ಸೋಮವಾರ, 20 ಅಕ್ಟೋಬರ್ 2025
×
ADVERTISEMENT
ADVERTISEMENT

ಗಣಿಗಾರಿಕೆ| ಕರಡಿಬೆಟ್ಟಕ್ಕೆ ಕಂಟಕ: ಜನ, ವಿದ್ಯಾರ್ಥಿಗಳು, ಮಠಾಧೀಶರಿಗೆ ಪ್ರಾಣಸಂಕಟ

Published : 19 ಅಕ್ಟೋಬರ್ 2025, 23:30 IST
Last Updated : 19 ಅಕ್ಟೋಬರ್ 2025, 23:30 IST
ಫಾಲೋ ಮಾಡಿ
Comments
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಕ್ಕೆ ಸಿಲುಕಿ ಸತ್ತಿರುವ ಕರಡಿ

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಕ್ಕೆ ಸಿಲುಕಿ ಸತ್ತಿರುವ ಕರಡಿ  

ಹೆದ್ದಾರಿ ಸುತ್ತ ಕ್ರಷರ್ ಹಾವಳಿ
ರಾಷ್ಟ್ರೀಯ ಹೆದ್ದಾರಿ ಆಸುಪಾಸಿನಲ್ಲಿ ಏಳೆಂಟು ಕ್ರಷರ್‌ಗಳಿದ್ದು, ಕರಡಿಬೆಟ್ಟದಿಂದಲೇ ಕಲ್ಲು ರವಾನೆ ಆಗುತ್ತಿದೆ. ನೆಲಮಟ್ಟದಿಂದ ತಳ, ಮೇಲ್ಭಾಗಕ್ಕೆ ತಲಾ 200 ಅಡಿ ಕೊರೆಯಲಾಗಿದೆ. ‘ ಅನುಮತಿ ಪಡೆದು 30 ವರ್ಷಗಳಿಂದ ಗಣಿಗಾರಿಕೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಅಕ್ರಮ ಗಣಿಗಳಿಲ್ಲ’ ಎಂದು ಗಣಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ‘ಬೆಟ್ಟದ ಸುತ್ತಲೂ ಜನವಸತಿ, ಶಾಲೆ, ಮಠಗಳಿರುವ ಕಾರಣ ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಕಲ್ಲು ಗಣಿ ನಿಂತಿಲ್ಲ’ ಎಂದು ಸಾಮಾಜಿಕ ಹೋರಾಟಗಾರ ಜೆ.ಯಾದವರೆಡ್ಡಿ ಹೇಳಿದರು.
ಗಣಿ ಮಾಲೀಕರು ರಾಜಧನ ಕಟ್ಟುತ್ತಿದ್ದು, ಸರ್ಕಾರಕ್ಕೆ ಆದಾಯ ಬರುತ್ತಿದೆ. ಜನರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ದೂರುಗಳು ಬಂದರೆ ಪರಿಶೀಲನೆ ನಡೆಸಲಾಗುವುದು ಎಂ.ಜೆ.ಮಹೇಶ್‌, ಉಪ ನಿರ್ದೇಶಕ ಗಣಿ ಮತ್ತು ಭೂವಿಜ್ಞಾನ ಇಲಾಖೆ
ಬೇಕು ಕರಡಿ ಕಾರಿಡಾರ್‌
ಕ್ರಷರ್‌ಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ದುರ್ಗದ ಸಾಲುಗುಡ್ಡಗಳಲ್ಲಿದ್ದ ಪ್ರಾಣಿಗಳು ಜನವಸತಿ ಪ್ರದೇಶದತ್ತ ಬರುತ್ತಿವೆ. ವರ್ಷದಿಂದೀಚೆಗೆ 8 ಕರಡಿಗಳು ವಾಹನಗಳಿಗೆ ಸಿಲುಕಿ ಮೃತಪಟ್ಟಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಕರಡಿಗಳ ಓಡಾಟಕ್ಕಾಗಿ ‘ಕರಡಿ ಕಾರಿಡಾರ್‌’ ರೂಪಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT