‘ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಮಾತುಕತೆ ನಡೆಸಿ ಸಭೆಯ ದಿನಾಂಕ ನಿಗದಿ ಮಾಡುತ್ತೇನೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಬಗ್ಗೆ ಸಹಾನುಭೂತಿ ಇದೆ. ಜನಸಂಖ್ಯೆಗೆ ಆಧಾರವಾಗಿ ನ್ಯಾಯ ಕೊಡಿಸಲು ಸರ್ಕಾರವೂ ಬದ್ಧವಿದೆ. ಈ ಸಮುದಾಯಗಳ ಭಾವನೆಗೆ ನಾವು ಸ್ಪಂದಿಸುತ್ತೇವೆ. ಕಾನೂನಾತ್ಮಕ ವಿಚಾರ ಇರುವುದರಿಂದ ಕಾನೂನು ತಜ್ಞರೂ ಈ ಸಭೆಯಲ್ಲಿ ಭಾಗವಹಿಸುವರು’ ಎಂದು ಬೊಮ್ಮಾಯಿ ತಿಳಿಸಿದರು.