ಮಂಗಳವಾರ, 12 ಆಗಸ್ಟ್ 2025
×
ADVERTISEMENT
ADVERTISEMENT

ವಿಧಾನಮಂಡಲ ಅಧಿವೇಶನ | ಪ್ರಶ್ನೋತ್ತರ: ಶಾಲಾ ಸ್ವಚ್ಛತೆಗೆ ಹೊರಗುತ್ತಿಗೆ

Published : 11 ಆಗಸ್ಟ್ 2025, 23:58 IST
Last Updated : 11 ಆಗಸ್ಟ್ 2025, 23:58 IST
ಫಾಲೋ ಮಾಡಿ
Comments
ರಾಜ್ಯದಲ್ಲಿ 47,469 ಶಾಲೆಗಳಿದ್ದು, 43.46 ಲಕ್ಷ ಮಕ್ಕಳು ಕಲಿಯುತ್ತಿದ್ದಾರೆ. ಶಾಲಾ ಸ್ವಚ್ಛತಾ ಕೆಲಸವನ್ನು ಹೊರಗುತ್ತಿಗೆ ನೀಡುವ ಕುರಿತು ಚಿಂತನೆ ನಡೆದಿದೆ. ಸಚ್ಛತೆಗಾಗಿ ನೀಡುತ್ತಿರುವ ಮೊತ್ತವನ್ನು ಹೆಚ್ಚಳ ಮಾಡಲಾಗಿತ್ತು. ಮತ್ತೆ ಶೇ 10ರಿಂದ 20ರಷ್ಟು ಹೆಚ್ಚಳ ಮಾಡಲು ಪ್ರಸ್ತಾವ ಸಲ್ಲಿಸಲಾಗುವುದು
ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಸಚಿವ (ಪ್ರಶ್ನೆ: ರಾಮೋಜಿಗೌಡ, ಕಾಂಗ್ರೆಸ್‌ ಸದಸ್ಯ)
ADVERTISEMENT
ರಾಜ್ಯದಲ್ಲಿ 15.59 ಫಲಾನುಭವಿಗಳನ್ನು ಒಳಗೊಂಡ 12.68 ಲಕ್ಷ ಅಕ್ರಮ ಪಡಿತರ ಚೀಟಿಗಳನ್ನು ಪಟ್ಟಿ ಮಾಡಿದ್ದು, ಅವುಗಳನ್ನು ಶೀಘ್ರ ರದ್ದು ಮಾಡಲಾಗುವುದು. ಇಲ್ಲವೇ ಎಪಿಎಲ್‌ ಪಡಿತರಕ್ಕೆ ಪರಿವರ್ತಿಸಲಾಗುವುದು. ನಿಯಮ ಮೀರಿ ಅಕ್ರಮವಾಗಿ ಪಡೆದ ಪಡಿತರ ಚೀಟಿಗಳನ್ನು ರದ್ದು ಮಾಡಲು ಪಕ್ಷಭೇದ ಮರೆತು ಸಹಕಾರ ನೀಡಬೇಕು
ಕೆ.ಎಚ್‌. ಮುನಿಯಪ್ಪ, ಆಹಾರ ಸಚಿವ (ಪ್ರಶ್ನೆ: ಎಂ. ನಾಗರಾಜ್‌, ಕಾಂಗ್ರೆಸ್‌ ಸದಸ್ಯ)
ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ಶೇ 60ಕ್ಕಿಂತ ಕಡಿಮೆ ಫಲಿತಾಂಶ ಬಂದರೆ ಶಿಕ್ಷಕರ ವಾರ್ಷಿಕ ವೇತನ ಬಡ್ತಿ, ಮೂರು ವರ್ಷ ಫಲಿತಾಂಶ ಕುಸಿದರೆ ವೇತನಾನುದಾನ ಸ್ಥಗಿತಗೊಳಿಸುವ ಆದೇಶವನ್ನು ತಡೆ ಹಿಡಿಯಲಾಗುವುದು
ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಸಚಿವ (ಪ್ರಶ್ನೆ: ಎಸ್‌.ವ್ಹಿ. ಸಂಕನೂರ, ಬಿಜೆಪಿ ಸದಸ್ಯ)
2,878 ಸರ್ಕಾರಿ ಆಸ್ಪತ್ರೆಗಳಲ್ಲಿ 14 ಆಸ್ಪತ್ರೆಗಳು ಅಗ್ನಿ ಸುರಕ್ಷತಾ ವ್ಯವಸ್ಥೆ ಅಳವಡಿಸಿಕೊಂಡಿವೆ. ಉಳಿದ ಆಸ್ಪತ್ರೆಗಳ ಕಟ್ಟಡಗಳಿಗೆ ಅಳವಡಿಸಲು ₹550 ಕೋಟಿ ಅಗತ್ಯವಿದೆ. ನಿಯಮ ಸಡಿಲಿಕೆ ಕುರಿತು ಅಗ್ನಿ ಶಾಮಕ ಸೇವೆಯ ಎಡಿಜಿಪಿ ಜತೆ ಮಾತುಕತೆ ನಡೆದಿದೆ
ದಿನೇಶ್‌ ಗುಂಡೂರಾವ್, ಆರೋಗ್ಯ ಸಚಿವ (ಪ್ರಶ್ನೆ: ಧನಂಜಯ ಸರ್ಜಿ, ಬಿಜೆಪಿ ಸದಸ್ಯ)
ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ದುಬಾರಿ ದರ ನಿಗದಿ ಮಾಡಲಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ದುಪ್ಪಟ್ಟು ಇದೆ. ಗ್ರಾಹಕರ ದರೋಡೆಗೆ ಸರ್ಕಾರವೇ ಪರವಾನಗಿ ನೀಡಿದೆ 
ಸಿ.ಟಿ. ರವಿ, ಬಿಜೆಪಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT