ತಮ್ಮ’ ಜೋಡುಕರೆ ಕಂಬಳ ಶನಿವಾರ ಆರಂಭಗೊಂಡಿದ್ದು, ಇಲ್ಲಿ ಕಂಬಳದ ಕರೆ(ಕಂಬಳ ಓಟದ ಟ್ರ್ಯಾಕ್)ಗಿಳಿಯುವ ಮೊದಲೇ ಶ್ರೀನಿವಾಸ ಗೌಡ ಅವರು ಒಂದೇ ಋತುವಿನ 12 ಕಂಬಳದಲ್ಲಿ 35 ಪದಕ ಪಡೆದ ದಾಖಲೆ ಮಾಡಿದ್ದಾರೆ. ವೇಣೂರಿನಲ್ಲಿ ಈಚೆಗೆ ನಡೆದ ಈ ಋತುವಿನ 12ನೇ ಕಂಬಳದಲ್ಲಿ ಈ ದಾಖಲೆ ಸೃಷ್ಟಿಯಾಗಿತ್ತು.</p>.<p>‘ಕಂಬಳ ಓಟಗಾರ ಹಕ್ಕೇರಿ ಸುರೇಶ್ ಶೆಟ್ಟಿ ಅವರು ಈ ಹಿಂದೆ ಒಂದೇ ಋತುವಿನ 17 ಕಂಬಳಗಳಿಂದ 32 ಪದಕ ಗೆದ್ದಿದ್ದರು’ ಎಂದು ಕಂಬಳ ಅಕಾಡೆಮಿ ಮತ್ತು ಸಮಿತಿಗಳ ಸದಸ್ಯರಾಗಿರುವ ಗುಣಪಾಲ ಕಡಂಬ ತಿಳಿಸಿದರು.</p>.<p><strong>ಸಮಬಲ:</strong></p>.<p>ಕಂಬಳದ ಹಗ್ಗ ಕಿರಿಯ ವಿಭಾಗದಲ್ಲಿ ಬೆಳವಾಯಿ ಸದಾನಂದ ಶೆಟ್ಟಿ ಅವರ ಕೋಣವನ್ನು ಓಡಿಸಿದ್ದ ನಕ್ರೆ ಜಯಕರ ಮಡಿವಾಳ ನಿರಂತರವಾಗಿ 13 ಚಿನ್ನ ಗೆದ್ದಿರುವುದು ಇನ್ನೊಂದು ದಾಖಲೆಯಾಗಿದೆ.</p>.<p>ಇದೇ ವಿಭಾಗದಲ್ಲಿ ಶಕ್ತಿಪ್ರಸಾದ್ ಶೆಟ್ಟಿ ಅವರ ಕೋಣಗಳನ್ನು ಓಡಿಸುತ್ತಿರುವ ಶ್ರೀನಿವಾಸ ಗೌಡ, ಈ ಬಾರಿ ನಿರಂತರವಾಗಿ 12 ಚಿನ್ನಗಳನ್ನು ಗೆದ್ದಿದ್ದು, ಮಂಜೇಶ್ವರದಲ್ಲಿ ಈಗಾಗಲೇ ಸ್ಪರ್ಧೆಯ ಅಂತಿಮ ಸುತ್ತು ಪ್ರವೇಶಿಸಿದ್ದಾರೆ. ಭಾನುವಾರ ನಸುಕಿನ ಜಾವ ಫೈನಲ್ ನಡೆಯುವ ನಿರೀಕ್ಷೆ ಇದೆ. ಈ ಋತುವಿನಲ್ಲಿ ಮಂಜೇಶ್ವರದ ಬಳಿಕ ಮತ್ತೆರಡು ಕಂಬಳಗಳು ನಡೆಯಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>