‘ಕನ್ನಡ ಉಚ್ಚಾರಣೆ ಉತ್ತಮಗೊಳಿಸಿಕೊಳ್ಳುವೆ’
ಕನ್ನಡ ಮಾತಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದು ನೋವಾಗಿಲ್ಲ. ಉಚ್ಚಾರಣೆ ಇನ್ನಷ್ಟು ಉತ್ತಮಗೊಳಿಸಿಕೊಳ್ಳಲು ಪ್ರಯತ್ನಿಸಿರುವೆ. ದಕ್ಷಿಣ ಕನ್ನಡದಲ್ಲಿ ಹಲವರು ತುಳು ಮುಸ್ಲಿಮರು ಬ್ಯಾರಿ ಕ್ರೈಸ್ತರು ಕೊಂಕಣಿ ಬಳಸುತ್ತಾರೆ. ಮನೆಯಲ್ಲಿ ಬಹುಭಾಷೆ ಮಾತಾಡುವ ಜನರು ಶಾಲೆಯಲ್ಲಷ್ಟೆ ಕನ್ನಡ ಕಲಿಯುತ್ತಾರೆ. ಇದರಿಂದ ಬಳಕೆಯಲ್ಲಿ ಸ್ಪಷ್ಟತೆ ಕಾಣುವುದಿಲ್ಲ. ಟ್ರೋಲ್ ಮಾಡುವವರಿಗೆ ಇದೆಲ್ಲ ಅರ್ಥವಾಗುವುದಿಲ್ಲ ಎಂದು ಖಾದರ್ ಪ್ರತಿಕ್ರಿಯಿಸಿದರು.