<p><strong>ಬೆಂಗಳೂರು:</strong> ಇಲ್ಲಿ ಯಾರಿಗೂ ಯಾರು ಬೆಗ್ಗರ್ಸ್ ಅಲ್ಲ. ಜೆಡಿಎಸ್ ಪಕ್ಷ ಬೆಗ್ಗರ್ಸ್ ಅಲ್ಲ. ಕಾಂಗ್ರೆಸ್ ಪಕ್ಷ ಕೂಡ ಬೆಗ್ಗರ್ಸ್ ಅಲ್ಲ. ನಮ್ಮದು ಮೈತ್ರಿ ಸರ್ಕಾರ ಎಂದು ಉಪಮುಖ್ಯಮಂತ್ರಿ ಪರಮೇಶ್ವರ್ ಹೇಳಿದರು.</p>.<p>ಸೀಟು ಹಂಚಿಕೆ ಸಂಬಂಧ ನಮ್ಮಲ್ಲಿ ಇನ್ನು ಚರ್ಚೆಯಾಗಿಲ್ಲ, ಎರಡುಅಥವಾ ಮೂರು ಸೀಟ್ ಕೊಡ್ತಾರೆ ಎಂದು ಕುಮಾರಸ್ವಾಮಿಗೆ ಯಾರೋ ಹೇಳಿದ್ದಾರೆ ಅದಕ್ಕೆ ಅವರು ಆ ಹೇಳಿಕೆ ನೀಡಿರಬಹುದು. ಸ್ಥಾನ ಹಂಚಿಕೆ ಕುರಿತುಆದಷ್ಟು ಬೇಗ ತೀರ್ಮಾನ ಮಾಡುತ್ತೇವೆ ಎಂದು ಪರಮೇಶ್ವರ್ ಹೇಳಿದರು.</p>.<p><strong>ಸುಮಲತಾ ಅಂಬರೀಷ್ ಸಿದ್ದರಾಮಯ್ಯ ಭೇಟಿ ವಿಚಾರ:</strong>ಸುಮಲತಾ ಅವರಿಗೆ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅವರು ಸಿದ್ದರಾಮಯ್ಯ ಜೊತೆಯಲ್ಲಿ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ತೀರ್ಮಾನ ಕೈಗೊಳ್ಳಲಿದೆ ಎಂದರು.</p>.<p><strong>ಸ್ಕ್ರೀನಿಂಗ್ ಕಮಿಟಿ: </strong>ಎಲ್ಲ ರಾಜ್ಯಗಳಲ್ಲೂ ಒಂದು ಸ್ಕ್ರೀನಿಂಗ್ ಕಮಿಟಿ ಮಾಡಲಾಗಿದೆ. ಇದಕ್ಕೆ ಪ್ರಧಾನ ಕಾರ್ಯದರ್ಶಿ, ಸಿಎಲ್ ಪಿ ನಾಯಕರು, ಕೆಪಿಸಿಸಿ ಅಧ್ಯಕ್ಷರು ಸದಸ್ಯರಾಗಿರುತ್ತಾರೆ. ಉದ್ದೇಶಪೂರ್ವಕವಾಗಿ ನನ್ನ ಬಿಟ್ಟಿದ್ದಾರೆಎಂಬುದು ಸುಳ್ಳು, ಪಕ್ಷದ ತೀರ್ಮಾನದಂತೆ ನಡೆಯುತ್ತೇನೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಇಲ್ಲಿ ಯಾರಿಗೂ ಯಾರು ಬೆಗ್ಗರ್ಸ್ ಅಲ್ಲ. ಜೆಡಿಎಸ್ ಪಕ್ಷ ಬೆಗ್ಗರ್ಸ್ ಅಲ್ಲ. ಕಾಂಗ್ರೆಸ್ ಪಕ್ಷ ಕೂಡ ಬೆಗ್ಗರ್ಸ್ ಅಲ್ಲ. ನಮ್ಮದು ಮೈತ್ರಿ ಸರ್ಕಾರ ಎಂದು ಉಪಮುಖ್ಯಮಂತ್ರಿ ಪರಮೇಶ್ವರ್ ಹೇಳಿದರು.</p>.<p>ಸೀಟು ಹಂಚಿಕೆ ಸಂಬಂಧ ನಮ್ಮಲ್ಲಿ ಇನ್ನು ಚರ್ಚೆಯಾಗಿಲ್ಲ, ಎರಡುಅಥವಾ ಮೂರು ಸೀಟ್ ಕೊಡ್ತಾರೆ ಎಂದು ಕುಮಾರಸ್ವಾಮಿಗೆ ಯಾರೋ ಹೇಳಿದ್ದಾರೆ ಅದಕ್ಕೆ ಅವರು ಆ ಹೇಳಿಕೆ ನೀಡಿರಬಹುದು. ಸ್ಥಾನ ಹಂಚಿಕೆ ಕುರಿತುಆದಷ್ಟು ಬೇಗ ತೀರ್ಮಾನ ಮಾಡುತ್ತೇವೆ ಎಂದು ಪರಮೇಶ್ವರ್ ಹೇಳಿದರು.</p>.<p><strong>ಸುಮಲತಾ ಅಂಬರೀಷ್ ಸಿದ್ದರಾಮಯ್ಯ ಭೇಟಿ ವಿಚಾರ:</strong>ಸುಮಲತಾ ಅವರಿಗೆ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅವರು ಸಿದ್ದರಾಮಯ್ಯ ಜೊತೆಯಲ್ಲಿ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ತೀರ್ಮಾನ ಕೈಗೊಳ್ಳಲಿದೆ ಎಂದರು.</p>.<p><strong>ಸ್ಕ್ರೀನಿಂಗ್ ಕಮಿಟಿ: </strong>ಎಲ್ಲ ರಾಜ್ಯಗಳಲ್ಲೂ ಒಂದು ಸ್ಕ್ರೀನಿಂಗ್ ಕಮಿಟಿ ಮಾಡಲಾಗಿದೆ. ಇದಕ್ಕೆ ಪ್ರಧಾನ ಕಾರ್ಯದರ್ಶಿ, ಸಿಎಲ್ ಪಿ ನಾಯಕರು, ಕೆಪಿಸಿಸಿ ಅಧ್ಯಕ್ಷರು ಸದಸ್ಯರಾಗಿರುತ್ತಾರೆ. ಉದ್ದೇಶಪೂರ್ವಕವಾಗಿ ನನ್ನ ಬಿಟ್ಟಿದ್ದಾರೆಎಂಬುದು ಸುಳ್ಳು, ಪಕ್ಷದ ತೀರ್ಮಾನದಂತೆ ನಡೆಯುತ್ತೇನೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>