‘ಕೆಪಿಎಸ್ಸಿ ಪರೀಕ್ಷೆ ಇದೇ 12 ರಿಂದ ಆರಂಭವಾಗುತ್ತದೆ. ವಿಜ್ಞಾನ ಎಂಟು ವಿಷಯಗಳ ಪರೀಕ್ಷೆಗಳು ನಡೆಯಲಿದೆ. ಆದರೆ, ನೆಟ್ ಪರೀಕ್ಷೆ ಬೆಂಗಳೂರಿನಲ್ಲಿ ಮಾತ್ರ ನಡೆಯುತ್ತದೆ. ಇಡೀ ರಾಜ್ಯದ ಅಭ್ಯರ್ಥಿಗಳು ಬೆಂಗಳೂರಿಗೇ ಬರಬೇಕು. ಕೆಪಿಎಸ್ಸಿ ಪರೀಕ್ಷೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಯುತ್ತದೆ. ವಿಜಯಪುರ, ಬೀದರ್ ಮತ್ತು ಕಲಬುರ್ಗಿ ಜಿಲ್ಲೆಯ ಅಭ್ಯರ್ಥಿಗಳು ಧಾರವಾಡ ಪರೀಕ್ಷಾ ಕೇಂದ್ರಗಳಲ್ಲಿ ಕೆಪಿಎಸ್ಸಿಗೆ ಪರೀಕ್ಷೆ ಬರೆದರೆ, ನೆಟ್ ಪರೀಕ್ಷೆಗೆ ಬೆಂಗಳೂರಿಗೇ ಬರಬೇಕು. ಪರಿಸ್ಥಿತಿ ಈ ರೀತಿ ಇರುವಾಗ ಎರಡೂ ಪರೀಕ್ಷೆಯನ್ನು ಒಂದೇ ದಿನ ಬರೆಯುವುದು ಹೇಗೆ. ಇದರಿಂದ ನಮ್ಮ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದೆ’ ಎಂದರು.