ಕಲಾಪ ಮುಂದೂಡಿಕೆಯಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಪತ್ರವೊಂದನ್ನು ಇಟ್ಟುಕೊಂಡು ಒಂದು ವರ್ಷದಿಂದ ತುತ್ತೂರಿ ಊದುತ್ತಿದ್ದಾರೆ. ಈವರೆಗೆ ಒಂದು ಸಣ್ಣ ದೂರನ್ನಾದರೂ ದಾಖಲಿಸಿ ಸೂಕ್ತ ದಾಖಲೆ ನೀಡಬೇಕಿತ್ತಲ್ಲ. ಇಲ್ಲಿಯವರೆಗೆ ಯಾಕೆ ದಾಖಲೆಗಳನ್ನು ಕೊಟ್ಟಿಲ್ಲ? ಲಂಚ ಕೊಡಲು ಎಲ್ಲಿಂದ, ಯಾರಿಂದ ಒತ್ತಡ ಬಂದಿತ್ತು ಎಂಬ ಬಗ್ಗೆ ಸಣ್ಣ ಚೀಟಿಯಲ್ಲಿ ದೂರು ಕೊಡಲಿ ತನಿಖೆ ಮಾಡಿಸುತ್ತೇನೆ. ಇಲ್ಲವೇ ಲೋಕಾಯುಕ್ತಕ್ಕಾದರೂ ದೂರು ಕೊಡಲಿ’ ಎಂದು ಬೊಮ್ಮಾಯಿ ಸವಾಲು ಹಾಕಿದರು.