ಖರ್ಚಿಗೆ ಸಾಲ ಮಾಡಿದ್ದು ನಿಜ: ಕಾರ್ಯಕರ್ತನ ಜೊತೆಗಿನ ಸಂಭಾಷಣೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶ್ರೀನಿವಾಸಗೌಡ, ‘ಕಳೆದ ಚುನಾವಣೆಯಲ್ಲಿ ಖರ್ಚಿಗೆ ಸಾಲ ಮಾಡಿದ್ದಾಗಿ ಹೇಳಿರುವುದು ನಿಜ. ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿ ಗೆದ್ದರೆ ಜಿಲ್ಲೆಗೆ ಹಲವಾರು ರೀತಿ ಅವಕಾಶ ಸಿಗಲಿವೆ ಹಾಗೂ ಅಭಿವೃದ್ಧಿ ಕೆಲಸ ನಡೆಯಲಿವೆ ಎಂಬರ್ಥದಲ್ಲಿ ಹೇಳಿದ್ದೇನೆ. ಮಂತ್ರಿ ವಿಚಾರ ಮಾತನಾಡಿಲ್ಲ. ಕಾರ್ಯಕರ್ತರ ಜೊತೆ ತಮಾಷೆಗೆ ಕೆಲವೊಂದು ವಿಚಾರ ಮಾತನಾಡುತ್ತೇವೆ’ ಎಂದರು.