ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಪ್ರವಾಹದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸೇನಾ ಹೆಲಿಕ್ಯಾಪ್ಟರ್ ಮೂಲಕಅಗತ್ಯ ವಸ್ತುಗಳ ರವಾನೆ ಮತ್ತು ಏರ್ ಲಿಫ್ಟ್ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ರಕ್ಷಣಾ ತಂಡದ ಗಮನ ಸೆಳೆಯಲು ಈಕೆಳಗಿನ ಕ್ರಮಗಳನ್ನುಅನುಸರಿಸಬೇಕೆಂದು ಭಾರತೀಯ ಸೇನೆ ಪ್ರಕಟಣೆ ಹೊರಡಿಸಿದೆ.
* ಹೆಲಿಕಾಪ್ಟರ್ ಹಾರಾಟವನ್ನು ಗಮನಿಸಿ.
* ಹೆಲಿಕಾಪ್ಟರ್ನಲ್ಲಿನ ತಂಡದ ಗಮನ ಸೆಳೆಯಲು 1. ಎತ್ತರದ ಪ್ರದೇಶಕ್ಕೆ ಬಂದು ಸೇರಿ. 2.ಬೆಂಕಿ ಅಥವಾ ಹೊಗೆ ಹಾಕಿ 3.ಇಲ್ಲವೇ ಬಣ್ಣದ ಬಟ್ಟೆಗಳನ್ನು ಹಾರಿಸಿ
ಐದಾರು ಹೆಲಿಕಾಪ್ಟರ್ಗಳು ತೀವ್ರ ಪ್ರವಾಹ ಪೀಡಿತ ಪ್ರದೇಶದಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಹಾರಾಟ ನಡೆಸಲಿವೆ. ಈ ಹಾರಾಟದ ವೇಳೆ ಕುಡಿಯುವ ನೀರು ಮತ್ತು ಪರಿಹಾರ ಸಾಮಗ್ರಿಗಳನ್ನೂ ವಿತರಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.